ಬೆಂಗಳೂರು: ಕೆ.ಎಲ್.ಈ.ಮಹಾ ವಿದ್ಯಾಲಯವು ಸಾಂಸ್ಕೃತಿಕ ವಿಭಿನ್ನತೆಯಲ್ಲೂ ಐಕ್ಯತೆಯನ್ನು ಮೆರೆದಿದೆ. ನಮ್ಮ ವಿದ್ಯಾರ್ಥಿಗಳು ಈ ಸಾಂಸ್ಕೃತಿಕ ಹಬ್ಬಕ್ಕೆ ಹೊಸ ಸೊಬಗನ್ನು ತಂದಿದ್ದಾರೆ. ಇದೇ ರೀತಿ ವಿದ್ಯಾರ್ಥಿಗಳು ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯನ್ನು ದೇಶದೆಲ್ಲಡೆ ಪಸರಿಸುವಂತಾಗಲಿ ಎಂದು ಪ್ರಾಂಶುಪಾಲರಾದ ಡಾ.ಅರುಣ್ ಬಿ ಸೋನಪ್ಪನವರ್ ತಿಳಿಸಿದರು.
ನಗರದ ರಾಜಾಜಿನಗರದ ಕೆಎಲ್ಇ ಎಸ್ ನಿಜಲಿಂಗಪ್ಪ ಕಾಲೇಜಿನಲ್ಲಿ ಅಯೋಜಿಸಿದ್ದ ಕೆಎಲ್ಇ ಸಂಕ್ರಮಣ 2024 ಕಾರ್ಯಕ್ರಮವನ್ನು ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಅರುಣ್ ಕುಮಾರ್ ಬಿ ಸೋನಪ್ಪನವರ್, ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತಾನಡಿದರು.
ಈ ಕಾರ್ಯಕ್ರಮದಲ್ಲಿ ಐಕ್ಯುಎಸಿ ಕೋ ಆರ್ಡಿನೇಟರ್ ಆದ ಪ್ರೊ.ಚಂದ್ರಶೇಖರಪ್ಪ ಮತ್ತು ಕಾಲೇಜ್ ಫೋರಂನ ವೈಸ್ ಪ್ರೆಸಿಡೆಂಟ್ ಆದ ಶ್ರೀಮತಿ ಜಿ. ಆಶಾರವರು ಮತ್ತು ಪೀಣ್ಯ ಜಿಮ್ ಖಾನಾದ ವೈಸ್ ಪ್ರೆಸಿಡೆಂಟ್ ಆದ ಪ್ರೊ. ಯೋಗೇಶ್ ಕುಮಾರ್ ,ಕಾಲೇಜಿನ ವಿಭಾಗಗಳ ಮುಖ್ಯಸ್ಥರು ಅಧ್ಯಾಪಕರು ಮತ್ತು ವಿದ್ಯಾರ್ಥಿ ಯೂನಿಯನ್ ನ ಜನರಲ್ ಸೆಕ್ರೆಟರಿಗಳಾದ ಶಶಾಂಕ್, ಯಶಸ್ವಿನಿ ಸೆಕ್ರೆಟರಿಗಳಾದ ಮೌನೇಶ್ ಶಾಲಿನಿ ರವರು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದರು.