LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಮ್ಯಾಥ್ಯೂಸ್ ಸಮಯ ವ್ಯರ್ಥ ಮಾಡಿದ್ದಕ್ಕೂ ಕಾರಣವಿದೆ: ಮೆಂಡಿಸ್

ನವದೆಹಲಿ: ಬಾಂಗ್ಲಾದೇಶ ವಿರುದ್ಧ ಏಕದಿನ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಲಂಕಾ ಬ್ಯಾಟಿಗ ಆಂಜಲೋ ಮ್ಯಾಥ್ಯೂಸ್ ಟೈಮ್ಡ್ ಔಟ್ ಆಗಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಆದರೆ ಮ್ಯಾಥ್ಯೂಸ್ ತಡ ಮಾಡಿದ್ದೇಕೆ ಎಂಬ ಬಗ್ಗೆ ಲಂಕಾ ನಾಯಕ ಕುಸಲ್ ಮೆಂಡಿಸ್ ಪಂದ್ಯದ ನಂತರ ಸ್ಪಷ್ಟನೆ ನೀಡಿದ್ದಾರೆ.

ಈ ಪಂದ್ಯವನ್ನು ಬಾಂಗ್ಲಾ 3 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು. ಅದಾದ ಬಳಿಕ ಮಾತನಾಡಿದ ಕುಸಲ್ ಮೆಂಡಿಸ್ ಮ್ಯಾಥ್ಯೂಸ್ ಕ್ರೀಸ್ ಗೆ ಬರಲು ತಡ ಮಾಡಲು ನಿಜ ಕಾರಣವೇನೆಂದು ತಿಳಿಸಿದ್ದಲ್ಲದೆ, ಬಾಂಗ್ಲಾ ವರ್ತನೆಯನ್ನು ಆಕ್ಷೇಪಿಸಿದ್ದಾರೆ.

‘ಇದು ನಿಜಕ್ಕೂ ಬೇಸರದ ಸಂಗತಿ. ಆಂಜಲೋ ಕ್ರೀಸ್ ಗೆ ಬಂದಾಗ 5 ಸೆಕೆಂಡ್ ಬಾಕಿಯಿತ್ತು. ಆಗಲೇ ಅವರಿಗೆ ಹೆಲ್ಮೆಟ್ ನ ಪಟ್ಟಿ ಬಿರುಕು ಬಂದಿದೆ ಎಂದು ಗೊತ್ತಾಗಿದ್ದು. ಬೇಸರದ ಸಂಗತಿ ಎಂದರೆ ಅಂಪಾಯರ್ ಕೂಡಾ ಸರಿಯಾದ ನಿರ್ಧಾರ ತೆಗೆದುಕೊಂಡು ಸಹಾಯ ಮಾಡಲಿಲ್ಲ’ ಎಂದಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST