LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಗಾಂಧೀಜಿ, ಶಾಸ್ತ್ರಿಜಿ ರವರ ಸರಳತೆ ಅನುಕರಣೀಯ: ವಸಂತ ರಾಜು

ಆನೇಕಲ್: ಸತ್ಯಮೇವ ಜಯತೇ, ಅಹಿಂಸೆಯೇ ಪರಮ ಧರ್ಮ ಎಂಬ ನಂಬಿಕೆ ತತ್ವಗಳಿಂದ ಗಾಂಧೀಜಿ ರವರು ಅಮರರಾದರೆ, ಜೈ ಜವಾನ್ ಜೈ ಕಿಸಾನ್, ಖ್ಯಾತಿಯ ಲಾಲ್ ಬಹಾದ್ದೂರ್ ಶಾಸ್ತ್ರಿ ರವರು ದೇಶಕ್ಕಾಗಿ ಒಪ್ಪತ್ತು ಉಪವಾಸ ಮಾಡಿ ಎಂಬ ಕರೆ ನೀಡಿ ದೇಶವಾಸಿಗಳನ್ನು ಒಗ್ಗೂಡಿಸಿದ ಅಜೇಯ ಶಕ್ತಿ ಎಂದು ಗಾಂಧೀ ಜಯಂತಿ ಸಮಿತಿ ಮತ್ತು ಗಾಂಧೀ ಕುಟೀರ ಟ್ರಸ್ಟ್ ನ ಅಧ್ಯಕ್ಷ ಎ. ವಿ. ವಸಂತರಾಜು ತಿಳಿಸಿದರು.

ಅವರು ಸಮಿತಿ ವತಿಯಿಂದ ಏರ್ಪಡಿಸಿದ್ದ 55ನೆಯ ಗಾಂಧೀ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ ಇಬ್ಬರೂ ಮಹನೀಯರ ಆದರ್ಶ ಮತ್ತು ತತ್ವಗಳು ಇಂದಿಗೂ, ಎಂದಿಗೂ ಅನುಕರಣೀಯವಾಗಿದೆ. ಗಾಂಧೀಜಿ ತಮ್ಮ ಅನುಯಾಯಿಗಳ ಸಹಕಾರದೊಂದಿಗೆ ಭಾರತಾಂಬೆಗೆ ದಾಸ್ಯದಿಂದ ಮುಕ್ತಿ ಕೊಡಿಸಿದರೆ ಶಾಸ್ತ್ರೀಜಿ ರವರು ಸ್ವಾಭಿಮಾನ ಹಾಗೂ ಸ್ವಾವಲಂಬನೆಗೆ ನಾಂದಿ ಹಾಡಿದರು. ಇಬ್ಬರೂ ಮಹನೀಯರು ಸ್ವಾತಂತ್ರ ನಂತರ ದೇಶಕ್ಕಾಗಿ ಪ್ರಾಣ ತೆತ್ತರು ಎಂದು ಗದ್ಘದಿತರಾದರು.

ಗೌರವ ಅಧ್ಯಕ್ಷ ರುದ್ರಸ್ವಾಮಿ ಮಾತನಾಡಿ ಇಂದಿನ ರಾಜಕಾರಣಿಗಳು ಗಾಂಧೀಜಿ, ವಲ್ಲಭ ಭಾಯಿ ಪಟೇಲ್, ಶಾಸ್ತ್ರೀಜಿ, ದೀನದಯಾಳ್ ಜಿ ರವರುಗಳ ಹೆಸರುಗಳನ್ನು ಸ್ವಾರ್ಥಕ್ಕಾಗಿ ಧಾರಾಳವಾಗಿ ಬಳಸಿಕೊಳ್ಳುತ್ತಾರೆಯೇ ವಿನಃ ಆಚರಣೆ, ಅನುಸ್ಠಾನಕ್ಕಲ್ಲ ಎಂಬುದು ಜನಜನಿತವಾಗಿದೆ. ದಿನ ನಿತ್ಯ ಪತ್ರಿಕೆ, ವಾಹಿನಿಗಳನ್ನು ನೋಡುತ್ತಿದ್ದರೇ ನಿಂದನೆ, ಅವಾಚ್ಯ ಪದ ಬಳಕೆ, ಪರಸ್ಪರ ಕೆಸರೆರಚಾಟ ರಾಜಕಾರಣಿಗಳಿಗೆ, ಜನಪ್ರತಿನಿಧಿಗಳಿಗೆ ಶೋಭೆ ತರುವುದಿಲ್ಲ. ಯುವ ಜನತೆ ರಾಷ್ಪ್ರ ರಾಜಕಾರಣದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಅಭಿವೃದ್ಧಶೀಲ ದೇಶದ ಕನಸನ್ನು ಸಾಕಾರಮಾಡಬೇಕೆಂದು ಕೋರಿದರು.

ಶಾಂತಿನಿಕೇತನ ಶಾಲಾ ಮಕ್ಕಳು ದೇಶಭಕ್ತಿ ಗೀತೆಗಳನ್ನು ಹಾಡಿದರು. ಇತ್ತೀಚೆಗೆ ಮೈಸೂರು ವಿವಿ ಇಂದ ಡಾಕ್ಟರೇಟ್ ಪಡೆದ ಡಾ. ಭಾರ್ಗವರವರನ್ನು ಸಮಿತಿ ವತಿಯಿಂದ ಗೌರವಿಸಲಾಯಿತು.ಉಪಾಧ್ಯಕ್ಷ ರವಿ ಶಾಸ್ತ್ರಿ, ಕಾರ್ಯದರ್ಶಿ ಕೃಷ್ಣರಾಜು, ಸಮಿತಿಯ ಮಲ್ಲೇಶ್, ಸತ್ಯನಾರಾಯಣ ರಾಜು, ಗೋಪಾಲ ಕೃಷ್ಣ, ವೆಂಕಟರಾಜು, ನವೀನ್, ಗೋಪಿ, ಶುಭಕರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು