ಹೊಸಕೋಟೆ: ದಲಿತ ಸಮುದಾಯ ಸ್ವಾತಂತ್ರ್ಯ ಬಂದಾಗಿನಿಂದ ಆಳುವ ರಾಜಕೀಯ ಪಕ್ಷಗಳಿಗೆ ಗುಲಾಮರಾಗಿದ್ದಾರೆ ಹೊರತು ಎಂದಿಗೂ ನಾವು ಆಳಬೇಕು ಎನ್ನುವ ಕಲ್ಪನೆಯನ್ನು ಸಹ ಹೊಂದಿಲ್ಲ ಎಂದು ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಆರ್ಪಿಐ ಕಚೇರಿಯಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಧಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನ ಬರೆದ ಡಾ.ಬಿ.ಆರ್. ಅಂಬೇಡ್ಕರ್ ಅವರು ದಲಿತರು ಕೂಡ ರಾಜ ಕೀಯವಾಗಿ, ಸಾಮಾಜಿಕವಾಗಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಬೇಕು.
ಪ್ರಮುಖವಾಗಿ ರಾಜಕೀಯವಾಗಿ ಆಳುವ ವರ್ಗಕ್ಕೆ ಗುಲಾಮರಾಗಿ ಬದುಕುವ ಬದಲಾಗಿ ದಲಿತರು ಕೂಡ ಆಳುವ ವರ್ಗವಾಗಲಿ ಎಂದು ಆರ್ಪಿಐ ಪಕ್ಷ ಸ್ಥಾಪಿಸಿದ್ರು. ಆದರೆ ದಶಕಗಳು ಕಳೆದರೂ ಅಂಬೇಡ್ಕರ್ ಸಂವಿಧಾನದಡಿಯಲ್ಲಿ ಜೀವಿಸುವ ನಾವು ಚುನವಣೆ ಸಂಧರ್ಭದಲ್ಲಿ ಬಿಜೆಪಿ, ಜೆಡಿ(ಎಸ್), ಕಾಂಗ್ರೆಸ್ನಂತಹ ಆಳುವ ವರ್ಗಕ್ಕೆ ಜೈಕಾರ ಹಾಕುತ್ತಿರುವುದು ಶೋಚನೀಯ.
ಈ ನಿಟ್ಟಿನಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರ್ಪಿಐ ಪಕ್ಷ ಸಂಘಟನೆ ಮಾಡಿ ಪ್ರತಿ ಚುನಾವಣೆಯಲ್ಲಿ ಅಭ್ಯರ್ಥಿಗಳು ಸ್ಪರ್ಧಿಸಿ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದರು.ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಲಘುಮಯ್ಯ ಮಾತನಾಡಿ ಆರ್ಪಿಐ ಸ್ಥಾಪನೆಯಾಗಿ ದಶಕಗಳೆ ಕಳೆದರೂ ಸಹ ಅದರ ಪೋಷಣೆ ಆಗಿಲ್ಲ.
ಆದ್ದರಿಂದ ದಲಿತರು ಇನ್ನಾದರೂ ಜಾಗೃತರಾಗಿ ಇತರೆ ರಾಜಕೀಯ ಪಕ್ಷಗಳ ಆಸೆ ಆಮಿಷಕ್ಕೆ ಬಲಿಯಾಗದೆ ನಮ್ಮದೆ ಪಕ್ಷವನ್ನು ಸಂಘಟಿಸಿ ಅಧಿಕಾರಕ್ಕೆ ತಂದು ಆಳುವ ವರ್ಗ ನಾವಾಗಬೇಕು. ಜಾಗೃತರಾಗದೆ ಅಂಬೇಡ್ಕರ್ ಹೆಸರು ಪ್ರತಿಪಾದಿಸಿ, ಕಾಂಗ್ರೆಸ್, ಬಿಜೆಪಿಗೆ ಜೈ ಎನ್ನುವುದಾರೆ ಅಂಬೇಡ್ಕರ್ ಮೀಸಲಾತಿ ನಮಗೆ ಏಕೆ ಬೇಕು. ಎಂದರು.
ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಯಳಚಹಳ್ಳಿ ಶಶಿಕುಮಾರ್, ರಾಜ್ಯಾಧ್ಯಕ್ಷ ಹಾಸನ ಸತೀಶ್, ಕಾರ್ಯಾಧ್ಯಕ್ಷ ಗೋವಿಂದಯ್ಯ, ಪ್ರ.ಕಾರ್ಯದರ್ಶಿ ವೆಂಕಟರಮಣಪ್ಪ, ಕೋಲಾರ ಕಾರ್ಯದರ್ಶಿ ಭದ್ರಿ ನಾರಾಯಣ್, ಯುವ ಘಟಕದ ಕಾರ್ಯದರ್ಶಿ ನಾಗೇಶ್ ಹಾಜರಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಧಾಧಿಕಾರಿಗಳಾಗಿ ಜಿಲ್ಲಾಧ್ಯಕ್ಷ-ಅರೆಹಳ್ಳಿ ಎ.ಮುನಿರಾಜು, ಗೌರವಾಧ್ಯಕ್ಷ-ಉಮ್ಮಲು ನಾಗರಾಜ್, ಕಾರ್ಯಾಧ್ಯಕ್ಷ-ಮುನಿಆಂಜಿನಪ್ಪ, ಉಪಾಧ್ಯಕ್ಷ-ಶಿವರಾಮ್, ಪ್ರ.ಕಾರ್ಯದರ್ಶಿ-ಮುನಿರಾಜು, ಖಜಾಂಚಿ-ರವಿಕುಮಾರ್, ಸಂ.ಕಾರ್ಯದರ್ಶಿ-ಶಿವರಾಜ್, ಕಾರ್ಮಿಕ ಘಟಕದ ಅಧ್ಯಕ್ಷ-ವೆಂಕಟೇಶ್, ಉಪಾಧ್ಯಕ್ಷ-ಪ್ರಸಾದ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷ-ಆಶಾರಾಣಿ, ತಾಲೂಕು ಅಧ್ಯಕ್ಷ-ರಾಜಪ್ಪ, ಉಪಾಧ್ಯಕ್ಷ-ಶ್ರೀನಿವಾಸ್, ಪ್ರ.ಕಾರ್ಯದರ್ಶಿ-ವೈ.ಬಿ.ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷೆ-ಕವಿತಾ, ಆಯ್ಕೆಯಾದರು.