ರಾಮನಗರ: ನಗರಸಭೆಯ 2024-25ನೇ ಸಾಲಿನ ಆಯವ್ಯಯ ಪಟ್ಟಿ ತಯಾರಿಸುವ ಸಂಬಂಧ ಜನಪ್ರತಿನಿಧಿಗಳು,ಸಾರ್ವಜನಿಕರು ಹಿರಿಯ ನಾಗರೀಕರು ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳಿಂದ ಸಲಹಾ ಸಭೆ ಯಶಸ್ವಿಯಾಗಿ ನಡೆಯಿತು.ನಗರಸಭೆ ಅದ್ಯಕ್ಷೆ ವಿಜಯಕುಮಾರಿ ಅಧ್ಯಕ್ಷತೆಯಲ್ಲಿ ಸೋಮವಾರ ಸಭೆ ನಡೆಯಿತು.
ಸಭೆಯಲ್ಲಿ ಸಾರ್ವಜನಿಕರು ಅಭಿಪ್ರಾಯಗಳನ್ನು ಮಂಡಿಸಿ ನಗರಸಭೆ ವಾಣಿಜ್ಯ ಉದ್ದೇಶದ ಲೈಸೆನ್ಸ್ ಪಡೆದವರಿಂದ ತೆರಿಗೆ ವಸೂಲಿ ಮಾಡಿ ಬಜೆಟ್ನಲ್ಲಿ ನಾಗರೀಕರ ಅನುಕೂಲವಾಗುವ ಬಜೆಟ್ಗೆ ಅನುದಾನ ಮೀಸಲಿಡಿ, ಖರ್ಚು ಕಡಿಮೆ ಮಾಡುವ ನಿಟ್ಟಿನಲ್ಲಿ ನಿಮ್ಮ ಮುಂದಿನ ಆಯವ್ಯಯವಿರಲಿ ಎಂದು ತಮ್ಮ ಸಲಹೆಗಳನ್ನು ನೀಡಿದರು.
ಶಿವಕುಮಾರಸ್ವಾಮಿ ಮಾತನಾಡಿ ನಗರದಲ್ಲಿರುವ ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಹಾಗೂ ಖಾಸಗಿ ಶಾಲಾ ಕಾಲೇಜು, ಟವರ್ ನ ಅಳವಡಿಸಿರುವವರಿಂದ ತೆರಿಗೆ ಪಡೆಯಲು ಕ್ರಮ ವಹಿಸಿ ಎಂದು ಸಲಹೆ ನೀಡಿದರು. ಪ್ರಮುಖವಾಗಿ ಸೋಲಾರ್ ಅಳವಡಿಕೆಗೆ ಒತ್ತು, ಕೌನ್ಸಿಲ್ ಸಭೆಗಳ ಖರ್ಚು ಕಡಿಮೆ ಮಾಡಿ, ಅಂಬೇಡ್ಕರ್ ಭವನಕ್ಕೆ ಪತ್ರಿಕೆಗಳನ್ನು ಪೂರೈಸಿ, ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ವಿದ್ಯಾರ್ಥಿಗಳಿಗೆ ಅನುದಾನ ಮೀಸಲಿಡಿ, ವಿವೇಕಾನಂದ ನಗರದ ಬಳಿ ಬಸ್ಸು ಸೆಲ್ಡರ್ ನಿರ್ಮಿಸಿ, ಸೇತುವೆ ಮೇಲೆ ಸೇರಿದಂತೆ ನಗರದ ಬೀದಿಬದಿ ವ್ಯಾಪಾರಿಗಳಿಗೆ ಒಂದು ಸ್ಥಳ ನಿಗಧಿ ಮಾಡಲು ಬಜೆಟ್ನಲ್ಲಿ ಕ್ರಮ ವಹಿಸಿ.
ಪ್ಲೆಕ್ಸ್ ಹಾವಳಿಗೆ ಕಡಿವಾಣ ಹಾಕಿ. ವಿದ್ಯುತ್ ಚಿತಾಗಾರ ಪೂರ್ಣಗೊಳಿಸಿ, ಕಸ ವಿಲೇವಾರಿಗೆ ಕ್ರ ವಹಿಸಿ, ರೇಷ್ಮೆ ನೂಲು ಕಾರ್ಖಾನೆ ಕೆಲಸ ಮಾಡುವವರಿಗೆ ಆರೋಗ್ಯ ತಪಾಸಣೆ ಹಾಗೂ ಕಲ್ಯಾಣ ಕಾರ್ಯಕ್ರಮಗಳಿಗೆ ಅನುದಾನ ಮೀಸಲಿಡಲು ಕ್ರಮವಹಿಸಬೇಕೆಂದು ಸಲಹೆ ನೀಡಿದರು.
ನಗರಸಭೆ ಮಾಜಿ ಸದಸ್ಯ ನಾಗೇಶ್ ಮಾತನಾಡಿ ಬೀದಿ ಬದಿ ವ್ಯಟಪಾರಿಗಳಿಗೆ ನಗರಸಭೆ ಸೌಕರ್ಯ ಕಲ್ಪಿಸಿದ್ದು, ತ್ಯಾಜ್ಯ ವನ್ನು ನಗರಸಭೆಯೆ ಸ್ವಚ್ಚತೆ ಮಾಡುತ್ತೀರಿ ಸುಂಕ ಏಕೆ ವಸೂಲಿ ಮಾಡಲು ಕ್ರಮ ವಹಿಸುತ್ತಿಲ್ಲ ಎಂಬ ಪೃಶ್ನೆಗೆ ಅಧಿಕಾರಿಗಳು ಅವರಿಗೆ ಒಂದು ಸ್ಥಳ ನಿಗಧಿ ಮಾಡಬೇಕು. ಆಗಾಗಿ ಸುಂಕ ವಸೂತಿ ಮಾಡಲಾಗುವುದಿಲ್ಲ. ಖರ್ಚು ಕಡಿಮೆ ಆಗುವ ರೀತಿ ಸಾರ್ವಜನಿಕರು ಸಲಹೆ ನೀಡಿದರೆ ಉಳಿತಾಯ ಮಾಡಿದರೆ ನಗರದಲ್ಲಿ ಮೂಲಭೂತ ಸೌಲಭ್ಯಗಳನ್ನು ಹೆಚ್ಚಿಸಲು ಸಾಧ್ಯ ಎಂದರು.
ನಗರಸಭೆ ಪೌರಾಯುಕ್ತ ಎಲ್.ನಾಗೇಶ್ ಮಾತನಾಡಿ ಆಯವ್ಯಯ ರಚಿಸಲು ಸಾರ್ವಜನಿಕರು ಉತ್ತಮ ಸಲಹೆಗಳನ್ನು ನೀಡಿದ್ದಾರೆ. ಇವೆಲ್ಲ ಸಲಹೆಗಳನ್ನು ಕೌನ್ಸಿಲ್ ಸಭೆ ಹಾಗೂ ಶಾಸಕರ ಸಮ್ಮುಖದಲ್ಲಿ ಚರ್ಚೆ ಮಾಡಿ ನಾಗರೀಕರಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಸವಲತ್ತು ನೀಡುವ ಜೊತೆಗೆ ನಗರದ ಸ್ವಚ್ಚತೆ, ಆರೋಗ್ಯ ವಿಷಯಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು. ಪತ್ರದ ಮೂಲಕವು ಸಹ ಬಜೆಟ್ ಸಂಬಂಧ ಬರುವ ಸಲಹೆಗಳನ್ನು ಸ್ವೀಕರಿಸಲಾಗುವುದು ಈ ನಿಟ್ಟಿನಲ್ಲಿ ಸಾರ್ವಜನಿಕರು ಸಂಘ ಸಂಸ್ಥೆಗಳಲ್ಲಿ ಮನವಿ ಮಾಡಿದರು.
ವಿವಿಧ ವಾರ್ಡ್ಗಳಲ್ಲಿರುವ ಅಂಬೇಡ್ಕರ್ ಭವನಗಳಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ನಿರ್ವಹಣೆ ಮಾಡುವ ಜವಬ್ದಾರಿ ತೆಗೆದುಕೊಂಡರೆ ಪುಸ್ತಕಗಳು, ಪತ್ರಿಕೆಗಳನ್ನು ವ್ಯವಸ್ಥೆ ಮಾಡಲಾಗುವುದು. ಪ್ರಮುಖವಾಗಿ ಸರ್ಕಾರಿ ಜಾಗದ ಸಮಸ್ಯೆಯಿದೆ. ಜಾಗ ಸಿಕ್ಕರೆ ಖರೀದಿಸಿ ವೆಂಟರ್ ಗಳಿಗೆ ಅನುಕೂಲ ಮಾಡಿಕೊಡಲಾಗುವುದು. ತೆರಿಗೆ ಸಂಗ್ರಹದಲ್ಲಿ ವಾರ್ಷಿಕ ಗುರಿ ಸಾಧಿಸಿದೆ.
ಡಿಯುವ ನೀರು ಜನರಿಗೆ ಪೂರೈಸಲು ಮುಂಗಡವಾಗಿ ಬೋರ್ವೆಲ್ ಕೊರೆಸಲು, ಹಾಗೂ ಟ್ಯಾಂಕರ್ ಮೂಲಕ ನೀರು ಪೂರೈಸಲು ಕ್ರಮ ವಹಿಸುತ್ತಿದ್ದೇವೆ. ಶೇ.45 ಕ್ಕಿಂತ ಹೆಚ್ಚಿನ ಪ್ರದೇಶಗಳಲ್ಲಿ ಯುಜಿಡಿ ವ್ಯವಸ್ಥೆ ಇಲ್ಲ. ಎಲ್ಲ ಚುನಾಯಿತ ಪ್ರತಿನಿಧಿಗಳ ಸಹಕಾರದಲ್ಲಿ ಯುಜಿಡಿ ಪೂರ್ಣಗೊಳಿಸಲು ಕ್ರಮವಹಿಸಲಾಗಿದೆ ಎಂದು ಅಂಕಿಅಂಶಗಳನ್ನು ಬಿಚ್ಚಿಟ್ಟರು.
ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಸ್ಮದ್, ಸದಸ್ಯರಾದ ಆಯಿತು ಗಿರಿಜಾ, ಅಕ್ಲೀಂ, ಮೊಹಿನ್, ಲೆಕ್ಕಾಧಿಕಾರಿ ಶಿವಣ್ಣ ಸೇರಿದಂತೆ ಸಾರ್ವಜನಿಕರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.