LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಶಿಕ್ಷಕರ ಅಚಲ ಬದ್ಧತೆ-ಶ್ರಮ ಗೌರವಿಸಲು `ಗುರುಸಮರ್ಪಣೆ’

ಬೆಂಗಳೂರು: ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯವು ಶೈಕ್ಷಣಿಕ ಉತ್ಕೃಷ್ಟತೆಯ ಉಜ್ವಲ ಉದಾಹರಣೆ ಯಾಗಿದೆ, ಇದು ಶಿಕ್ಷಕರ ಅಚಲ ಬದ್ಧತೆ ಮತ್ತುಶ್ರಮವನ್ನು ಗೌರವಿಸುವ ಗೌರವಾನ್ವಿತ ಸಂದರ್ಭವಾದ ಗುರುಸಮರ್ಪಣೆಯನ್ನು ಡಿಸೆಂಬರ್ 16, 2023 ರಂದು ನಡೆಸಿತು. ಸಮಾರಂಭವು ಬೆಳಿಗ್ಗೆ 10:30 ರಿಂದ 3 ರವರೆಗೆ ನಡೆಯಿತು. ಶಿಕ್ಷಕ ಭ್ರಾತೃತ್ವದ ಅಮೂಲ್ಯ ಸಾಧನೆಗಳನ್ನು ಗೌರವಿಸುವ ಮಹತ್ವದ ಸಂದರ್ಭವಾಗಿತ್ತು.

ಗುರುಸಮರ್ಪಣೆಯ ವಿಶೇಷವೆಂದರೆ, ಗೌರವಾನ್ವಿತ ಪ್ರಾಂಶುಪಾಲರು ಮತ್ತು ಸಮರ್ಪಿತ ಶಿಕ್ಷಕರನ್ನು ಸ್ಮರಣಿಕೆನೀಡಿ ಶೈಕ್ಷಣಿಕ ಸಮುದಾಯಕ್ಕೆ ಸಲ್ಲಿಸಿದ ಅಸಾಧಾರಣ ಸೇವೆಯನ್ನು ಗುರುತಿಸಲಾಯಿತು. ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ನಿಸ್ಸಾರ್ ಅಹಮದ್ ಮತ್ತು ಪ್ರೆಸಿಡೆನ್ಸಿಗ್ರೂಪ್ ಆಫ್ ಇನ್‍ಸ್ಟಿಟ್ಯೂಷನ್‍ನ ಉಪಾಧ್ಯಕ್ಷರಾದ ಸುಹೇಲ್ ಅಹಮದ್, ಉಪಕುಲಪತಿ ಡಾ.ಅನುಭಾಸಿಂಗ್ ಮತ್ತು ರಿಜಿಸ್ಟ್ರಾರ್ ಡಾ.ಸಮೀನಾ ನೂರ್ ಅಹ್ಮದ್ ಪನಾಲಿ ಅವರು ಕಾರ್ಯಕ್ರಮವನ್ನು ಅಲಂಕರಿಸಿ ಗೌರವಾನ್ವಿತ ಸಂದರ್ಶಕರನ್ನುದ್ದೇಶಿಸಿ ಮಾತನಾಡಿದರು.

ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ಕುಲಪತಿ ಡಾ.ನಿಸ್ಸಾರ್ ಅಹಮದ್ ಮಾತನಾಡಿ, ಶಿಕ್ಷಕರು ಪ್ರಗತಿಪರ ಸಮಾಜದ ವಾಸ್ತುಶಿಲ್ಪಿಗಳು, ನಮ್ಮ ಭವಿಷ್ಯವನ್ನು ರೂಪಿಸುವ ಮನಸ್ಸುಗಳನ್ನು ರೂಪಿಸುತ್ತಾರೆ. ಗುರುಸಮರ್ಪಣೆಯು ಅವರ ಅವಿರತ ಪ್ರಯತ್ನಗಳಿಗೆ ಹೃತ್ಪೂರ್ವಕ ಗೌರವವಾಗಿದೆ ಮತ್ತು ಬುದ್ಧಿಶಕ್ತಿ ಮತ್ತು ಚಾರಿತ್ರ್ಯವನ್ನು ಫೋಷಿಸುವಲ್ಲಿ ಅವರ ಪ್ರಮುಖ ಪಾತ್ರದ ಅಂಗೀಕಾರವಾಗಿದೆ ಎಂದರು.
ಸುಹೇಲ್ ಅಹ್ಮದ್ ಅವರು, ಶಿಕ್ಷಕರ ಸಮರ್ಪಣೆ ಪಠ್ಯಪುಸ್ತಕಗಳನ್ನು ಮೀರಿದೆ, ಅವರು ಮೌಲ್ಯಗಳನ್ನು ಬಿತ್ತುತ್ತಾರೆ, ವಿಮರ್ಶಾತ್ಮಕ ಚಿಂತನೆಯನ್ನು ಬೆಳೆಸುತ್ತಾರೆ ಮತ್ತು ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಕುತೂಹಲದ ಜ್ವಾಲೆಯನ್ನು ಹೊತ್ತಿಸುತ್ತಾರೆ ಎಂದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು