LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಅರ್ಧಶತಕ ವಂಚಿತ ಕರುಣ್ ನಾಯರ್ ಮುಂಬೈ ವಿರುದ್ಧ ವಿದರ್ಭ ಸುಭದ್ರ

ಮುಂಬೈ ಬೌಲರ್ ಗಳ ಮೇಲೆ ನಿರಂತರ ಸವಾರಿ ನಡೆಸಿದ ವಿದರ್ಭ ತಂಡದ ಬ್ಯಾಟರ್ ಗಳು ಪ್ರಥಮ ದಿನಾಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 308 ರನ್ ಕಲೆ ಹಾಕಿದ್ದಾರೆ. ಒಂದು ವೇಳೆ 2ನೇ ದಿನ ಮುಂಬೈ ಬೌಲರ್ ಗಳು ಬೇಗನೇ ವಿಕೆಟ್ ಪಡೆಯದೇ ಹೋದಲ್ಲಿ ಬೃಹತ್ ಮೊತ್ತ ಪೇರಿಸುವುದು ಖಚಿತವಾಗಿದೆ.

ನಾಗ್ಪುರದಲ್ಲಿ ನಡೆಯುತ್ತಿರುವ ರಣಜಿ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವಿದರ್ಭ ತಂಡದ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. ತಂಡದ ಮೊತ್ತ 39 ಆಗಿದ್ದಾಗ 4 ರನ್ ಗಳಿಸಿದ್ದ ಆರಂಭಿಕ ಅಥರ್ವ ತಾಯಿಡೆ ಅವರನ್ನು ಮುಂಬೈನ ಎಡಗೈ ಮಧ್ಯಮ ವೇಗಿ ರಾಯ್ ಸ್ಟನ್ ಡಯಾಸ್ ಅವರು ಕೀಪರ್ ಆಕಾಶ್ ಆನಂದ್ ಗೆ ಕ್ಯಾಚ್ ನೀಡಿಸುವಲ್ಲಿ ಯಶಸ್ವಿಯಾದರು.

ಬಳಿಕ ಕ್ರೀಸಿಗೆ ಆಗಮಿಸಿದ ಪಾರ್ಥ್ ರೇಖಾಡೆ ಅವರು 23 ರನ್ ಗಳಿಸಿದರು. ಧ್ರುವ್ ಶೋರೆ ಜೊತೆಗೆ 2ನೇ ವಿಕೆಟ್ ಗೆ 54 ರನ್ ಗಳ ಜೊತೆಯಾಟವಾಡಿದರು. ಅವರಿಗೆ ಎಡಗೈ ಸ್ಪಿನ್ನರ್ ಶ್ಯಾಮ್ಸ್ ಮುಲಾನಿ ಅವರು ಪೆವಿಲಿಯನ್ ದಾರಿ ತೋರಿದರು.ಆ ಬಳಿಕ ಕ್ರೀಸಿಗೆ ಆಗಮಿಸಿದ ದನೀಶ್ ಮಲೆವಾರ್ ಮತ್ತು ಆರಂಭಿಕ ಧ್ರುವ ಶೋರೆ ಇಬ್ಬರೂ ಸೇರಿ ಕುಸಿತವನ್ನು ತಡೆಯಲು ಯತ್ನಿಸಿದರು. ಆದರೆ ತಂಡದ ಮೊತ್ತ 144 ಆಗಿದ್ದ ಸಂದರ್ಭದಲ್ಲಿ ಮುಲಾನಿ ಅವರು ಮತ್ತೆ ವಿದರ್ಭ ತಂಡಕ್ಕೆ ಆಘಾತ ನೀಡಿದರು. 109 ಎಸೆತಗಳಿಂದ 79 ರನ್ ಗಳಿಸಿದ್ದ ಧ್ರುವ ಶೋರೆ 9 ಬೌಂಡರಿ ಬಾರಿಸಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು