LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Local News

ಮಂದಿರವಲ್ಲೇ ಕಟ್ಟಿದೆವು.. ಕೃತಿ ಬಿಡುಗಡೆ

ಬೆಂಗಳೂರು: ಪ್ರತಿಷ್ಠಿತ ಸ್ನೇಹ ಬುಕ್ ಹೌಸ್ ಹೊರತಂದಿರುವ 500ನೇ ಕೃತಿ "ಮಂದಿರವಲ್ಲೇ ಕಟ್ಟಿದೆವು" ಶ್ರೀರಾಮ ಲಲ್ಲನ ಪ್ರಾಣ ಪ್ರತಿಷ್ಠಾಪನೆಯ ಸುದಿನ ಇಂದು ಸಂಜೆ ಪತ್ರಿಕೆಯ ಕಚೇರಿಯಲ್ಲಿ ಕೃತಿಯನ್ನು ಅನಾವರಣಗೊಳಿಸಲಾಯಿತು.

1528 ರಿಂದ 2024 ರವರೆಗೆ ಅಯೋಧ್ಯ ಆಂದೋಲನ ಸುಮಾರು 496 ವರ್ಷಗಳ ರೋಚಕ ಕಥಾನಕವನ್ನು ಒಳಗೊಂಡಿರುವ ಅತ್ಯಂತ ಹೃದಯಸ್ಪರ್ಶಿ, ಭಾವನಾತ್ಮಕ ಮತ್ತು ಐತಿಹಾಸಿಕ ಘಟನೆಗಳನ್ನು ಹೊಂದಿರುವ ಕೃತಿ ಇದಾಗಿದೆ.

ಶ್ರೀ .ರಮೇಶ್ ಕುಮಾರ್ ನಾಯಕ್ ರವರು ಬರೆದಿರುವ ಈ ಕೃತಿಯಲ್ಲಿ ಭಾರತದ ಧಾರ್ಮಿಕ ವಿಚಾರಗಳನ್ನು ಒಳಗೊಂಡಂತೆ ರಾಮ ಮಂದಿರದ ಕಲ್ಪನೆ ಸಾಕಾರಗೊಳ್ಳುವ ಸುದಿನದವರೆಗೂ ಅನೇಕ ವಿಚಾರಗಳನ್ನು ಆಪ್ತವಾದ ಬರವಣಿಗೆ ಹಾಗೂ ಚಿತ್ರಪಟಗಳ ಮೂಲಕ ಸಹಿತ ಕಟ್ಟಿ ಕೊಟ್ಟಿದ್ದಾರೆ.

ಇದೊಂದು ಸಮಗ್ರ ವಿಚಾರಧಾರೆಗಳ ಕೃತಿ. ಅಬಕಾರಿ ಇಲಾಖೆಯು ಉಪಯುಕ್ತರಾದ ಡಾ. ಬಿ.ಆರ್ ಹಿರೇಮಠ್, ಇಂದು ಸಂಜೆ ಪತ್ರಿಕೆ ಪ್ರಧಾನ ವ್ಯವಸ್ಥಾಪಕ ಸಂಪಾದಕರಾದ ಡಾ. ಜಿ .ವೈ ಪದ್ಮ ನಾಗರಾಜ್, ಸಾಹಿತಿ ಹಾಗೂ ಚಲನಚಿತ್ರ ನಿರ್ದೇಶಕ ಡಾ.ಗುಣವಂತ ಮಂಜು ಹಾಗೂ ಸ್ನೇಹ ಬುಕ್ ಕೌಸ್ನ ಮಾಲೀಕರಾದ ಶ್ರೀಯುತ ಕೆ. ಬಿ ಪರಶಿವಪ್ಪ ರವರು ಕೃತಿಯನ್ನು ಲೋಕಾರ್ಪಣೆ ಗೊಳಿಸುವ ಮೂಲಕ ನಾಡಿನ ಸರಸ್ವತ ಲೋಕಕ್ಕೆ ಅಮೋಘವಾದ ಕೊಡುಗೆಯನ್ನು ನೀಡಿದ್ದಾರೆ.

ಪ್ರತಿಯೊಬ್ಬ ಭಾರತೀಯರ ಮನೆ ಮತ್ತು ಮನೆಗಳಲ್ಲಿ ಇಡಬಹುದಾದ ಮತ್ತು ಇರಲೇಬೇಕಾದ ಕೃತಿ ಇದಾಗಿದೆ ಎನ್ನುವ ಆಶಯ ಲೇಖಕರಾದ ಶ್ರೀ.ರಮೇಶ್ ಕುಮಾರ್ ನಾಯಕ್ ರವರದ್ದಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು