LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Crime News

ಊಟ ತಿಂಡಿಗಾಗಿ ಬಾಲಮಂದಿರ ಸೇರುತ್ತಿದ್ದ ಬಾಲಕ!

ಬೆಂಗಳೂರು: ಕುಡುಕ ತಂದೆ, ಕೂಲಿ ಕೆಲಸ ಮಾಡೊ ತಾಯಿ. ಮನೆಯಲ್ಲಿ ನೆಮ್ಮದಿ ಇಲ್ಲದ ಬಾಲಕ ಮಾಡ್ತಾ ಇದ್ದಿದ್ದು ಏನು ಗೊತ್ತಾ?ತನ್ನ ಹೊಟ್ಟೆ ತುಂಬಿಸಿಕೊಳ್ಳಲು ಪೊಲೀಸರಿಗು ಕೆಲಸ ಕೊಡ್ತಿದ್ದ. ಹಾಗಾದ್ರೆ ಆ ಬಾಲಕ ಮಾಡ್ತಾ ಇದ್ದ ಕೆಲಸ ಏನು? ಈ ಬಾಲಕನ ಸ್ಥಿತಿ ಕೇಳಿದ್ರೆ ನಿಜಕ್ಕು ಅಯ್ಯೋ ಅನಿಸುತ್ತೆ..! ಹೊಟ್ಟೆ ತುಂಬ ಊಟ, ಕಣ್ ತುಂಬ ನಿದ್ದೆ ಸಿಗತ್ತೆ ಅಂತಾನೆ ಮನೆ ಬಿಟ್ಟು ಬರ್ತಿದ್ದ.

ಹಾಗೆ ಓದಿನಲ್ಲೂ ಕೂಡ ಅಷ್ಟೊಂದು ಆಸಕ್ತಿ ಇರದೇ ಮನೆ ಬಿಡ್ತಿದ್ದ ಬಾಲಕ ಇನ್ಸ್ ಪೆಕ್ಟರ್ ಉದಯ ರವಿ ಅವರ ಮಾನವೀಯ ಕೆಲಸದಿಂದ ಮತ್ತೆ ಪೋಷಕರ ಮಡಿಲು ಸೇರಿದ್ದ.ಶಂಕರಪುರ ಠಾಣೆ ಪೊಲೀಸ್ ಇನ್ಸ್ ಪೆಕ್ಟರ್ ಆಗಿರುವ ಉದಯ ರವಿ ಕಳೆದ ಆರು ದಿನದ ಹಿಂದೆ ರಾತ್ರಿ ಹೊತ್ತು ಫುಟ್ಪಾತ್ ನಲ್ಲಿ ನಿಂತಿದ್ದ ಬಾಲಕನನ್ನು ವಿಚಾರಿಸಿದಾಗ ತಂದೆ ತಾಯಿ ಗೊತ್ತಿಲ್ಲ,ಊರು ಗೊತ್ತಿಲ್ಲ ಎಂದಿದ್ದ. ಬಳಿಕ ಬಾಲ ಮಂದಿರಕ್ಕೆ ಬಾಲಕನನ್ನು ಬಿಟ್ಟು ಬಂದಿದ್ದ ಪೊಲೀಸರು ಬಾಲಕನ ಪೋಷಕರ ಪತ್ತೆಗೆ ಪತ್ರಿಕಾ ಪ್ರಕಟಣೆ ಕೂಡ ಹೊರಡಿಸಿದ್ದರು.

ಪೊಲೀಸ್ ಪ್ರಕಟಣೆ ನೋಡಿ ಬಾಲಕನ ಪೋಷಕರು ಆತನನ್ನು ಕರೆದೊಯ್ಯಲು ಅತ್ತಿಬೆಲೆ ಠಾಣೆಗೆ ತೆರಳಿದ್ದಾರೆ.ಬಾಲಕನ ವಿಚಾರಣೆ ವೇಳೆ ಕುತೂಹಲಕರ ಸಂಗತಿ ಬಯಲಿಗೆ ಬಂದಿದೆ. ಬಾಲಕನಿಗೆ ಮನೆಯಲ್ಲಿ ಸರಿಯಾಗಿ ಊಟ ತಿಂಡಿ ಸಿಗ್ತಿರಲಿಲ್ಲ. ಹಾಗಾಗಿ ಮನೆ ಬಿಟ್ಟು ಬಂದು ಫುಟ್ಪಾತ್ ನಲ್ಲಿ ನಿಂತು ಕೊಳ್ತಿದ್ದ. ಪೊಲೀಸರು ಆತನನ್ನ ಬಾಲಮಂದಿರಕ್ಕೆ ಬಿಟ್ಟು ಬರ್ತಿದ್ರು ಬಾಲ ಮಂದಿರದಲ್ಲಿ ಊಟ ತಿಂಡಿ ಮಾಡಿ ನೆಮ್ಮದಿಯಾಗಿ ಇರ್ತಿದ್ದ.

ಇದನ್ನೇ ಕೆಲಸವನ್ನಾಗಿ ಮಾಡಿಕೊಂಡಿದ್ದ ಬಾಲಕ ಈ ಹಿಂದೆ ಕೂಡ ಹಲವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಿಕ್ಕಿದ್ದ. ಅತ್ತಿಬೆಲೆ, ಸರ್ಜಾಪುರ, ಹೊಸಕೋಟೆ ಪೊಲೀಸರ ಕೈಗೆ ಸಿಕ್ಕಿದ್ದ ಬಾಲ ಮಂದಿರಕ್ಕೆ ಬಿಟ್ಟು ಬಂದಿದ್ದ ಪೊಲೀಸರು. ಬಳಿಕ ಪೋಷಕರು ಬಂದು ಕರೆದುಕೊಂಡು ಹೋಗ್ತಿದ್ರು, ಈ ಬಾರಿ ಮತ್ತೆ ಶಂಕರಪುರ ಪೊಲೀಸ್ ಠಾಣೆಬಳಿ ಪತ್ತೆಯಾಗಿದ್ದ ಮಕ್ಕಳನ್ನು ಬೇಕಾಬಿಟ್ಟಿ ಬಿಡೊಪೋಷಕರಿಗೆ ಇದು ಪಾಠವಾಗಿದೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು