LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಮೈಂಡ್ ಗೇಮ್ ಗಾರುಡಿಗ

ಶ್ರೀ ಕೃಷ್ಣ ಪರಮಾತ್ಮನನ್ನು ಗಾರುಡಿಗ ಅಂತ ಕರೆಯುವುದುಂಟು. ಈಗ ಇದೇ ಹೆಸರಿನಲ್ಲಿ ಹೊಸಬರ ಚಿತ್ರವೊಂದು ಸಿದ್ದಗೊಂಡಿದೆ. ಪ್ರಚಾರದ ಮೊದಲ ಹಂತವಾಗಿ ಹಾಡು ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನಡೆಯಿತು.

ಸೂಪರ್ ಸ್ಟಾರ್ ರಜನಿಕಾಂತ್ ಆಪ್ತ ಸ್ನೇಹಿತ ರಾಜ್ಬಹದ್ದೂರ್ ಸಮಾರಂಭಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು. ವಿಜ್ಘಾನಿ, ಸದ್ಯ ವಕೀಲರಾಗಿರುವ ಡಾ.ಎಂ.ವೆಂಕಟಸ್ವಾಮಿ ಅವರು ಎಂ.ವಿ.ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದು, ವಿಧಾ.ಆರ್ ರಚಿಸಿ ಆಕ್ಷನ್ ಕಟ್ ಹೇಳಿದ್ದಾರೆ.

ರಕ್ತ ಒಂದು ತೊಟ್ಟು ಕೈ ಮಾಡಿಕೊಳ್ಳದೆ ಯುದ್ದವನ್ನು ಗೆಲ್ಲಿಸೋ ಮಹಾಪುರುಷ. ಅದೇ ರೀತಿ ಚಿತ್ರದ ಕಥೆಯಲ್ಲಿ ರೈತನಾಗಿದ್ದವನು ಸಿಟಿಗೆ ಬಂದು ತನ್ನ ಬುದ್ದಿಶಕ್ತಿಯಿಂದ ಚಕ್ರವ್ಯೂಹವನ್ನು ಯಾವ ರೀತಿ ಭೇದಿಸುತ್ತಾನೆ. ಶ್ರೀಮಂತ ಹುಡುಗರು ಅಚಾನಕ್ ಅಪಘಾತ ಮಾಡಿ ಮುಚ್ಚಿಟ್ಟು ನೆಮ್ಮದಿಯಿಂದ ಇರುತ್ತಾರೆ.

ಆದರೆ ಅವರ ಬದುಕಿನಲ್ಲಿ ಬದಲಾವಣೆಗಳು ಆಗುತ್ತದೆ. ಚಾಣಾಕ್ಷತನದಿಂದ ಇವರುಗಳು ಮಾಡಿದ ಅಪರಾದ ಸ್ಥಳಕ್ಕೆ ಕರೆದುಕೊಂಡು ಅವರಿಂದಲೇ ತಪ್ಪು ಒಪ್ಪಿಕೊಳ್ಳುವಂತೆ ಮಾಡಿಸುವಲ್ಲಿ ಗೆಲುವು ಕಾಣುತ್ತಾನೆ. ಇದರಿಂದ ಅವರುಗಳಿಗೆ ಶಿಕ್ಷೆಯಾಗುತ್ತದಾ? ಎಷ್ಟೇ ಕೋಟಿ ದುಡ್ಡು ಇದ್ದರೂ ಆ ಕ್ಷಣದಲ್ಲಿ ಅದು ಉಪಯೋಗಕ್ಕೆ ಬರುವುದಿಲ್ಲ. ಮನಸ್ಸಾಕ್ಷಿಗಿಂತ ಯಾವುದು ದೊಡ್ಡದಿಲ್ಲ ಎಂಬುದನ್ನು ತೋರಿಸಲಾಗಿದೆ.
ಹಳ್ಳಿ ಹುಡುಗನಾಗಿ ಮಾಗಡಿ ಮೂಲದ ರುದ್ವಿನ್ ನಾಯಕ. ಎರಡು ಶೇಡ್ಗಳಲ್ಲಿ ನಾಯಕಿಯಾಗಿ ಮಾನಸ.

ಉಳಿದಂತೆ ಅರ್ಚನಾ, ಸೋನು, ಅರ್ಜುನ್, ಗಿರೀಶ್, ಮೋಹನ್, ಸಂಜು ಮುಂತಾದವರು ನಟಿಸಿದ್ದಾರೆ. ಸಂಗೀತ ಎಂ.ಸಂಜೀವ್ರಾವ್, ಛಾಯಾಗ್ರಹಣ ಅನಿರುದ್ದ್-ಭರತ್, ಸಂಕಲನ ಭಾರ್ಗವ್-ಚೆಲುವಮೂರ್ತಿ, ಸಾಹಿತ್ಯ ವಿಧಾ.ಆರ್-ಎಂ.ಸಂಜೀವ್ರಾವ್ ಅವರದಾಗಿದೆ. ಬೆಂಗಳೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಪೇಟೆ, ಆನೇಕಲ್, ಕನಕಪುರ, ಹಾರೋಹಳ್ಳಿ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.

ಬಡವರ ಮಕ್ಕಳು ಬರ್ತಾ ಇದ್ದೀವಿ. ಪ್ರೀತಿ ಕೊಡಿ ಎಂದು ಹೇಳಿಕೊಂಡಿರುವ ಸಿನಿಮಾವನ್ನು ಮುಂದಿನ ತಿಂಗಳು ತೆರೆಗೆ ತರಲು ತಂಡವು ಯೋಜನೆ ರೂಪಿಸಿಕೊಂಡಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು