LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಜೇಸಿಐ ಸಂಸ್ಥೆಯಿಂದ ಹಲವಾರು ಸಮಾಜಮುಖಿ ಕೆಲಸ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಗಂಗಾಧರ್ ಹೇಳಿಕೆ

ದೇವನಹಳ್ಳಿ: ಈ ಸಂಸ್ಥೆ ಇಡಿ ದೇವನಹಳ್ಳಿಯಲ್ಲಿ ಸಮಾಜ ಸೇವೆಯನ್ನು ಮಾಡಿಕೊಂಡು ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಗಂಗಾಧರ್ ತಿಳಿಸಿದರು.

ಪಟ್ಟಣದ ನಗರೇಶ್ವರ ಕಲ್ಯಾಣ ಮಂಟಪದಲ್ಲಿ ಜೇಸಿಐ ದೇವನಹಳ್ಳಿ ಸಂಸ್ಥೆಯು ಏರ್ಪಡಿಸಿದ್ದ 22ನೇ ವರ್ಷದ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಬವನ್ನು ಉದ್ಘಾಟಿಸಿ ಮಾತನಾಡಿದ ಅವರು ಭವಿಷ್ಯದಲ್ಲಿ ಉತ್ತಮ ಸಮಾಜಮುಖಿಯಾಗಿ ರೂಪಿಸಿಕೊಳ್ಳಲು ಸಮಾಜಕ್ಕೆ ಕಾಣಿಕೆಯಾಗಬಲ್ಲ ಯುವಜನತೆಯನ್ನು ರೂಪಿಸುವ ಹಾದಿಯಲ್ಲಿ ಜೇಸಿಐ ಸಂಸ್ಥೆ ಮುಂಚೂಣಿಯಲ್ಲಿದೆ ಯುವಕರಿಗೆ ವ್ಯಕ್ತಿತ್ವ ವಿಕಸನ ತರಪೇತಿಗಳನ್ನು ಮಾಡಿ ಮನ ಮುಟ್ಟುವಂತಹ ಕೆಲಸ ಮಾಡಬೇಕು ಎಂದರು

ನೂತನ ಅಧ್ಯಕ್ಷರಾದ ಶಿವಕುಮಾರ್ ಗೆ ಪ್ರಮಾಣ ವಚನ ಭೋದಿಸಿದ ವಲಯ 14ರ ಅಧ್ಯಕ್ಷ ಜೇಸಿ ವಿಜಯಕುಮಾರ್ ಮಾತನಾಡಿ ಜೇಸಿಐ ದೇವನಹಳ್ಳಿ 2003 ಈ ಸಂಸ್ಥೆ ಸ್ಥಾಪನೆಗೊಂಡು ಈಗ 21 ವರ್ಷ ತುಂಬಿ 22ನೇ ವರ್ಷಕ್ಕೆ ಬಂದಿದೆ ಎಂದರೆ ಅದು ಪೂರ್ವಾಧ್ಯಕ್ಷರುಗಳ ಸಹಕಾರ ಜೇಸಿಐ ಸಂಸ್ಥೆಯು 120 ದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ ಜೇಸಿಐ ಸಂಸ್ಥೆಯು ಯವಕರಿಗೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಮಾಜದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಲು ಏನಾದರು ಕಾಣಿಕೆ ನೀಡುವಂತಾಗುವ ತರಪೇತಿಯನ್ನು ಸಂಸ್ಥೆ ನೀಡುತ್ತದೆ ಎಂದು ತಿಳಿಸಿದರು

ಜೇಸಿಐ ದೇವನಹಳ್ಳಿ 2023-24 ನೇ ಅಧ್ಯಕ್ಷ ಜೇಸಿ ಕಿರಣ್ ಯಾಧವ್ ಮಾತನಾಡಿ ತನ್ನ ಈ ವರ್ಷದ ಹಲವಾರು ಕಾರ್ಯಕ್ರಮಗಳಿಗೆ ಸಂಸ್ಥೆಯ ಪೂರ್ವಾಧ್ಯಕ್ಷರುಗಳು ಮತ್ತು ಪದಾಧಿಕಾರಿಗಳು ಸಹಕಾರ ನೀಡಿದ್ದೀರಿ ಜೇಸಿಐ ದೇವನಹಳ್ಳಿ ಸಂಸ್ಥೆಗೆಸುದೀರ್ಘ ಇತಿಹಾಸವಿದ್ದು ಕಳೆದ 21 ವರ್ಷ
ಗಳಿಂದ ಸಮಾಜದಲ್ಲಿ ಹತ್ತು ಹಲವು ಸೇವಾ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದುಮುಂದಿನ ನೂತನ ಅಧ್ಯಕ್ಷರು ಸಹ ಮುಂದು ವರಸಿಕೊಂಡು ಹೊಗುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಪಿಳ್ಳರಾಜುರವರಿಗೆ ಸನ್ಮಾನಿಸಿ ಗೌರವಿಸಲಾಯಿತುಕಾರ್ಯಕ್ರಮದಲ್ಲಿ ನಿಕಟಪೂರ್ವಾಧ್ಯಕ್ಷ ವೇಣು
ಗೋಪಾಲ್, ನರಸಿಂಹಮೂರ್ತಿ, ಕಾರ್ಯದರ್ಶಿ ಸಿದ್ದಪ್ಪ, ಜೇಸಿ ಅನಿಲ್, ಯೋಜನಾ ನಿರ್ದೇಶಕರಾದ ಜೇಸಿ ಡಿ.ಎನ್ ಸುರೇಶ್ ಕುಮಾರ್, ನೂತನ ಅಧ್ಯಕ್ಶ ಶಿವಕುಮಾರ್ ಮತ್ತು ಪೂರ್ವಾಧ್ಯಕ್ಷರುಗಳಾದ ಜಿ.ಎ ರವೀಂದ್ರ, ಎಂ, ಆನಂದ, ಪಿಳ್ಳಪ್ಪ, ಡಿ.ಎನ್ ನಾರಾಯಾಣಸ್ವಾಮಿ, ವಿಜಯಕುಮಾರ್, ಎನ್.ರಮೇಶ್, ಭಾಗ್ಯರಮೇಶ್, ವಿ.ಮಂಜುನಾಥ್, ಕೆ.ನಾಗೇಂದ್ರಪ್ರಸಾದ್, ಬಾಬು ಗೌಡ, ಪ್ರಭುದೇವ್ ನರಸಿಂಹಮೂರ್ತಿ, ಮುನಿಕೃಷ್ಣ, ಹರ್ಷ, ಪ್ರವೀಣ್ ಕುಮಾರ್ ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು