ಚಳ್ಳಕೆರೆ: ಚಳ್ಳಕೆರೆ ಭೂಮಾಪನ ಇಲಾಖೆ ಅಧಿಕಾರಿಯ ಕಾರು ಚಾಲಕ ಲಂಚ ಸ್ವೀಕರಿಸುವಾಗ ಚಾಲಕನನ್ನು ವಶಪಡಿಸಿಕೊಂಡ ಲೋಕಾಯುಕ್ತರು. ಭೂಮಾಪನ ಇಲಾಖೆ ಅಧಿಕಾರಿ ಎ.ಡಿ.ಎಲ್.ಆರ್ ಗಂಗಣ್ಣ ಲೋಕಾಯುಕ್ತರನ್ನು ನೋಡಿದ ಕೂಡಲೇ ಪರಾರಿಯಾದ ಘಟನೆ ಚಳ್ಳೆಕೆರೆಯಲ್ಲಿ ನಡೆದಿದೆ.
ಚಳ್ಳಕೆರೆ ತಾಲೂಕಿನ ಓಬಳಾಪುರ ಗ್ರಾಮದ ರೈತ ಕೆ.ಜಿ.ಜಯಣ್ಣ ಜಮೀನನ್ನು ಪಾಲು ವಿಭಾಗ ಮಾಡಿಸಿ ಕೊಳ್ಳಲು ಒಂದು ವರ್ಷದಿಂದ ತಾಲ್ಲೂಕು ಕಚೇರಿಗೆ ಅಲೆದಾಡಿದರು. ಅಧಿಕಾರಿಗಳು ಪಾಲು ವಿಭಾಗ ಮಾಡಿ ಕೊಡದೆ. ಲಂಚದ ಹಣಕ್ಕೆ ಬೇಡಿಕೆ ಇಟ್ಟು.ಇದು ಸರ್ವೇ ಇಲಾಖೆ ವ್ಯಾಪ್ತಿಗೆ ಬರುತ್ತದೆ ಎಂದು ಹೇಳಿದ್ದಾರೆ.
ಭೂಮಾಪನ ಇಲಾಖೆಯ ಎಡಿಯಲ್ಲ ಗಂಗಣ್ಣ 15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ.10 ಸಾವಿರ ರೂಪಾ ಯಿಗಳನ್ನು ಕೊಡುವುದಾಗಿ ಒಪ್ಪಿಕೊಂಡಿದ್ದ ರೈತ ಕೆ.ಜಿ.ಜಯಣ್ಣ. ಲೋಕಾಯುಕ್ತರಿಗೆ ದೂರು ನೀಡಿದ್ದಾರೆ.ರೈತರ ಹಣ ನೀಡಲು ಎ.ಡಿ.ಎಲ್.ಆರ್ ಗಂಗಣ್ಣನನ್ನು ಸಂಪರ್ಕಿಸಿದಾಗ.ತನ್ನ ವಾಹನ ಚಾಲಕನಿಗೆ ಹಣ ನೀಡುವಂತೆ ತಿಳಿಸಿದ್ದ.
ವಾಹನ ಚಾಲಕನ ಕೈಗೆ ರೈತ ಹಣನೀಡುವಾಗ. ವಾಹನ ಚಾಲಕನನ್ನು ಹಣದ ಸಮೇತ ವಶಕ್ಕೆ ಪಡೆದಿದ್ದ ಲೋಕಾಯುಕ್ತ ಪೊಲೀಸ ರನ್ನು ಕಂಡ ಭೂಮಾಪನ ಅಧಿಕಾರಿ ಎ.ಡಿ.ಎಲ್.ಆರ್ ಗಂಗಣ್ಣ ಲೋಕಾಯುಕ್ತರಿಂದ ತಪ್ಪಿಸಿಕೊಂಡು ಪರಾರಿ ಯಾಗಿದ್ದಾನೆ. ವಾಹನ ಚಾಲಕನನ್ನು ವಶಕ್ಕೆ ಪಡೆದ ಲೋಕಾಯುಕ್ತರು ಮುಂದಿನ ತನಿಖೆ ನಡೆಸುತ್ತಿದ್ದಾರೆ.