ಕೆಜಿಎಫ್: ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ವಿಜಯೋತ್ಸವದ ವೇಳೆ ಸಂಭವಿಸಿದ ದುರದೃಷ್ಟಕರ ಕಾಲ್ತುಳಿತದಲ್ಲಿ ಮೃತಪಟ್ಟ ತಾಲೂಕಿನ ಬಡಮಾಕನಹಳ್ಳಿ ಗ್ರಾಮದ ಯುವತಿ ಸಹನಾ ಅವರ ಸಮಾಧಿಗೆ ಭಾನುವಾರ ವಿಶೇಷ ಪೂಜೆ ಸಲ್ಲಿಸಿ, ಶ್ರದ್ಧಾಂಜಲಿ ಅರ್ಪಿಸಲಾಯಿತು.
ಟಿ.ಗೊಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಡಮಾಕನಹಳ್ಳಿ ಗ್ರಾಮದ ಶಿಕ್ಷಕ ಸುರೇಶ್ ಅವರ ಪುತ್ರಿಯಾದ ಸಹನಾ, ಕಳೆದ ವರ್ಷ ನಡೆದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ವಿಜಯೋತ್ಸವ ಕಣ್ತುಂಬಿಕೊಳ್ಳಲು ತೆರಳಿದ್ದಾಗ ಸಂಭವಿಸಿದ ಕಾಲ್ತುಳಿತದ ದುರಂತಕ್ಕೆ ಬಲಿಯಾಗಿದ್ದರು ಸಹನಾ ಅವರ ಸ್ವಗ್ರಾಮವಾದ ಬಡಮಾಕನಹಳ್ಳಿಯ ತೋಟದಲ್ಲಿ ಅವರ ಅಂತ್ಯಸAಸ್ಕಾರ ಮಾಡಲಾಗಿದ್ದು, ಪ್ರಸ್ತುತ ಅವರ ಸಮಾಧಿಯನ್ನು ಸುಂದರವಾದ ದೇವಾಲಯದ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ.
ಭಾನುವಾರ ಕುಟುಂಬಸ್ಥರು ಹಾಗೂ ಗ್ರಾಮಸ್ಥರೆಲ್ಲರೂ ಸೇರಿ ಸಮಾಧಿಗೆ ವಿಶೇಷ ಪೂಜೆ ಸಲ್ಲಿಸಿ, ಬಂಧು-ಬಳಗದವರಿಗೆ ಅನ್ನದಾನ ನೆರವೇರಿಸಿದರು.
ಶಾಸಕಿ ರೂಪಕಲಾ ಶಶಿಧರ್ ಭೇಟಿ, ಸಾಂತ್ವನ: ದುರಂತದ ಹಿನ್ನೆಲೆಯಲ್ಲಿ ಕೆಜಿಎಫ್ ಕ್ಷೇತ್ರದ ಶಾಸಕಿ ರೂಪಕಲಾ ಶಶಿಧರ್ ಅವರು ಸಹನಾ ಅವರ ಸಮಾಧಿಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಬಳಿಕ ಮಗಳ ವಿಯೋಗದಿಂದ ಕಂಗಾಲಾಗಿರುವ ಪೋಷಕರು ಹಾಗೂ ಕುಟುಂಬಸ್ಥರನ್ನು ಭೇಟಿಯಾಗಿ ಸಾಂತ್ವನ ಹೇಳಿ, ಧೈರ್ಯ ತುಂಬಿದರು.
ಬಳಿಕ ಮಾತನಾಡಿ, ಸತತ 18 ವರ್ಷಗಳ ನಂತರ ಆರ್ಸಿಬಿ ಕ್ರಿಕೆಟ್ ತಂಡವು ಗೆದ್ದ ಸಂಭ್ರಮದ ವೇಳೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರಿಂದ ಈ ಕಾಲ್ತುಳಿತ ಸಂಭವಿಸಿದೆ ಇದು ನಿಜಕ್ಕೂ ನಡೆಯಬಾರದಾಗಿದ್ದ ಘೋರ ದುರಂತ ಈ ಆಕಸ್ಮಿಕ ದುರಂತದಿAದ ಹೆಣ್ಣು ಮಗಳನ್ನು ಕಳೆದುಕೊಂಡ ಪೋಷಕರ ದುಃಖ ತುಂಬಲಾರದ್ದು ಸಹನಾ ಅವರ ಪೋಷಕರ ಸುಖ-ದುಃಖಗಳಲ್ಲಿ ಸದಾ ನಾನು ಮತ್ತು ನಮ್ಮ ಸರ್ಕಾರ ಜೊತೆಯಾಗಿ ಇರಲಿದ್ದೇವೆ ಎಂದು ಭರವಸೆ ನೀಡಿದರು.
ಮೃತರ ಆತ್ಮಕ್ಕೆ ಶಾಂತಿ ಕೋರಿದ ಸಾವಿರಾರು ಜನ: ಇಡೀ ಬಡಮಾಕನಹಳ್ಳಿ ಗ್ರಾಮದ ಜನತೆಯೇ ಒಟ್ಟಾಗಿ ಬಂದು ಸಹನಾ ಅವರ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಹೆಣ್ಣುಮಗಳ ಆತ್ಮಕ್ಕೆ ಶಾಂತಿ ಕೋರಿದರು ಕಾರ್ಯಕ್ರಮದಲ್ಲಿ ಕೋಲಾರ ಹಾಲು ಒಕ್ಕೂಟದ ನಿರ್ದೇಶಕರಾದ ಜಯಸಿಂಹ ಕೃಷ್ಣಪ್ಪ, ಪ್ರಮುಖ ಮುಖಂಡರಾದ ಬ್ಯಾಟೆಗೌಡ ಸೇರಿದಂತೆ ಸಾವಿರಾರು ಸಾರ್ವಜನಿಕರು ಹಾಗೂ ಅಭಿಮಾನಿಗಳು ಪಾಲ್ಗೊಂಡು ಶ್ರದ್ಧಾಂಜಲಿ ಸಲ್ಲಿಸಿದರು.
ಐಪಿಎಲ್ ವಿಜಯೋತ್ಸವದ ದುರಂತ: ಮೃತ ಸಹನಾ ಸಮಾಧಿಗೆ ವಿಶೇಷ ಪೂಜೆ



