ಮಾಗಡಿ: ತಾಲ್ಲೂಕಿನ ಮಾಡಬಾಳ್ ಹೋಬಳಿಯ ಹೊಸದೊಡ್ಡಿಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಮುಖ್ಯ ಕಾರ್ಯ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಭೈರಪ್ಪ ವಯೋ ನಿವೃತ್ತಿ ಹೊಂದಿದ್ದರು. ಈ ಖಾಲಿ ಇರುವ ಹುದ್ದೆಗೆ ನಿಯಮಾವಳಿಯ ಪ್ರಕಾರವಾಗಿ ತಾತ್ಕಾಲಿಕವಾಗಿ ಕಾರ್ಯ ನಿರ್ವಾಹಕ ಹುದ್ದೆಗೆ ಅರ್ಜಿ ಅಹ್ವಾನಿಸಿದ್ದು ಇದಕ್ಕೆ ಸ್ಥಳೀಯ ಪದವೀದರರು ಅರ್ಜಿ ಸಲ್ಲಿಸಬಹುದು ಎಂದು ಅದ್ಯಕ್ಷ ಕುಮಾರ್ ಪ್ರಕಟಣೆ ಹೊರಡಿಸಿದ್ದರು.
ಆದರೆ ಸಹಕಾರ ಸಂಘಗಳ ನಿಯಮಾವಳಿಗಳನ್ನು ಪಾಲಿಸದೇ ಅರ್ಜಿದಾರರಿಗೆ ಹುದ್ದೆ ನೀಡದೇ ಹಾಲು ಪರೀಕ್ಷಕರಾದ ಪ್ರಸನ್ನ ಕುಮಾರ್ ಅವರನ್ನು ಹಂಗಾಮಿ ಕಾರ್ಯ ನಿರ್ವಾಹಕನನ್ನಾಗಿ ನೇಮಕ ಮಾಡಿ ಅರ್ಹ ಪದವೀದರರಿಗೆ ಅನ್ಯಾಯವೆಸಲಾಗಿದೆ ಎಂದು ಅರ್ಜಿದಾರ ಚಂದನ್ ಹೆಚ್.ಎಸ್. ಹೇಳಿದರು.
ಹೊಸದೊಡ್ಡಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ದಿನಾಂಕ 18:12:2023 ರಂದು ಡೈರಿಯಲ್ಲಿ ಕರ್ತವ್ಯ ಕಾರ್ಯ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಭೈರಪ್ಪ ನಿವೃತ್ತಿ ಹೊಂದಿದ ಪರಿಣಾಮ ಸಂಘದ ವತಿಯಿಂದ ಅರ್ಜಿ ಕರೆಯಲಾಗಿತ್ತು.ಈ ಸಂಭಂದ ಹೆಚ್.ಎನ್.ಸಂತೋಷ್, ಹೆಚ್.ಆರ್,ಪ್ರಸನ್ನಕುಮಾರ್, ಹೆಚ್.ಆರ್.ಗೋಪಾಲ, ಚಂದನ ಹೆಚ್.ಎಸ್.ಧನಂಜಯ ಹೆಚ್.ಕೆ.ಹೇಮಂತಕುಮಾರ್ ಹೆಚ್.ಆರ್.ಹೆಚ್.ಎ.ರಾಕೇಶ್, ಪಾರ್ಥ, ಹೆಚ್.ಪಿ.ಗುರುಕಿರಣ್ ಅರ್ಜಿ ಸಲ್ಲಿಸಿದ್ದೆವು.
ಇದರಲ್ಲಿ ಪ್ರತಿಯೊಬ್ಬರೂ ಅರ್ಹ ಅರ್ಜಿದಾರರಾಗಿದ್ದು ಇದರಲ್ಲಿ ಶೇಕಡಾವಾರು ಅಂಕಗಳ ಮೂಲಕ ಯಾರನ್ನಾದರೂ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ನಮ್ಮ ಅನಿಸಿಕೆಯಾಗಿತ್ತು.ಆದರೆ ಸಂಘದ ಪದಾಧಿಕಾರಿಗಳು ಪದವೀದರರನ್ನು ಬಿಟ್ಟು ಗೌಪ್ಯವಾಗಿ ಪಿ.ಯು.ಸಿ.ಎಸ್.ಎಸ್.ಎಲ್.ಸಿ.ಐ.ಟಿ.ಐ.ಮಾಡಿರುವವರಿಗೆ ಕೆಲಸವನ್ನು ನೀಡಲು ಮುಂದಾಗುತ್ತಾರೆ ಎಂದು ದಿನಾಂಕ 27:12:2023 ರಂದು ಸಹಕಾರ ಸಂಘಗಳ ಸಹಾಯಕ ನಿರ್ದೇಶಕರು ಉಪವಿಭಾಗ ರಾಮನಗರ ಕಾರ್ಯಾಲಯಕ್ಕೆ ನಾನು ದೂರು ಸಲ್ಲಿಸಿದ್ದು ಅನರ್ಹರನ್ನು ಅಯ್ಕೆ ಮಾಡಿದರೆ ತಪ್ಪು ಸಂದೇಶ ಮತ್ತು ಕಾನೂನು ಹೋರಾಟ ಎದುರಿಸಬೇಕಾಗುತ್ತದೆ ಎಂದು ಇಂದು ಹಾಲುಪರೀಕ್ಷಕನನ್ನು ಹಂಗಾಮಿ ಕಾರ್ಯ ನಿರ್ವಾಹಕನಾಗಿ ತಾತ್ಕಾಲಿಕವಾಗಿ ನೇಮಕ ಮಾಡಲಾಗಿದ್ದು ಇದು ಪದವೀದರರಿಗೆ ಮಾಡಿರುವ ಅನ್ಯಾಯವಾಗಿದೆ.ಈ ಸಂಬಂಧ ಕಾನೂನು ಹೋರಾಟ ನಡೆಸುವುದಾಗಿ ಚಂದನ್ ತಿಳಿಸಿದರು.
ಅಧಿಕಾರಿಗಳ ಜಾಣಮೌನ:ಕಾರ್ಯ ನಿರ್ವಾಹಕ ನೇಮಕಾತಿ ಪ್ರಕ್ರಿಯೆಗೆ ನಿಗಧಿತ ಸಮಯಕ್ಕೆ ಬಾರದ ಅಧಿಕಾರಿಗಳು ಸಹಕಾರ ಕಾನೂನನ್ನು ಪಾಲಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದು ಆಡಳಿತ ಮಂಡಳಿಯ ನಿರ್ಧಾರವೇ ಸರಿ ಎಂಬಂತೆ ಮಾದ್ಯಮದವರಿಗೆ ಮತ್ತು ಅರ್ಜಿದಾರರಿಗೆ ಸ್ಪಷ್ಟ ಮಾಹಿತಿ ನೀಡದೇ ಜಾಣಮೌನ ಪ್ರದರ್ಶಿಸಿದರು.
ಚಕಮಕಿ:ಅರ್ಹ ಪದವೀದರರಿಗೆ ಕಾರ್ಯನಿರ್ವಾಹಕ ಹುದ್ದೆ ನೇಮಕಾತಿ ಆಗಬೇಕು ಎಂದುಅರ್ಜಿದಾರರ ಗುಂಪು ಮತ್ತು ಸಂಘದ ಅದ್ಯಕ್ಷ ಮತ್ತು ನಿರ್ದೇಶಕರ ಕೋರಂನಂತೆ ನೇಮಕ ಮಾಡಬೇಕು ಎಂಬ ವಾದದೊಂದಿಗೆ ಮತ್ತೊಂದು ಗುಂಪಿನ ನಡುವೆ ಕೆಲ ಕಾಲ ಮಾತಿನ ಚಕಮಕಿ ನಡೆಯಿತು.ಸಬ್ ಇನ್ಸ್ಪೆಕ್ಟರ್ ಬಸವರಾಜು ನೇತೃತ್ವದ ಪೊಲೀಸ್ ತಂಡವು ಮದ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.