ನೆಲಮಂಗಲ: ಮನುಷ್ಯರು ತಾಯಿಯ ಋಣ, ನೆಲದ ಋಣ, ಗುರುವಿನ ಋಣ ತೀರಿಸ ಬೇಕಾಗಿದ್ದು, ನಾಡು ನುಡಿಯ ಬೆಳವಣಿಗೆಗೆ ಶ್ರಮಿಸಬೇಕಿದೆ. ಕನ್ನಡಕ್ಕೆ 2 ಸಾವಿರ ವರ್ಷಗಳ ಇತಿಹಾಸ ವಿದೆ. ಆದರೆ ಸರಕಾರ ಕಂಪನಿಗಳಿಗಾಗಿ ಕನ್ನಡಿಗರ ಭೂಮಿ ವಶಪಡಿಸಿಕೊಂಡು ಕನ್ನಡಿಗರಿಗೆ ಉದ್ಯೋಗ ನೀಡದೆ ವಲಸೆ ಹೋಗುವ ಸ್ಥಿತಿ ನಿರ್ಮಾಣ ಮಾಡಿದ್ದು, ಈ ದುಸ್ಥಿತಿ ನಿಲ್ಲಬೇಕು. ಎಂದು 12ನೇ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಡಾ.ಚೌಡಯ್ಯ ತಾಕೀತು ಮಾಡಿದರು.
ನಗರದ ಬಸವಣ್ಣ ದೇವರ ಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಂದ ಆಯೋ ಜಿಸಿದ್ದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು, ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿ ಯಾಗಿ ನಡೆಯುತ್ತಿರುವುದು ಸಂತೋಷದ ಸಂಗತಿ. ನೆಲಮಂಗಲ ಕನ್ನಡ ಭಾಷೆ ಹಾಗೂ ಸಾಹಿತ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದೆ. ತಾಲೂಕಿನಲ್ಲಿ ಒಂದು ಕನ್ನಡ ಭವನವಾಗಬೇಕಾಗಿದ್ದು, ಶಾಸಕರಲ್ಲಿ ಮನವಿ ಮಾಡುತ್ತೇವೆ ಎಂದರು.
ಧ್ವಜಾರೋಹಣ : ಬೆಳಗ್ಗೆ 8 ಗಂಟೆಗೆ ತಹಸೀಲ್ದಾರ್ ಅಮೃತ್ ಆಟ್ರೇಶ್, ತಾಪಂ ಇಒ ಮಧು, ಬಿಇಒ ತಿಮ್ಮಯ್ಯ, ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ರಾಷ್ಟ್ರ ಧ್ವಜ, ನಾಡ ಧ್ವಜ, ಪರಿಷತ್ ಧ್ವಜಾರೋಹಣ ಮಾಡುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಿದರು.
ವಿಚಾರಗೋಷ್ಠಿ: ಸಾಹಿತಿ ಮಣ್ಣೆ ಮೋಹನ್ ಅಧ್ಯಕ್ಷತೆಯಲ್ಲಿ ವಿಚಾರ ಗೋಷ್ಠಿ ನಡೆಸಲಾ ಯಿತು. ಗೋಷ್ಠಿಯಲ್ಲಿ ಅಕ್ಕಮಹಾದೇವಿ, ರುದ್ರಸ್ವಾಮಿ, ಕಾಸರ ಘಟ್ಟ ಗಂಗಾಧರ್, ಬೆಟ್ಟಸ್ವಾಮಿಗೌಡ ನಾನಾ ವಿಚಾರಗಳ ಬಗ್ಗೆ ಮಾತನಾಡಿದರು.
ಆನಂತರ ಸಾಹಿತಿ ಲಕ್ಷ್ಮೀ ಶ್ರೀನಿ ವಾಸ್ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿ ಯಲ್ಲಿ 18 ಕವಿತೆ ವಾಚಿಸಲಾಯಿತು. ಎಲ್ಲರಿಗೂ ಕನ್ನಡ ಸಾಹಿತ್ಯ ಪರಿಷತ್ ನಿಂದ ಅಭಿನಂದನೆ ಸಲ್ಲಿಸಲಾಯಿತು.ಕನ್ನಡ ಸಾಹಿತ್ಯ ಸಮ್ಮೇಳನ ಧ್ವಜಾರೋಹಣದಿಂದ ಸಮಾರೋಪ ಸಮಾರಂಭದವರೆಗೂ ಶಿಸ್ತುಬದ್ಧವಾಗಿ ಅಚ್ಚುಕಟ್ಟಾಗಿ ನಡೆದಿದ್ದು, ಮೆರವಣಿಗೆಯಲ್ಲಿ ಸಾವಿರಾರು ಜನರು ಭಾಗವಹಿಸಿ ಹಬ್ಬದಂತೆ ಆಚರಿಸಿದರು. ಬಹುದಿನಗಳ ಪರಿಶ್ರಮ ಹಾಗೂ ಎಲ್ಲರ ಸಹಕಾರದಿಂದ ಕಾರ್ಯಕ್ರಮ ಅತ್ಯುತ್ತಮವಾಗಿ ನಡೆಯಿತು.
ಶೇ.60ರಷ್ಟು ಕನ್ನಡ ನಾಮಫಲಕ ಕಡ್ಡಾಯ, ಕನ್ನಡಿಗರಿಗೆ ಸ್ಥಳೀಯ ಕಂಪನಿಗಳಲ್ಲಿ ಉದ್ಯೋಗನೀಡಬೇಕು ಎಂಬುವುದೂ ಸೇರಿದಂತೆ ಅನೇಕನಿರ್ಣಯಗಳನ್ನು ಸಮ್ಮೇಳನದಲ್ಲಿ ಕೈಗೊಂಡಿದ್ದು,ರಾಜ್ಯ ಘಟಕದ ಮೂಲಕ ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ಕಸಾಪ ತಾಲೂಕು ಅಧ್ಯಕ್ಷ ಪ್ರದೀಪ್ ಕುಮಾರ್ ತಿಳಿಸಿದರು.
ಪುಸ್ತಕ ಬಿಡುಗಡೆ: ವೇದಿಕೆಯಲ್ಲಿ ಪ್ರಕಾಶ್ಮೂರ್ತಿ ಅವರ ನಿರಾಪರಾಧಿ, ಮುರು ಳೀಧರ್ ಅವರ ಆರದ ದೀಪ, ಸಿರಾಜ್ ಅಹಮದ್
ಅವರ ನವಿಲಿಗೆ ಸಾವಿರ ನಯನಗಳು, ಪ್ರೇಮ್ ಕುಮಾರ್ ಅವರ ಮನದ ಹನಿ, ನಂದಾ ದೀಪ ಅವರ ಕಾವ್ಯದರ್ಶಿನಿ ಪುಸ್ತಕಗಳನ್ನು ಸಮ್ಮೇಳನಾಧ್ಯಕ್ಷ ಡಾ.ಚೌಡಯ್ಯ, ಕಸಾಪ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಬಿಡುಗಡೆ ಗೊಳಿಸಿದರು.
ಅದ್ಧೂರಿ ಮೆರವಣಿಗೆ: ತಾಲೂಕು ಸಾಹಿತ್ಯ ಸಮ್ಮೇಳನದ ಹಿನ್ನೆಲೆ ನಗರದ ಕೋಟೆ ಬೀದಿಯ ಭುವನೇಶ್ವರಿ ದೇವಿಯ ದೇವಾಲಯದಿಂದ ಬಸ್ ನಿಲ್ದಾಣದ ಮಾರ್ಗವಾಗಿ ಬಸವಣ್ಣದೇವರ ಮಠದವರೆಗೂ ಸಾವಿರಾರು ಜನರ ಸಮ್ಮುಖದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಚೌಡಯ್ಯ ಅವರನ್ನು ಬೆಳ್ಳಿ ಪಲ್ಲಕ್ಕಿ ಉತ್ಸವದ ಮೂಲಕ ಕರೆತರಲಾ ಯಿತು. ಮೆರವಣಿಗೆಯಲ್ಲಿ ನಾನಾ ಕಲಾತಂಡಗಳು, ಪೂರ್ಣಕುಂಭ ಸೇರಿದಂತೆ ವಿದ್ಯಾರ್ಥಿಗಳ ಭಾಗವಹಿಸುವಿಕೆ ವಿಶೇಷ ಮೆರಗು ತಂದಿತು.
ಈ ಸಂದರ್ಭದಲ್ಲಿ ಶ್ರೀ ಬಸವಣ್ಣದೇವರ ಮಠದ ಸಿದ್ದಲಿಂಗ ಸ್ವಾಮೀಜಿ, ಶ್ರೀ ಶಿವಾನಂದಾಶ್ರಮದ ರಮಾನಂದ ಮಹಾಸ್ವಾಮೀಜಿ, ಕೆಪಿಸಿಸಿ ಪದವೀಧರ ವಿಭಾಗದ ಅಧ್ಯಕ್ಷರಾಮೋಜಿಗೌಡ, ಗೌರವಾಧ್ಯಕ್ಷ ನಾರಾಯಣಗೌಡ, ಗೌರವ ಕಾರ್ಯದರ್ಶಿ ಪ್ರಕಾಶ್ ಮೂರ್ತಿ,
ಮಂಜುನಾಥ್, ತಾಲೂಕು ಕಲಾವಿದರ ಬಳದ ಅಧ್ಯಕ್ಷ ಡಾ.ಜಿ.ಗಂಗರಾಜು, ಜಿಲ್ಲಾ ಮಹಿಳಾ ಪತ್ರಿನಿಧಿ ಮಂಜುಳಾ ಸಿದ್ದರಾಜು, ಪದಾಧಿಕಾರಿಗಳಾದ ದಿನೇಶ್, ಶಿವಲಿಂಗಯ್ಯ, ಜನಾರ್ದನ್, ಸಿದ್ದರಾಜು, ಹೊಸಪಾಳ್ಯ ವಿಜಯ್, ಕಲಾವಿದ ಬೂದಿಹಾಲ್ಕಿಟ್ಟಿ, ನಗರ ಅಧ್ಯಕ್ಷ ಮಲ್ಲೇಶ್, ಪ್ರತಿನಿಧಿ ಸಿ.ಎಚ್.ಸಿದ್ದಯ್ಯ, ಕಲಾವಿದರ ಸಂಘದ ಜಿಲ್ಲಾಧ್ಯಕ್ಷ ಕೆಂಪಣ್ಣ, ಬಿಎಂಟಿಸಿ ಮಾಜಿ ನಿರ್ದೇಶಕ ಮಿಲ್ಟಿಮೂರ್ತಿ, ಬಿಜೆಪಿ ಉಪಾಧ್ಯಕ್ಷ ಜಗದೀಶ್ ಚೌಧರಿ, ಕಾಂಗ್ರೆಸ್ ಮಹಿಳಾ ಘಟಕದ ರುಕ್ಕಿಣಿ, ನಾಗರತ್ನ, ಮಂಜುಳಾ ಮತ್ತಿತರರಿದ್ದರು.