LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Feature Article

ಕನ್ನಡ ರಾಜ್ಯೋತ್ಸವ

ಓ ಕನ್ನಡಿಗರೇ ಏಳಿ ಎದ್ದೇಳಿ
ಕನ್ನಡ ರಾಜ್ಯೋತ್ಸವ ಮಾಡೋಣ ಬನ್ನಿ
ಬಾವುಟ ಹಾರಿಸಿ ಘೋಷಣೆ ಕೂಗಿ
ಎಲ್ಲರೂ ಒಂದಾಗಿ ಕುಣಿದು ಕುಪ್ಪಳಿಸಿ
ಕನ್ನಡ ರಾಜ್ಯೋತ್ಸವ ಮಾಡೋಣ

ತೊರಣ ಕಟ್ಟಿ ಹೂಮಾಲೆ ಹಾಕಿ
ಬಣ್ಣ ಬಣ್ಣದ ವಿದ್ಯುತ್ ದೀಪಗಳ ಬೆಳಗಿ
ಅದ್ದೂರಿ ಸುಂದರ ವೇದಿಕೆಯ ಕಟ್ಟಿ
ದೇವಿ ಮೂರ್ತಿಯ ಚೆಂದದಿ ಸಿಂಗರಿಸಿ
ಕನ್ನಡ ರಾಜ್ಯೋತ್ಸವ ಮಾಡೋಣ ಬನ್ನಿ

ತೆರೆಮರೆ ಕನ್ನಡದ ಸಾಧಕರ ಹುಡುಕಿ
ಶಾಲುಗಳ ಹೊದಿಸಿ ಹಾರಗಳ ಹಾಕಿ
ಅವರಾಡುವ ಕನ್ನಡದ ಸವಿ ನುಡಿ ಕೇಳಿ
ದೇವಿಗೆ ಆರತಿ ಬೆಳಗಿ ಹೂಮಾಲೆ ಹಾಕಿ
ಕನ್ನಡ ರಾಜ್ಯೋತ್ಸವ ಮಾಡೋಣ ಬನ್ನಿ
ಬರಿ ಈ ಆಡಂಬರ ಸಂಭ್ರಮವು ಸಾಕೆ ?
ಜೊತೆಗೆ ಕಟ್ಟೋಣ ತಾಯಿಗೆ ನಿಜವಾದ ವೇದಿಕೆ
ತನು ಕನ್ನಡ ಮನ ಕನ್ನಡ ನುಡಿ ಕನ್ನಡ ವೆಂದು
ಪ್ರತಿಯೊಬ್ಬ ಕನ್ನಡಿಗ ಛಲದಲ್ಲಿ ನಿಂದು
ಕನ್ನಡದ ನಿಜ ಉತ್ಸವ ಮಾಡೋಣ ಬನ್ನಿ
ತಾಯಿ ಮಕ್ಕಳ ಮೊದಲ ಗುರುವಾಗಿ
ಮಮ್ಮಿ ಸಂಸ್ಕöÈತಿಯ ತೊಳೆದು ಅಳಿಸಿ
ಕನ್ನಡದ ಮುದ್ದಾದ ಮಾತು ಕಲಿಸಿ
ಅಚ್ಚ ಕನ್ನಡಿಗರ ಬಲದ ಸೇನೆ ಬೆಳಸಿ
ಕನ್ನಡದ ನಿಜ ಉತ್ಸವ ಮಾಡೋಣ ಬನ್ನಿ
ಹಲೋ ಬೈ ಬೈಗೆ ಹೇಳಿರಿ ಟಾಟಾ
ಮಾಡಿ ನಮಸ್ತೆ ವಂದನೆಯ ಪಾಠ
ಇಂಗ್ಲೀಷ್ ಬಾಷೆ ಬರಿ ವ್ಯವಹಾಕ್ಕಿರಲಿ
ಕಸ್ತೂರಿ ಕನ್ನಡ ಮನವ ತುಂಬಿರಲಿ
ಕನ್ನಡದ ನಿಜ ಉತ್ಸವ ಮಾಡೋಣ ಬನ್ನಿ
ಕನ್ನಡ ಪುಸ್ತಕ ಕತೆಕವನಗಳ ನಂಟು
ಬೆಳೆಯಲಿ ಮಕ್ಕಳ ಜೊತೆಯಲಿ ಒಂದಿಷ್ಟು
ಕುವೆAಪು ,ಬೇಂದ್ರೆ ಮಾಸ್ತಿ ಕವಿಗಳ ಸಾಲು
ಮುದ ನೀಡಲಿ ಆಗಾಗ ಮನಕೆ ಇಂತಿಷ್ಟು
ಕನ್ನಡದ ನಿಜ ಉತ್ಸವ ಮಾಡೋಣ ಬನ್ನಿ
ಬಾರದವರಿಗೆ ಕನ್ನಡ ಭಾಷೆಯ ಕಲಿಸಿ
ನೀವೂ ಕನ್ನಡವ ಉಳಿಸಿ ಬೆಳಸಿ
ಆಡಳಿತ ಭಾಷೆ ಮಾದ್ಯಮಿಕ ಶಿಕ್ಷಣ ಪೂರ್ಣ ಕನ್ನಡವಾಗಿ
ಉಳಿಯಲಿ, ಬೆಳೆಯಲಿ, ಬೆಳಗಲಿ ಕನ್ನಡ
ಓ ಕನ್ನಡಿಗರೇ ಏಳಿ ಎದ್ದೇಳಿ
ಕನ್ನಡ ರಾಜ್ಯೋತ್ಸವ ಮಾಡೋಣ ಬನ್ನಿ

ಕವನ ರಚನೆ
ನಾಗವೇಣಿ ರಂಗನ್

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು