LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಗಂಗಾಮತಸ್ಥ ಬೆಸ್ತರ ಸಂಘದಿಂದ ಅಂಬಿಗರ ಚೌಡಯ್ಯ ಜಯಂತಿ ಆಚರಣೆ

ದೇವನಹಳ್ಳಿ: 12 ನೇ ಶತಮಾನ ಸಮಸಮಾಜ ನಿರ್ಮಾಣದ ಕ್ರಾಂತಿಯೋಗಿಗಳು ಶರಣರ ಸಮಾಜಸುಧಾರಣೆಯ ಮುನ್ನುಡಿ ಬರೆದ ಶತಮಾನ ಬಸವಣ್ಣನವರ ಹಾದಿಯಲ್ಲಿ ನಡೆದ ಅನೇಕ ಶರಣರಲ್ಲಿ ಅಂಬಿಗರಚೌಡಯ್ಯನವರು ಮುಂಚೂಣಿಯಲ್ಲಿ ಸ್ಮರಿಸಬೇಕಾದ ಮಹಾಶರಣರು ಎಂದು ಅಂಬಿಗರ ಚೌಡಯ್ಯ ಯುವಕ ಸಂಘದ ಅದ್ಯಕ್ಷ ತಾಲುಕು ಡಿಎ.ಸತೀಶ ಹೇಳಿದರು

ದೇವನಹಳ್ಳಿ ಪಟ್ಟಣದ ಗಂಗಾಪರಮೇಶ್ವರಿ ದೇವಾಲಯದಲ್ಲಿ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯನವರ ಜಯಂತಿ ಕಾಯಕ್ರಮದಲ್ಲಿ ಅವರ ಭಾವಚಿತ್ರ ಪೂಜಿಸಿ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು. ಗಂಗಾಮತಸ್ಥ ಬೆಸ್ತಕುಲದಲ್ಲಿ ಜನಿಸಿ ಕಾಯಕದಲ್ಲಿ ಅಂಬಿಗನ ಕೆಲಸ ಮಾಡುತ್ತಾ ದೋಣಿ ನಡೆಸುತ್ತಾ ಬಸವಾದಿ ಶರಣರ ಸಂದೆಶಗಳನ್ನು ಪ್ರಪಂಚಕ್ಕೆ ಸಾರಿದ ಮಹಾತ್ಮರು ಚೌಡಯ್ಯನವರು ಅವರ ಹೆಸರಿನಲ್ಲಿ ಒಂದು ಭವನ ನಿರ್ಮಾಣಕ್ಕೆ ಆ ಸಮಾಜದವರು ಬೇಡಿಕೆಯನ್ನು ಪ್ರತಿ ವರ್ಷ ಸಲ್ಲಿಸುತ್ತಿದ್ದರೂ ಸಹ ಅಂಬಿಗರ ಚೌಡಯ್ಯನವರ ಸ್ಮಾರಕ ಭವನ ನಿರ್ಮಾರ್ಣಕ್ಕೆ ಸರ್ಕಾರ ಭೂಮಿ ಕೊಟ್ಟಿಲ್ಲ ಎಂದರು.

ನಮ್ಮ ಜನಾಂಗವನ್ನು ಗುರ್ತಿಸಿದವರು ಮೊದಲಿಗೆಮಾಜಿ ಪ್ರಧಾನಮಂತ್ರಿ ಎಚ್.ಡಿ..ದೇವೇಗೌಡರು ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮಸಮಾಜವನ್ನು ಎಸ್.ಟಿಗೆ ಸೇರಿಸುವ ಬಗ್ಗೆ ಪ್ರಸ್ತಾಪಿಸಿದ್ದಾರೆ ಇದು ಪ್ರಸ್ತಾಪವಾಗದೇ ಅದಿಕೃತವಾಗಬೇಕು ಈ ಇಬ್ಬರೂ ಸಹ ನಮ್ಮ ಸಮಾಜದಿಂದ ಅಭಿನಂದನಾರ್ಹರು ಎಂದರು. ಶ್ರೀರಾಮಮಂದಿರ ನಿರ್ಮಾಣದ 500 ವರ್ಷಗಳ ಕನಸು ನನಸಾಗಿ ಬಾಲರಾಮಮಂದಿರ ನಿರ್ಮಾಣವಾಗಿ ಒಂದು ವರ್ಷವಾದ ಹಿನ್ನೆಲೆಯಲ್ಲಿ ನಮ್ಮ ದೇವಾಲಯದಲ್ಲಿ ಸೀತಾರಾಮರ ಭಾವಚಿತ್ರವಿರಿಸಿ ಎರಡು ದಿನ ನಿರಂತರ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ ಲಾಡು ಪ್ರಸಾದ ವಿತರಣೆ, ಡಾ. ಶಿವಕುಮಾರಸ್ವಾಮೀಜಿ ಪುಣ್ಯಸ್ಮರಣೆ ಅಂಗವಾಗಿ ಇಂದು ಅನ್ನದಾಸೋಹ ಮಾಡಲಾಗುತ್ತಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಗಂಗಾಮತಸ್ಥರ ಸಂಘದಅದ್ಯಕ್ಷ ರಾಮಾಂಜಿನಪ್ಪ, ಪ್ರಧಾನಕಾರ್ಯದರ್ಶಿ ಶ್ರೀನಿವಾಸ, ಸದಸ್ಯರಾದ ಮೇಸ್ತ್ರಿ ಗೋಪಾಲಪ್ಪ, ರಾಮಣ್ಣ, ಮುನಿರಾಜು, ಮಂಜುನಾಥ್, ಮುನಿಕೃಷ್ಣಪ್ಪ,ಪುಟ್ಟರಾಜು, ರಾಘವೇಂದ್ರ, ವೆಂಕಟೇಶ್, ವೆಲ್ಡಿಂಗ್ಮುನಿರಾಜ, ರಾಜೇಶ ರವಿಕುಮಾರ, ಮನೋಜ,ಮಾಜಿ ಕಸಾಪ ತಾಲುಕು ಅಧ್ಯಕ್ಷ ನಾರಾಯಣಸ್ವಾಮಿ, ಉಪೇಂದ್ರ ಮುಂತಾದವರು ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು