LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
National News

ಅಮೆರಿಕ ಅಧ್ಯಕ್ಷರಾಗಿ Donald Trump: ವಲಸಿಗರಲ್ಲಿ ಗಡಿಪಾರಾವ ಆತಂಕ, ಪ್ರಚೋದನಾತ್ಮಕ ಸಂದೇಶಗಳ ಕುರಿತು ಸಂಬಂಧಪಟ್ಟ ಇಲಾಖೆಯಿಂದ ತನಿಖೆ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆಲುವು ಸಾಧಿಸುತ್ತಿದ್ದಂತೆಯೇ ಅಮೆರಿಕದಲ್ಲಿರುವ ವಲಸಿಗರಲ್ಲಿ ಆತಂಕ ಆರಂಭವಾಗಿದೆ.

ಹೌದು... ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್‌ ಟ್ರಂಪ್ ಗೆಲುವು, ಜಾಗತಿಕ ಮಟ್ಟದಲ್ಲಿ ಲಕ್ಷಾಂತರ ವಲಸಿಗರು ಅಥವಾ ಸಂಭಾವ್ಯ ವಲಸಿಗರಲ್ಲಿ ಆತಂಕವನ್ನುಂಟು ಮಾಡಿದೆ.

ವಲಸೆಯನ್ನು ನಿಯಂತ್ರಿಸುವುದಾಗಿ ಟ್ರಂಪ್ ಈ ಹಿಂದೆ ಪ್ರತಿಜ್ಞೆ ಮಾಡಿದ್ದು, ಇದೀಗ ಅವರು ಅಧಿಕಾರಕ್ಕೆ ಏರಿರುವ ಕಾರಣ ವಲಸಿಗರು ತಮ್ಮ ಯೋಜನೆಗಳನ್ನು ಬದಲಾಯಿಸುತ್ತಿದ್ದು, ವಲಸಿಗರ ಕಳ್ಳಸಾಗಾಣಿಕೆ ಹೆಚ್ಚಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಟ್ರಂಪ್ ಅವರ ಈ ಹಿಂದಿನ ಆಡಳಿತ ಅವಧಿಯಲ್ಲಿ ಮೆಕ್ಸಿಕೊ ಗಡಿ ಭಾಗದ ನಗರಗಳಲ್ಲಿ ವಲಸಿಗರ ಸಂಖ್ಯೆ ಅಧಿಕವಾಗಿತ್ತು. ಕೆಲವು ಗುಂಪುಗಳು ಅವರನ್ನು ಸುಲಿಗೆ ಮಾಡುವುದು, ಅಪಹರಣ ಮಾಡುವುದು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವಂತೆ ಮಾಡುತ್ತಿದ್ದವು. ಪ್ರತಿನಿತ್ಯ ನೂರಾರು ಜನರು ವಲಸೆ ಬರುತ್ತಿದ್ದರು ಮತ್ತು ಅಮೆರಿಕದ ಪೌರತ್ವ ಪಡೆಯಲು ಹಲವಾರು ವರ್ಷಗಳಿಂದ ಕಾಯುತ್ತಿದ್ದರು. 2023ರಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಸಿಬಿಪಿ ಎಂಬ ಯೋಜನೆ ಮೂಲಕ ವಲಸಿಗರಿಗೆ ಕೆಲವು ಅನುಕೂಲಗಳನ್ನು ಮಾಡಿಕೊಟ್ಟಿದ್ದರು. ಇದರಿಂದಾಗಿ ಗಡಿಭಾಗದಲ್ಲಿದ್ದವರು ಕಾನೂನಿನ ಅಡಿಯಲ್ಲಿ ಅಮೆರಿಕದೊಳಗೆ ಪ್ರವೇಶಿಸಲು ಪ್ರಯತ್ನಿಸಿದರು.

ಇದೇ ಕಾರಣಕ್ಕೆ ಟ್ರಂಪ್ ವಲಸಿಗರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದು, 'ಇದು ಬೆಲೆಯ ಪ್ರಶ್ನೆಯಲ್ಲ... ನಮಗೆ ಯಾವುದೇ ಆಯ್ಕೆಯಿಲ್ಲ.. "ಕೊಲೆಗಾರರು" ಮತ್ತು "ಡ್ರಗ್ ಲಾರ್ಡ್‌ಗಳು" ರಾಷ್ಟ್ರೀಯ ಭದ್ರತೆಗೆ ಬೆದರಿಕೆ' ಎಂದು ಹೇಳುವ ಮೂಲಕ ತಮ್ಮ ವಲಸೆ ನೀತಿ ಕುರಿತು ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

18ನೇ ಶತಮಾನದ ಯುದ್ಧಕಾಲದ ಕಾನೂನಾಗಿರುವ ಏಲಿಯನ್ ಎನಿಮೀಸ್ ಆಕ್ಟ್ ರೀತಿಯ ಕಾನೂನು ಜಾರಿಗೆ ತರುವ ಕುರಿತು ಸುಳಿವು ನೀಡಿದ್ದಾರೆ. ಟ್ರಂಪ್ ಸಲಹೆಗಾರ ಸ್ಟೀಫನ್ ಮಿಲ್ಲರ್ ಪ್ರಕಾರ, 'ಈ ಕಾನೂನು ದಾಖಲೆರಹಿತ ವಲಸಿಗರಿಗೆ ಸರಿಯಾದ ಪ್ರಕ್ರಿಯೆಯನ್ನು ಅಮಾನತುಗೊಳಿಸಲು ಅನುಮತಿಸುತ್ತದೆ. ಟ್ರಂಪ್ ಅವರ ತಂಡವು ಬಂಡಾಯ ಕಾಯಿದೆಯ ಬಳಕೆಯನ್ನು ಮೌಲ್ಯಮಾಪನ ಮಾಡುತ್ತಿದೆ ಎಂದು ಮಿಲ್ಲರ್ ಹೇಳಿದ್ದಾರೆ.

ಸಾಮೂಹಿಕ ಗಡಿಪಾರು

ಇನ್ನು ಸಿಬಿಪಿಯನ್ನು ಕೊನೆಗೊಳಿಸುವ ಯೋಚನೆಯನ್ನು ಟ್ರಂಪ್ ಹೊಂದಿದ್ದು, ನಿರಾಶ್ರಿತರ ಪುನರ್‌ವಸತಿಗೆ ನಿರ್ಬಂಧ ಹೇರುವ ಮತ್ತು ಸಾಮೂಹಿಕ ಗಡಿಪಾರು ಮಾಡುವ ಸಾಧ್ಯತೆಗಳಿವೆ. ಸಾಮೂಹಿಕ ಗಡಿಪಾರಿನ ಬಗ್ಗೆ ಟ್ರಂಪ್ ಈ ಹಿಂದೆಯೂ ಎಚ್ಚರಿಕೆ ನೀಡಿದ್ದರು ಆದರೆ ಅದನ್ನು ಕಾರ್ಯಗತಗೊಳಿಸಿರಲಿಲ್ಲ ಆದರೆ ಈ ಬಾರಿ ಈ ಬಗ್ಗೆ ಗಮನಹರಿಸುವ ಸಾಧ್ಯತೆ ಹೆಚ್ಚಿದೆ.

ಟ್ರಂಪ್‌ ಅವರ ವಲಸಿಗರ ನೀತಿಯಿಂದ, ವಲಸಿಗರು ರೋಸಿ ಹೋಗಿದ್ದರು. ಈಗ ಮತ್ತೆ ಅದು ಮರುಕಳಿಸುತ್ತದೆ ಎಂಬ ಭೀತಿ ವಲಸಿಗರಲ್ಲಿ ಆವರಿಸಿದೆ. ವಲಸಿಗರ ಕಳ್ಳಸಾಗಣೆಯ ಆದಾಯವು ಮಾದಕ ವಸ್ತುಗಳ ಜಾಲದ ಅದಾಯಕ್ಕಿಂತ ಹೆಚ್ಚಾಗಿರುವುದರಿಂದ ಯೋಜಿತ ಅಪರಾಧಗಳು ಹೆಚ್ಚಾಗುತ್ತವೆ ಎಂದು ಅಮೆರಿಕದಲಿದ್ದ ಮೆಕ್ಸಿಕೊದ ಮಾಜಿ ರಾಯಭಾರಿ ಮಾರ್ಥ ಬರ್ಸೇನಾ ಅವರು ಅಭಿಪ್ರಾಯಪಟ್ಟಿದ್ದಾರೆ. ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವಲಸಿಗರ ಸಮಿತಿಯ ಪ್ರಕಾರ ವಿಶ್ವದಲ್ಲಿ 28.1 ಕೋಟಿ ವಲಸಿಗರಿದ್ದಾರೆ. ಅಂದರೆ ಜಾಗತಿಕ ಜನಸಂಖ್ಯೆಯ ಶೇ 3.6 ರಷ್ಟು ವಲಸಿಗರಿದ್ದಾರೆ.

ಪ್ರಚೋದನಾತ್ಮಕ ಸಂದೇಶಗಳ ಕುರಿತು FBI ತನಿಖೆ

ಅತ್ತ ಡೊನಾಲ್ಡ್ ಟ್ರಂಪ್ ಅಧಿಕಾರದ ಚುಕ್ಕಾಣಿ ಹಿಡಿಯಲು ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಗುಲಾಮಗಿರಿಯನ್ನು ಪ್ರಚೋದಿಸುವ ಜನಾಂಗೀಯ ಆರೋಪದ ಅನಾಮಧೇಯ ಪಠ್ಯ ಸಂದೇಶಗಳ ಗೊಂದಲದ ಸರಣಿಯೂ ಆರಂಭವಾಗಿದೆ. ಅಲಬಾಮಾ, ಕ್ಯಾಲಿಫೋರ್ನಿಯಾ, ಓಹಿಯೋ, ಪೆನ್ಸಿಲ್ವೇನಿಯಾ ಮತ್ತು ಟೆನ್ನೆಸ್ಸಿಯಂತಹ ರಾಜ್ಯಗಳಲ್ಲಿ ಕಪ್ಪು ವ್ಯಕ್ತಿಗಳಿಗೆ ಗುಲಾಮಗಿರಿಯನ್ನು ಪ್ರಚೋದಿಸುವ ಜನಾಂಗೀಯ ಆರೋಪದ ಪ್ರಚೋದನಾತ್ಮಕ ಸಂದೇಶಗಳು ಬರುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಎಫ್‌ಬಿಐ ಮತ್ತು ಎಫ್‌ಸಿಸಿ ಸೇರಿದಂತೆ ಫೆಡರಲ್ ಏಜೆನ್ಸಿಗಳು ತನಿಖೆ ಮಾಡುತ್ತಿವೆ.

ಈ ಸಂದೇಶಗಳ ಮೂಲವನ್ನು ಪತ್ತೆಹಚ್ಚಲು ಮತ್ತು ಜನಾಂಗೀಯ ಬೆದರಿಕೆಯ ವ್ಯಾಪಕ ಅಭಿಯಾನದ ಭಾಗವಾಗಿದೆಯೇ ಎಂದು ನಿರ್ಧರಿಸಲು ರಾಜ್ಯ ಕಾನೂನು ಜಾರಿಯೊಂದಿಗೆ ಕೆಲಸ ಮಾಡುತ್ತಿದೆ. ನಾಗರಿಕ ಹಕ್ಕುಗಳ ವಕೀಲರು ಸಂದೇಶಗಳು ರವಾನೆಯಾಗಿರುವ ಸಮಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು