LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ನೇತಾಜಿಗೆ ನುಡಿನಮನ

ಒಡಿಶಾದ ಕಟಕ್ ನಲ್ಲಿ ಜನಿಸಿದರು
ಮಂದಗಾಮಿಗಳನು ಕುಟುಕಿದರು
ರಾಷ್ಟಾçಭಿಮಾನದಿ ದುಡಿದರು
ಸ್ವಾತಂತ್ರ÷್ಯದ ಘೋಷಣೆ ಕೂಗಿದರು||

"ಆಜಾದ್ ಹಿಂದ್ ಸೇನೆ" ಕಟ್ಟಿದರು
ಸ್ವಾಯತ್ತತೆಯ ಕಿಚ್ಚನು ಹಚ್ಚಿದರು.
ಮಂದಗಾಮಿಗಳ ದೂಷಿಸಿದರು
ಸ್ವಾತಂತ್ರ÷್ಯ ಸೇನೆಗೆ ಶ್ರಮಿಸಿದರು||

ರಕ್ತ ಕೊಡಿ,ಸ್ವಾತಂತ್ರ÷್ಯ ಕೊಡುವೆನೆಂದರು
"ಜೈ ಹಿಂದ್" ಘೋಷಣೆ ಮೊಳಗಿಸಿದರು
ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂದರು
ರಾಷ್ಟಿçÃಯ ಸೇನೆಯನು ಸಂಘಟಿಸಿದರು||

ಪರಾಧೀನತೆಯ ಬಂಧನ ಕಿತ್ತೆಸೆದರು
ಪರಾಕ್ರಮಿಯಾಗಿ ಬಾಳೋಣವೆಂದರು
ಪರದೇಶಿಗಳು "ನೇತಾಜಿ" ಗೆ ಹೆದರಿದರು
ಪರಮ ತೀವ್ರಗಾಮಿಗೆ ಬಸವಳಿದರು ||

ಮಂದಗಾಮಿಗಳು ಸಂಚು ಮಾಡಿದರು
ಸುಭಾಷರ ಜನಪ್ರಿಯತೆಗೆ ಕರುಬಿದರು
ಬೋಸರ ಅಂತ್ಯಕ್ಕೆ ಮುನ್ನುಡಿ ಬರೆದರು
ಪರಾಕ್ರಮಿಯನ್ನು ದೂರವಾಗಿಸಿದರು||

ನಿಮ್ಮಂತಹ ಚಾಣಾಕ್ಷ ಶೌರ್ಯವಂತನಿಗೆ
ಸ್ವಾತAತ್ರ÷್ಯ ಭಾರತೀಯರ ರಾಷ್ಟç ನಮನ
ಮತ್ತೊಮ್ಮೆ ಇಲ್ಲಿಯೇ ಆಗಲಿ ನಿಮ್ಮ ಜನನ
ಅರ್ಪಿಸುವೆ ಪರಾಕ್ರಮ ದಿನದ ನುಡಿನಮನ||
-ಪುಷ್ಪಲತಾ ಹೆಗಡೆ

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST