ಮಾಗಡಿ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ ಹುಲೀಕಟ್ಟೆ ನಾರಾಯಣಸ್ವಾಮಿಯವರು ಎರಡನೇ ಭಾರಿಗೆ ಅದ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.ಹಿಂದಿನ ಅದ್ಯಕ್ಷರಾದ ಮುತ್ತಸಾಗರ ಸೋಮಶೇಖರ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಅದ್ಯಕ್ಷ ಸ್ಥಾನಕ್ಕೆ ನಾರಾಯಣಸ್ವಾಮಿ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ನಾರಾಯಣಸ್ವಾಮಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವೆಂಕಟೇಶ್ ಘೋಷಿಸಿದರು.
ನೂತನ ಅದ್ಯಕ್ಷರಾದ ಹೆಚ್.ಜಿ.ನಾರಾಯ ಣಸ್ವಾಮಿ ಮಾತನಾಡಿ ನಾನು ಎರಡನೇ ಭಾರಿಗೆ ಅದ್ಯಕ್ಷನಾಗಲು ಸಹಕರಿಸಿದ ಶಾಸಕ ಹೆಚ್.ಸಿ.ಬಾಲಕೃಷ್ಣ ಜಿಪಂ ಮಾಜಿ ಅಧ್ಯಕ್ಷ ಹೆಚ್.ಎನ್.ಅಶೋಕ್ ಮತ್ತು ಎಲ್ಲಾ ನಿರ್ದೇಶಕರಿಗೆ ಧನ್ಯವಾದ ಅರ್ಪಿಸುತ್ತೇನೆ. ಹೊಸಪೇಟೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಗೋದಾಮು ಕಾಮಗಾರಿ ಪೂರ್ಣಗೊಳಿಸಲಾಗುವುದು.
ಸಂಘಕ್ಕೆ ವಿವಿಧ ಮೂಲಗಳಿಂದ ಎರಡೂವರೆ ಲಕ್ಷ ರೂ ಲಾಭ ಬರುತ್ತಿದ್ದು ಕಳೆದ ಸಾಲಿನಲ್ಲಿ 26 ಲಕ್ಷ ರೂ ಲಾಭ ಗಳಿಸಿದೆ.ಇಂದು ನಾನು ಅದ್ಯಕ್ಷನಾಗಿದ್ದು ಎಲ್ಲಾ ನಿರ್ದೇಶಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘವು ಮತ್ತಷ್ಟು ಲಾಭ ಗಳಿಸಲು ಶ್ರಮಿಸಲಾಗುವುದು ಎಂದು ನಾರಾಯಣಸ್ವಾಮಿ ತಿಳಿಸಿದರು.
ಮಾಜಿ ಅದ್ಯಕ್ಷ ಮುತ್ತಸಾಗರ ಸೋಮಶೇಖರ್ ಮಾತನಾಡಿ ನಾನು ಅದ್ಯಕ್ಷನಾಗಿದ್ದ ಅವಧಿಯಲ್ಲಿ ಸಂಘದ ಅಭಿವೃದ್ಧಿಗೆ ಶ್ರಮಿಸಿದ್ದು ಕಳೆದ ಸಾಲಿನಲ್ಲಿ ಸಂಘಕ್ಕೆ 26 ಲಕ್ಷ ರೂ ಲಾಭ ಗಳಿಸಲು ಶ್ರಮಿಸಿದ್ದೇನೆ.3 ಕೋಟಿ ಹಣವನ್ನು ಬಿಡಿಸಿಸಿ ಬ್ಯಾಂಕಿನಲ್ಲಿ ಡೆಪಾಸಿಟ್ ಇಡಲಾಗಿದೆ.ನೂತನ ಗೋದಾಮು ನಿರ್ಮಾಣದಿಂದ ವರ್ಷಕ್ಕೆ 10 ಲಕ್ಷ ರೂ ಬಾಡಿಗೆ ಹಣ ಸಂಘಕ್ಕೆ ಉಳಿಯುತ್ತದೆ.ಜೊತೆಗೆ ಹೊಸಪೇಟೆ ಬಳಿಯಲ್ಲಿ ಟಿಎಪಿಸಿಎಂಎಸ್ ವತಿಯಿಂದ ಕಲ್ಯಾಣಮಂಟಪ ನಿರ್ಮಿಸುವ ಉದ್ದೇಶವಿದೆ ಎಂದು ಸೋಮಶೇಖರ್ ವಿವರಿಸಿದರು.
ನಿರ್ದೇಶಕ ಹೊನ್ನಾಪುರ ಶಿವಪ್ರಸಾದ್ ಮಾತನಾಡಿ ನಾರಾಯಣಸ್ವಾಮಿಯವರು ಈ ಹಿಂದೆ ಅದ್ಯಕ್ಷರಾಗಿದ್ದ ಅವಧಿಯಲ್ಲಿ ಸೊಸೈಟಿ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಇದರ ಅನುಭವ ಅವರಿಗಿದ್ದು ಸೊಸೈಟಿಯು ಮತ್ತಷ್ಟು ಅಭಿವೃದ್ಧಿಗೆ ಸಹಕಾರಿಯಾಗಲಿದೆ. ರಾಗಿ ಖರೀದಿ ಕೇಂದ್ರ ನಿರ್ಮಾಣದಿಂದ ಕಸಬಾ ಮಾಡಬಾಳ್ ಹೋಬಳಿ ರೈತರಿಗೆ ಅನುಕೂಲವಾಗಲಿದೆ.ಶಾಸಕ ಬಾಲಕೃಷ್ಣ ಎಚ್.ಎನ್.ಅಶೋಕ್ ಅವರ ಅಣತಿಯಂತೆ ಅದ್ಯಕ್ಷೀಯ ಚುನಾವಣೆಯಲ್ಲಿ ನಾರಾಯಣಸ್ವಾಮಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದ್ದು ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ಶಿವಪ್ರಸಾದ್ ಸ್ಪಷ್ಟಪಡಿಸಿದರು.
ಉಪಾದ್ಯಕ್ಷ ನಂಜುಂಡಯ್ಯ,ನಿರ್ದೇಶಕರಾದ ಕಲ್ಯಾಗೇಟ್ ಮಂಜುನಾಥ್, ಎನ್ಇಎಸ್ ರವೀಶ್, ತಿಗಳರಪಾಳ್ಯ ರಮೇಶ್, ಹನುಮಾಪುರ ರಾಜಣ್ಣ, ಗೀತಾ ರಂಗನಾಥ್, ಹೊಸಪೇಟೆ ಮಹಾದೇವ್, ಶಿಲ್ಪಶ್ರೀ ವಿಜಯ್, ಪುರಸಭೆ ಸದಸ್ಯ ಎಚ್.ಜೆ. ಪುರುಷೋತ್ತಮ್, ಪ್ರಗತಿಪರ ನಿರ್ದೇಶಕ ಟಿ.ಎಸ್.ಗಂಗಯ್ಯ, ಕಾರ್ಯದರ್ಶಿ ನಾರಾಯಣ್, ಎಚ್.ಜೆ.ಪ್ರವೀಣ್, ಚಂದ್ರಣ್ಣ, ತಿರುಮಲೆ ಶ್ರೀನಿವಾಸ್, ಮುಖಂಡರಾದ ಚಕ್ರಬಾವಿ ಮಾರೇಗೌಡ, ಅಬ್ದುಲ್ ರೆಹಮಾನ್, ಎಚ್.ಎನ್.ಭರತ್, ಚಕ್ರಬಾವಿ ದೀಪಕ್, ಪಂಚಾಕ್ಷರಿ, ಬಿ.ಎಂ.ಲಿಂಗೇಶ್ ಸೇರಿದಂತೆ ಮತ್ತಿತರಿದ್ದರು.