LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಡಾ:ವೇದಾವತಿ.ಎಸ್ ರವರ `ಕಲ್ಯ’ ಪರಿಚಯಾತ್ಮಕ ಅಧ್ಯಯನ ಕೃತಿ ಬಿಡುಗಡೆ

ನೆಲಮಂಗಲ: ಅಭಿನವ ಪ್ರಕಾಶನ ಪ್ರಕಟಿಸುತ್ತಿರುವ ಡಾ. ಎಚ್.ಎಸ್.ಗೋಪಾಲ ರಾವ್ ನೆನಪಿನ ಗ್ರಂಥ ಮಾಲೆಯ 3ನೆಯ ಪುಸ್ತಕವಾಗಿ ಡಾ. ವೇದಾವತಿ.ಎಸ್ ಅವರ ‘ಕಲ್ಯ: ಪರಿಚಯಾತ್ಮಕ ಅಧ್ಯಯನ’ ಕೃತಿಯನ್ನು 1-1-2025, ಬುಧವಾರದಂದು ಅರಸಿನಕುಂಟೆಯ ಗೋಪಾಲ ರಾವ್ ಅವರ ಸ್ವಗೃಹದಲ್ಲಿ ಸರಳವಾಗಿ ಬಿಡುಗಡೆ ಮಾಡಲಾಯಿತು.
ಎಚ್.ಎಸ್.ಗೋಪಾಲರಾಯರಿಗಿದ್ದ ಧೀಶಕ್ತಿಯಿಂದ ತಾವೂ ಅನುಪಮ ಸಾಹಿತ್ಯದ ಕೆಲಸ ಮಾಡಿದರು ಹಾಗೂ ಬೇರೆಯವರಿಂದಲೂ ಮಾದರಿಯ ಕೆಲಸಗಳನ್ನು ಮಾಡಿಸಿದರು ಎಂದು ಗಂಗಾ ಇಂಟರ್ನ್ಯಾಷನಲ್ ಶಾಲೆಯ ಕಾರ್ಯದರ್ಶಿ ಶ್ರೀಮತಿ ಅನುಪಮ ಲಕ್ಷ್ಮೀನರಸಿಂಹ ಅವರು ಹೇಳಿದರು.

ಅವರು ಅರಿಸಿನಕುಂಟೆಯ ಅಕ್ಷರದಲ್ಲಿ ಅಭಿನವ ಪ್ರಕಾಶನವು ಗೋಪಾಲರಾಯರ ನೆನಪಿನಲ್ಲಿ ಪ್ರತಿ ತಿಂಗಳ ಮೊದಲ ದಿನ ಹೊರತರುತ್ತಿರುವ ಗ್ರಂಥಮಾಲೆಯ ಮೂರನೆಯ ಕೃತಿ ಡಾ. ವೇದಾವತಿ.ಎಸ್ ಅವರ ‘ಕಲ್ಯ- ಒಂದು ಪರಿಚಯಾತ್ಮಕ ಅಧ್ಯಯನ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಅಭಿನವದ ನ.ರವಿಕುಮಾರ್ ಮಾತನಾಡಿ ನಮ್ಮ ಪರಂಪರೆಯಲ್ಲಿ ನೋವನ್ನು ಕಡಿಮೆ ಮಾಡಿಕೊಳ್ಳುವ ವ್ಯಕ್ತಿತ್ವ ಗಳ ಘನತೆಯನ್ನು ನಮ್ಮ ಅಂತಕರಣಕ್ಕಿಳಿಸಿ ಕೊಳ್ಳುವ ಪ್ರಯತ್ನವಾಗಿ ಆಚರಣೆಗಳನ್ನು ಮಾಡುತ್ತ ಬಂದಿದ್ದು, ಗೋಪಾಲರಾಯರ ಅಗಲಿಕೆಯಿಂದಾದ ಖಾಲಿಸ್ಥಾನವನ್ನು ತುಂಬಿಕೊಳ್ಳಲು ಪ್ರತಿ ತಿಂಗಳಿಗೊಂದರಂತೆ ಪುಸ್ತಕ ಪ್ರಕಟಿಸುವ ಯೋಚನೆ ಹೊಳೆಯಿತು ಎಂದರು.

ಗೋಪಾಲರಾಯರ ಸಾಂಸ್ಕೃತಿಕ ಕೆಲಸಗಳು ಮತ್ತು ಘನತೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸವನ್ನು ಮಾಡಬೇಕಿದೆ ಎಂದರು.ಈ ಮಾಲಿಕೆಯ ಮೊದಲ ಕೃತಿಯ ಲೇಖಕರಾದ ಲಕ್ಮ್ಷಣಮೂರ್ತಿ ಅವರು ಮಾತನಾಡಿ ಕಥೆ, ಕಾದಂಬರಿ ಬರೆಯುವುದು ಸುಲಭ. ಆದರೆ ಸಂಶೋಧನಾತ್ಮಕ ಬರಹಗಳನ್ಮು ಮಾಡುವುದು ತುಂಬಾ ಕಷ್ಟ. ಅದಕ್ಕಾಗಿಯೇ ಕೆಲವರು ಮಾತ್ರ ತೊಡಗಿಸಿಕೊಳ್ಳುತ್ತಾರೆ ಎಂದರು.ಈ ಸಂದರ್ಭದಲ್ಲಿ ನೆಲಗದರನಹಳ್ಳಿಯಲ್ಲಿನ ಗಂಗಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀಮತಿ ಅನುಪಮ ಲಕ್ಷ್ಮೀನರಸಿಂಹ, ಲೇಖಕಿ ಡಾ. ವೇದಾವತಿ. ಎಸ್, ಅಭಿನವದ ಶ್ರೀ ನ.ರವಿಕುಮಾರ್, ಶ್ರೀ ಕೆ.ವಿ.ಲಕ್ಷ್ಮಣಮೂರ್ತಿ, ಶ್ರೀ ಪ್ರಜ್ವಲ್ ಎಲ್. ಸಿಂಹ, ಶ್ರೀ ಎನ್.ವರದರಾಜ ಶ್ರೇಷ್ಠಿ, ಗೋಪಾಲ ರಾವ್ ಕುಟುಂಬವರ್ಗದವರು ಹಾಗೂ ಮಿತ್ರರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು