LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಆಟಗಾರರ ಗಲಾಟೆ

ನ್ಯೂಯಾರ್ಕ್: ಫಿಫಾ ವಿಶ್ವಕಪ್ 2026ರ ಫೈನಲ್‌ನಲ್ಲಿ ಸ್ಪೇನ್ ವಿರುದ್ಧ ಸೋತ ಬಳಿಕ ಅರ್ಜೆಂಟೀನಾ ಆಟಗಾರರು ಮೈದಾನದಲ್ಲಿ ನಡೆಸಿದ
ಗಲಾಟೆ ಮತ್ತು ಅಸಭ್ಯ ವರ್ತನೆಗೆ ಸಂಬಂಧಿಸಿದಂತೆ ಫಿಫಾ ತನಿಖೆ ಆರಂಭಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಹೌದು.. ನಿನ್ನೆ ನಡೆದ ಫಿಫಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ 1-0 ಅಂತರದಲ್ಲಿ ಸ್ಪೇನ್ ತಂಡ ಹಾಲಿ ಚಾಂಪಿಯನ್ ಅರ್ಜೆಂಟೀನಾ ತಂಡವನ್ನು ಮಣಿಸಿ 2ನೇ ಬಾರಿಗೆ ವಿಶ್ವಕಪ್ ಟ್ರೋಫಿಗೆ ಮುತ್ತಿಟ್ಟಿತು. 106ನೇ ನಿಮಿಷದಲ್ಲಿ ಫರ‍್ರಾನ್ ಟೊರೆಸ್ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಸ್ಪೇನ್ 1-0 ಅಂತರದಲ್ಲಿ ಅರ್ಜೆಂಟೀನಾವನ್ನು ಮಣಿಸಿ ವಿಶ್ವಕಪ್ ಪ್ರಶಸ್ತಿ ಗೆದ್ದಿತ್ತು. ಪಂದ್ಯದುದ್ದಕ್ಕೂ ಸ್ಪೇನ್ ಚೆಂಡಿನ ಮೇಲಿನ ಹಿಡಿತ ಮತ್ತು ಪಂದ್ಯದ ವೇಗವನ್ನು ಸಂಪೂರ್ಣ ನಿಯಂತ್ರಿಸಿತ್ತು. ಹಲವು ಅವಕಾಶಗಳನ್ನು ಕೈಚೆಲ್ಲಿದ ಬಳಿಕ ಹೆಚ್ಚುವರಿ ವೇಳೆಯಲ್ಲಿ ಟೊರೆಸ್ ನಿರ್ಣಾಯಕ ಗೋಲು ದಾಖಲಿಸಿ ಸ್ಪೇನ್‌ಗೆ ಎರಡನೇ ವಿಶ್ವಕಪ್ ಕಿರೀಟ ತಂದುಕೊಟ್ಟರು.ಅಂತಿಮ ಸೀಟಿ ಬಳಿಕ ಮೈದಾನದಲ್ಲಿ ಗಲಾಟೆ: ಆದರೆ ಪಂದ್ಯ ಮುಗಿದ ಕೂಡಲೇ ಸಂಭ್ರಮದ ಬದಲು ಮೈದಾನದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಎರಡೂ ತಂಡಗಳ ಆಟಗಾರರ ನಡುವೆ ತಳ್ಳಾಟ, ನೂಕಾಟ ಮತ್ತು ವಾಗ್ವಾದ ನಡೆದಿದ್ದು, ಅರ್ಜೆಂಟೀನಾದ ಮಿಡ್‌ಫೀಲ್ಡರ್ ಲಿಯಾಂಡ್ರೊ ಪರೆಡೆಸ್, ಸ್ಪೇನ್ ಆಟಗಾರ ಎರಿಕ್ ಗಾರ್ಸಿಯಾ ಅವರ ಕುತ್ತಿಗೆಯನ್ನು ಹಿಡಿದ ದೃಶ್ಯಗಳು ವೈರಲ್ ಆಗಿವೆ. ಇದಲ್ಲದೆ, ಅರ್ಜೆಂಟೀನಾ ರಕ್ಷಣಾ ಆಟಗಾರ ನಹುಯೆಲ್ ಮೊಲಿನಾ, ಸ್ಪೇನ್ ಆಟಗಾರನ ಹೊಟ್ಟೆಗೆ ಹೊಡೆಯಲು ಯತ್ನಿಸಿದರೆಂದು ಆರೋಪಿಸಲಾಗಿದೆ.
ಪರೆಡೆಸ್ ಕೇವಲ ಎರಿಕ್ ಗಾರ್ಸಿಯಾ ಅವರೊಂದಿಗಷ್ಟೇ ಅಲ್ಲದೆ, ಸ್ಪೇನ್‌ನ ಯುವ ಆಟಗಾರ ಗಾವಿ ಅವರನ್ನು ನೆಲಕ್ಕುರುಳಿಸಿ, ಮುಖಕ್ಕೆ ಹೊಡೆದು, ಅವರತ್ತ ಬೂಟನ್ನೂ ಒದೆಯಲು ಯತ್ನಿಸಿದಂತೆ ವಿಡಿಯೊಗಳಲ್ಲಿ ಕಂಡುಬಂದಿದೆ. ಇದೇ ವೇಳೆ, ಮೊಲಿನಾ ಸ್ಪೇನ್ ನಾಯಕ ರೊಡ್ರಿ ಅವರತ್ತ ಮುಷ್ಟಿ ಬಿಗಿಮಾಡಿ ಬೀಸಲು ಯತ್ನಿಸಿದ್ದು, ಇದರಿಂದ ರೊಡ್ರಿ ಆಕ್ರೋಶ ವ್ಯಕ್ತಪಡಿಸಿ ಅರ್ಜೆಂಟೀನಾ ಆಟಗಾರನೊಂದಿಗೆ ವಾಗ್ವಾದ ನಡೆಸಿದರು ಎನ್ನಲಾಗಿದೆ.
'ಇಂತಹ ವರ್ತನೆಗೆ ಫುಟ್‌ಬಾಲ್‌ನಲ್ಲಿ ಸ್ಥಾನವಿಲ್ಲ': ಇಂಗ್ಲೆAಡ್‌ನ ಮಾಜಿ ನಾಯಕ ಅಲನ್ ಶಿಯರರ್, ಬಿಬಿಸಿಯೊಂದಿಗೆ ಮಾತನಾಡುತ್ತಾ ಅರ್ಜೆಂಟೀನಾ ಆಟಗಾರರ ವರ್ತನೆಯನ್ನು ತೀವ್ರವಾಗಿ ಖಂಡಿಸಿದರು."ಪರೆಡೆಸ್ ಎದುರಾಳಿಯ ಮುಖದತ್ತ ಎರಡು-ಮೂರು ಬಾರಿ ಮುಷ್ಟಿ ಬೀಸಿದರು. ಇಂತಹ ವರ್ತನೆಗೆ ಫುಟ್‌ಬಾಲ್‌ನಲ್ಲಿ ಯಾವುದೇ ಸ್ಥಾನವಿಲ್ಲ. ಸೋಲು ಎಷ್ಟು ನೋವುಂಟು ಮಾಡುತ್ತದೆ ಎಂಬುದು ನಮಗೆ ಗೊತ್ತು. ಆದರೆ ಸೋಲನ್ನೂ ಒಪ್ಪಿಕೊಳ್ಳುವ ಒಂದು ರೀತಿಯಿದೆ. ಅರ್ಜೆಂಟೀನಾದಿAದ ಇಂತಹ ಘಟನೆಗಳನ್ನು ನಾವು ಹಲವು ಬಾರಿ ನೋಡಿದ್ದೇವೆ. ಅಂತಿಮ ಸೀಟಿ ಬಳಿಕ ಅವರ ಪ್ರತಿಕ್ರಿಯೆ ಅತ್ಯಂತ ಬೇಸರದ ಸಂಗತಿ" ಎಂದು ಶಿಯರರ್ ಹೇಳಿದರು. ಟ್ರೋಫಿ ಪ್ರದಾನದ ವೇಳೆ ಬೆನ್ನು ತಿರುಗಿಸಿದ ಆರೋಪ: ಇದೊಂದೇ ಅಲ್ಲದೆ, ಸ್ಪೇನ್ ಆಟಗಾರರು ವಿಶ್ವಕಪ್ ಟ್ರೋಫಿ ಸ್ವೀಕರಿಸುತ್ತಿದ್ದ ವೇಳೆ ಅರ್ಜೆಂಟೀನಾ ತಂಡ ಟ್ರೋಫಿ ಪ್ರದಾನ ಸಮಾರಂಭದತ್ತ ಬೆನ್ನು ತಿರುಗಿಸಿ ನಿಂತಿತ್ತು ಎಂಬ ಆರೋಪವೂ ಕೇಳಿಬಂದಿದೆ. ಟಾಕ್‌ಸ್ಪೋರ್ಟ್ ವರದಿ ಪ್ರಕಾರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಮ್ಮುಖದಲ್ಲಿ ಟ್ರೋಫಿ ಪ್ರದಾನ ಸಮಾರಂಭ ನಡೆಯುತ್ತಿದ್ದಾಗ ಈ ಘಟನೆ ನಡೆದಿದೆ. ಇಂಗ್ಲೆAಡ್‌ನ ಮಾಜಿ ಆಟಗಾರ ಸ್ಟುವರ್ಟ್ ಪಿಯರ್ಸ್ ಈ ಕುರಿತು ಪ್ರತಿಕ್ರಿಯಿಸಿ, "ಸ್ಪೇನ್ ತಂಡ ಟ್ರೋಫಿ ಎತ್ತಲು ಸಿದ್ಧವಾಗಿದ್ದಾಗ, ಅರ್ಜೆಂಟೀನಾ ತಂಡದ ಎಲ್ಲಾ ಆಟಗಾರರು ಟ್ರೋಫಿಯತ್ತ ಬೆನ್ನು ತಿರುಗಿಸಿ ನಿಂತಿದ್ದರು" ಎಂದು ಹೇಳಿದ್ದಾರೆ. ಫಿಫಾ ತನಿಖೆ: ಸ್ಕೆöÊ ನ್ಯೂಸ್ ವರದಿಯ ಪ್ರಕಾರ, ಫೈನಲ್ ಬಳಿಕ ಅರ್ಜೆಂಟೀನಾ ಆಟಗಾರರ ವರ್ತನೆ ಮತ್ತು ಶಿಸ್ತು ಉಲ್ಲಂಘನೆ ಕುರಿತು ಫಿಫಾ ತನಿಖೆ ನಡೆಸಲು ಸಜ್ಜಾಗಿದೆ. ಹೀಗಾಗಿ ಫೈನಲ್ ಬಳಿಕ ನಡೆದ ಈ ಬೆಳವಣಿಗೆಗಳು ವಿಶ್ವ ಫುಟ್‌ಬಾಲ್ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಫಿಫಾ ತನಿಖೆಯ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು