LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Entertainment News

ಅನಿರೀಕ್ಷಿತ ಅತಿಥಿಗಳು'; ಸೆನ್ಸಾರ್ ಓಕೆ

ವಿವೇಕ್ ಸಿಂಹ ಅಭಿನಯದ 'ಅನಿರೀಕ್ಷಿತ ಅತಿಥಿಗಳು' ಚಿತ್ರವು ಸೆನ್ಸಾರ್ ಪ್ರಕ್ರಿಯೆಯಲ್ಲಿದ್ದ ಎಲ್ಲಾ ಅಡೆತಡೆಗಳನ್ನು ಯಶಸ್ವಿಯಾಗಿ ದಾಟಿ, ಇದೀಗ ಸೆಪ್ಟೆಂಬರ್ ನಲ್ಲಿ ಚಿತ್ರಮಂದಿರಗಳಿಗೆ ಆಗಮಿಸಲು ಸಜ್ಜಾಗಿದೆ.
ಮನೋಜ್ ಅಣ್ಣಯ್ಯ ನಿರ್ದೇಶನ, ಬಿ. ವಿನೋದ್ ಕುಮಾರ್ ನಿರ್ಮಿಸಿರುವ ತೇಜ್ವಿನ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿ ಮೂಡಿಬಂದಿರುವ ಈ ಚಿತ್ರಕ್ಕೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ 'ಎ' ಪ್ರಮಾಣಪತ್ರ ನೀಡಿದೆ. ಹಿಂಸಾತ್ಮಕ ದೃಶ್ಯಗಳಿಗೆ ಸಂಬಂಧಿಸಿದಂತೆ ಕೆಲ ಬದಲಾವಣೆಗಳನ್ನು ಸೂಚಿಸಿದ್ದ ಸೆನ್ಸಾರ್ ಸಮಿತಿಯ ನಿರ್ದೇಶನಗಳನ್ನು ಪಾಲಿಸಿದ ಬಳಿಕ ಚಿತ್ರಕ್ಕೆ ಅಂತಿಮ ಪ್ರಮಾಣಪತ್ರ ಲಭಿಸಿದೆ.
"ಕೊನೆಗೂ ನಮ್ಮ ಚಿತ್ರದ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಂಡಿರುವುದಕ್ಕೆ ತುಂಬಾ ಸಂತೋಷವಾಗಿದೆ. ಚಿತ್ರಕ್ಕೆ ಸಿಬಿಎಫ್‌ಸಿ 'ಎ' ಪ್ರಮಾಣಪತ್ರ ನೀಡಿದೆ. ಚಿತ್ರದ ಹಿಂಸಾತ್ಮಕ ದೃಶ್ಯಗಳಿಗೆ ಸಂಬಂಧಿಸಿದಂತೆ ಕೆಲವು ದೃಶ್ಯಗಳನ್ನು ತೆಗೆದುಹಾಕುವಂತೆ ಸಮಿತಿ ಸೂಚಿಸಿತ್ತು. ಆ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಈಗ ಪ್ರಮಾಣಪತ್ರ ಸಿಕ್ಕಿರುವುದು ಖುಷಿಯ ವಿಚಾರ. ಈ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವನ್ನು ಶೀಘ್ರದಲ್ಲೇ ಪ್ರೇಕ್ಷಕರು ಚಿತ್ರಮಂದಿರದಲ್ಲೇ ಅನುಭವಿಸಲಿ ಎಂಬುದು ನಮ್ಮ ಆಶಯ." ಎಂದು ಹೇಳಿದರು.
ಚಿತ್ರದ ನಿರ್ಮಾಪಕ ಬಿ. ವಿನೋದ್ ಕುಮಾರ್ ಮಾತನಾಡಿ, ಸೆನ್ಸಾರ್ ಪ್ರಕ್ರಿಯೆ ತಂಡಕ್ಕೆ ಸಾಕಷ್ಟು ಪಾಠ ಕಲಿಸಿತು ಎಂದು ಹೇಳಿದರು.
"ಸೆನ್ಸಾರ್ ಪ್ರಕ್ರಿಯೆ ನಮ್ಮ ತಂಡಕ್ಕೆ ನಿಜವಾಗಿಯೂ ಕಠಿಣವಾಗಿತ್ತು. ಯಾವುದೇ ಸಿನಿಮಾ ಮಾಡಿದರೂ ಅಂತಿಮ ನಿರ್ಧಾರ ಸಿಬಿಎಫ್‌ಸಿಯ ಕೈಯಲ್ಲಿರುತ್ತದೆ ಎಂಬ ಅರಿವು ಈ ಪ್ರಕ್ರಿಯೆಯಿಂದ ನಮಗೆ ಇನ್ನಷ್ಟು ಸ್ಪಷ್ಟವಾಯಿತು."
ಇದೇ ವೇಳೆ, ಇಂದಿನ ಕಾಲಘಟ್ಟದಲ್ಲಿ ಚಿತ್ರ ನಿರ್ಮಾಪಕರಿಗೆ ಸಿಬಿಎಫ್‌ಸಿ ಮಾರ್ಗಸೂಚಿಗಳು ಇನ್ನಷ್ಟು ಸ್ಪಷ್ಟವಾಗಿ ತಿಳಿಯುವಂತಾಗಬೇಕು ಎಂಬ ಅಭಿಪ್ರಾಯವನ್ನೂ ವಿನೋದ್ ಕುಮಾರ್ ವ್ಯಕ್ತಪಡಿಸಿದರು. ಚಿತ್ರದ ಕಥಾವಸ್ತುವಿನ ಬಗ್ಗೆ ಮಾತನಾಡಿದ ನಿರ್ದೇಶಕ ಮನೋಜ್ ಅಣ್ಣಯ್ಯ,
"'ಅನಿರೀಕ್ಷಿತ ಅತಿಥಿಗಳು' ಕೇವಲ ಸರ್ವೆÊವಲ್ ಥ್ರಿಲ್ಲರ್ ಮಾತ್ರವಲ್ಲ. ಇದು ಒಂದು ಪ್ರೇಮಕಥೆಯೂ ಹೌದು. ಕಥೆ ತುಂಬಾ ರಾ, ಕ್ರೂರ ಮತ್ತು ಭಾವನಾತ್ಮಕವಾಗಿದೆ. ವಿಶೇಷವಾಗಿ ವಿವೇಕ್ ಸಿಂಹ ಅವರ ಅಭಿನಯ ಚಿತ್ರದ ದೊಡ್ಡ ಆಕರ್ಷಣೆಯಾಗಿದ್ದು, ಸಿನಿಮಾ ಬಿಡುಗಡೆಯಾದ ಬಳಿಕ ಅವರ ಅಭಿನಯವೇ ಎಲ್ಲರ ಚರ್ಚೆಯ ವಿಷಯವಾಗಲಿದೆ." ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರತಂಡ ಮೊದಲಿಗೆ ಜುಲೈ ಅಂತ್ಯದಲ್ಲಿ ಬಿಡುಗಡೆಯನ್ನು ಯೋಜಿಸಿತ್ತು. ಆದರೆ 'ಟಾಕ್ಸಿಕ್' ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾದ ಬಳಿಕ ತಮ್ಮ ಬಿಡುಗಡೆಯನ್ನು ಸೆಪ್ಟೆಂಬರ್‌ಗೆ ಮುಂದೂಡಲು ನಿರ್ಧರಿಸಿತು.
ಈ ಕುರಿತು ನಿರ್ಮಾಪಕ ವಿನೋದ್ ಕುಮಾರ್, "ಮೊದಲಿಗೆ ಜುಲೈ ಅಂತ್ಯದಲ್ಲಿ ಸಿನಿಮಾ ಬಿಡುಗಡೆ ಮಾಡುವ ಯೋಜನೆ ಇತ್ತು. ಆದರೆ 'ಟಾಕ್ಸಿಕ್' ಬಿಡುಗಡೆಯ ದಿನಾಂಕ ಘೋಷಣೆಯಾದ ನಂತರ ನಾವು ಸೆಪ್ಟೆಂಬರ್‌ಗೆ ಬಿಡುಗಡೆ ಮುಂದೂಡಲು ನಿರ್ಧರಿಸಿದೆವು. 'ಟಾಕ್ಸಿಕ್' ಬಿಡುಗಡೆಯ ಬಳಿಕ ಕನ್ನಡ ಪ್ರೇಕ್ಷಕರು ಇನ್ನಷ್ಟು ಸಂಖ್ಯೆಯಲ್ಲಿ ಚಿತ್ರಮಂದಿರಗಳಿಗೆ ಆಗಮಿಸುತ್ತಾರೆ ಎಂಬ ವಿಶ್ವಾಸ ನಮ್ಮದು." ಎಂದು ಹೇಳಿದರು.
ಸೆನ್ಸಾರ್ ಹಂತವನ್ನು ಯಶಸ್ವಿಯಾಗಿ ಮುಗಿಸಿರುವ 'ಅನಿರೀಕ್ಷಿತ ಅತಿಥಿಗಳು' ಇದೀಗ ತನ್ನ ಬಿಡುಗಡೆಯತ್ತ ಸಂಪೂರ್ಣ ಗಮನ ಹರಿಸಿದೆ. ಸರ್ವೆÊವಲ್ ಥ್ರಿಲ್ಲರ್, ಪ್ರೇಮಕಥೆ ಮತ್ತು ತೀವ್ರ ಭಾವನೆಗಳ ಸಂಯೋಜನೆಯಾಗಿರುವ ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸುವ ನಿರೀಕ್ಷೆಯಿದೆ.
ಸೆಪ್ಟೆಂಬರ್‌ನಲ್ಲಿ ತೆರೆಗೆ ಬರಲಿರುವ ಈ ಚಿತ್ರವು ಪ್ರೇಕ್ಷಕರನ್ನು ಎಷ್ಟರ ಮಟ್ಟಿಗೆ ರೋಮಾಂಚನಗೊಳಿಸಲಿದೆ ಎಂಬ ಕುತೂಹಲ ಈಗಾಗಲೇ ಸಿನಿಪ್ರಿಯರಲ್ಲಿ ಮೂಡಿದೆ. ಸೆನ್ಸಾರ್ ಹೋರಾಟವನ್ನು ಯಶಸ್ವಿಯಾಗಿ ಗೆದ್ದಿರುವ 'ಅನಿರೀಕ್ಷಿತ ಅತಿಥಿಗಳು', ಇದೀಗ ಪ್ರೇಕ್ಷಕರ ಮನ ಗೆಲ್ಲುವ ಸವಾಲಿಗೆ ಸಜ್ಜಾಗಿದೆ.
ಮುಖ್ಯಭೂಮಿಕೆಯಲ್ಲಿ ಮೈತ್ರಿ ಜಗ್ಗಿ, ದಯ ಪಲ್ಲವಗೆರೆ, ದೈವಿಕ್ ನಾಗ್, ಶ್ರೀ ದತ್ತ, ಸಂಪ್ರತಿ ಆಳ್ವಾ, ಹರಿತ ಶಾ, ಅಭಿನಯಿಸಿದ್ದು, ಛಾಯಾಗ್ರಹಣ ಮತ್ತು ಸಂಕಲನದ ಜವಾಬ್ದಾರಿ ಎರಿಕ್ ವಿ.ಜೆ. ವಹಿಸಿದ್ದಾರೆ, ಚಿತ್ರಕ್ಕೆ ಸ್ವಾಮಿನಾಥನ್ ಆರ್.ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು