ಚಳ್ಳಕೆರೆ: ನಗರಕ್ಕೆ ಬಂದು ಅಧಿಕಾರ ವಹಿಸಿಕೊಂಡ ಮೂರೇ ದಿನಗಳಲ್ಲಿ ಕಾನೂನಿನ ಭದ್ರತೆ ಹಾಗೂ ಅಪರಾಧ ತಡೆ ಮತ್ತು ನಗರದಲ್ಲಿ ವಾಹನಗಳು ಸುಗಮವಾಗಿ ಸಾಗಲು ಅಡ್ಡಾಡಿಟಿಯಾಗಿ ಓಡಾಡುವ ಆಟೋ ರಿಕ್ಷಾ ಚಾಲಕರಿಗೆ ಮೊದಲ ಹಂತವಾಗಿ ಜಾಗೃತಿ ಸಭೆ ನಡೆಸಿ.
ಖಡಕ್ ವಾರ್ನಿಂಗ್ ನೀಡಿದ. ನಗರ ಪೊಲೀಸ್ ಠಾಣೆಯ ನಗರ ಪೊಲೀಸ್ ನಿರೀಕ್ಷಕ ಕೆ.ಕುಮಾರ್.ನಗರದ ಪೊಲೀಸ್ ಠಾಣೆಯಲ್ಲಿ ಕಾನೂನು ಸಲಹೆ ಮಾಡಲು ಹಾಗೂ ಅಪರಾಧ ತಡೆಯಲು ಮತ್ತು ಸುಗಮ ವಾಹನ ಸಂಚಾರಕ್ಕಾಗಿ ಸರಣಿ ಸಭೆಗಳನ್ನು ನಡೆಸಿದ ಇನ್ಸ್ಪೆಕ್ಟರ್ ಕೆ.ಕುಮಾರ್ ಅವರು ಪೋಲಿ ನಗರದ ಪೊಲೀಸ್ ಠಾಣೆಯ ಆವರಣದಲ್ಲಿ ಆಟೋ ಚಾಲಕರು ಹಾಗೂ ಆಟೋ ಮಾಲೀಕರ ಜಾಗೃತಿ ಸಭೆ ನಡೆಸಿದರು.
ನಗರದ ಆಟೋ ಚಾಲಕರು ದಿನನಿತ್ಯ ಓಡಾಡುವ ಪ್ರಯಾಣಿಕರಿಗೆ ಕಿರಿಕಿರಿ ನೀಡದೆ.ಮುಖ್ಯ ರಸ್ತೆಗಳಲ್ಲಿ ವಿನಾಕಾರಣ ನಿಲ್ಲಿಸಿ. ವಾಹನ ಸಂಚಾರಗಳಿಗೆ ತೊಂದರೆ ನೀಡಬಾರದು. ಆಟಗಳನ್ನು ಪೊಲೀಸರು ನಿಗಧಿ ಮಾಡಿದ ಆಟೋ ನಿಲ್ದಾಣಗಳಲ್ಲಿ ಮಾತ್ರ ನಿಲ್ಲಿಸಬೇಕು. ನೀವು ಕರುತ್ತಿರುವ ಪ್ರಯಾಣಿಕ ರೊಂದಿಗೆ ಶಾಂತರೀತಿಯಿಂದ ಸಹಕರಿಸಬೇಕು.
ಇನ್ನು ನಗರದಲ್ಲಿ ಖಾಸಗಿ ಬಸ್ಸುಗಳು ಹಾಗೂ ಕೆಲವು ಬೈಕ್ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸದೆ ಇರುವುದು ಗಮನಕ್ಕೆ ಬಂದಿದೆ. ನಗರದಲ್ಲಿ ನೆಹರು ವೃತ್ತ, ಅಂಬೇಡ್ಕರ್ ವೃತ್ತ, ವಾಲ್ಮೀಕಿ ವೃತ್ತ ಪಾವಗಡ ರಸ್ತೆ ಹಾಗೂ ಬೆಂಗಳೂರು ರಸ್ತೆಯ ಬಸವೇಶ್ವರ ಮತ್ತು ಬಳ್ಳಾರಿ ರಸ್ತೆಯ ಮದಕರಿ ವೃತ್ತ ಉತ್ತರ ಸೇರಿದಂತೆ ನಗರದ ಅಷ್ಟ ದಿಕ್ಕುಗಳಲ್ಲಿ ನಮ್ಮ ಪೊಲೀಸರು ದಿನದ 24 ಗಂಟೆ ಸೇವೆ ಸಾರ್ವಜನಿಕ ಸೇವೆ ಮಾಡಲಿದ್ದಾರೆ.
ಆದ್ದರಿಂದ ನಗರದ ನೂರಾರು ವಾಹನ ಚಾಲಕರು ಹಾಗೂ ಆಟೋ ಚಾಲಕರು ತಮ್ಮ ಹೊಟ್ಟೆಪಾಡಿಗಾಗಿ ದುಡಿಯುವ ಕಾರ್ಮಿಕರು ಸಂಚಾರಿ ನೇಮಗಳನ್ನು ಪಾಲಿಸುವ ಮೂಲಕ ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಹಕರಿಸಬೇಕು ಎಂದರು.
ಪೊಲೀಸರು ಸುಮ್ಮಸುಮ್ಮನೆ ವಾಹನಗಳಿಗೆ ದಂಡ ಹಾಕುವುದಿಲ್ಲ. ಸಂಚಾರಿ ನಿಯಮಗಳನ್ನು ಪಾಲಿಸದ ವಾಹನಗಳು ಹಾಗೂ ವಾಹನ ಚಾಲಕರಿಗೆ ದಂಡ ವಿಧಿಸಲಾಗುವುದು.
ಇದರಿಂದ ನೀವು ದುಡಿಯುವ ಬಾಡಿಗೆ ಎಲ್ಲವನ್ನು ದಂಡ ಕಟ್ಟುವಲ್ಲಿಯ ಕಳೆದರೆ, ನಿಮ್ಮನ್ನೇ ನಂಬಿಕೊಂಡ ಕುಟುಂಬದ ನಿರ್ವಹಣೆ ಗತಿ ಏನು? ಸಂಚಾರಿ ನಿಯಮಗಳನ್ನು ಪಾಲಿಸಿ. ಪೊಲೀಸ್ ಇಲಾಖೆಗೆ ಸಹಕರಿಸಿ. ನಗರವನ್ನು ಸ್ಮಾರ್ಟ್ ಸಿಟಿ ಮಾಡಲು ನಾವೆಲ್ಲಾ ಪ್ರಯತ್ನಿಸೋಣ ಎಂದರು.
ಆಟೋ ಚಾಲಕರು ತಮ್ಮ ವಾಹನ ಲೈಸೆನ್ಸ್, ಇನ್ಸೂರೆನ್ಸ್,ವಾಹನದ ಆರ್.ಸಿ.ಕಾಫಿಯನ್ನು ಆಟೋ ಚಲಾಯಿಸುವಾಗ ಜೊತೆಯಲ್ಲಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಚಳ್ಳಕೆರೆ ನಗರದ ಟುಮಾರೋ 12 ಆಟೋ ನಿಲ್ದಾಣ ಗಳಿಂದ ಆಟೋ ಚಾಲಕರು ಹಾಗೂ ಆಟೋ ಚಾಲಕರ ಸಂಘದ ಅಧ್ಯಕ್ಷ ಪದಾಧಿಕಾರಿಗಳು ಉಪಸ್ಥಿತರಿದ್ದರು.