LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ತಾಯಿಗಾಗಿ ಸ್ಮಾರಕ ನಿರ್ಮಿಸಿದ ದಲಿತ ಮುಖಂಡ

ನೆಲಮಂಗಲ: ದಲಿತ ಚಳವಳಿಯ ಪ್ರೇರಕ ಶಕ್ತಿಯಾಗಿದ್ದ, ಬಡ ಮಕ್ಕಳಿಗೆ ಅನ್ನ ದಾಸೋಹ ಮತ್ತು ಶಿಕ್ಷಣ ನೀಡಿ ನಿಸ್ವಾರ್ಥ ಕಾಯಕಯೋಗಿಯಾಗಿದ ದಿ. ಮಾತಾಜಿ ತಿಮ್ಮಕ್ಕನವರ ಸ್ಮಾರಕವನ್ನು ಮಾತಾಜಿಯವರ ಐಕ್ಯ ಸ್ಥಳವಾದ ತಾಲ್ಲೂಕಿನ ಚಿಕ್ಕಮಾರನಹಳ್ಳಿ, ಪುಷ್ಪ ಪ್ರಜ್ಞಾಎಸ್ಟೇಟ್ ನಲ್ಲಿ ಉದ್ಘಾಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷಸಮಿತಿ ಸಂಸ್ಥಾಪಕರಾದ ದಾದಾ ಸಾಹೇಬ್ ಡಾ. ಎನ್.ಮೂರ್ತಿ ಮಾತನಾಡಿ ಮಾತಾಜಿಯವರು ಪ್ರಾಣಿ, ಪಕ್ಷಿ, ಮರಗಿಡಗಳಿಗೆ ನೀರೆರೆದು ಪೋಷಿಸಿವೃಕ್ಷ ಮಾತೆಯಾಗಿದ್ದರು. ಜನ, ಜಾನುವಾರುಗಳಹಲವು ರೋಗ ರುಜಿನಗಳ ನಿವಾರಣೆಗೆ ಭವವೈದ್ಯೆಯಾಗಿದ್ದವರು.ಅಲ್ಲದೆ ಮಾತಾಜಿಯವರು ಜಾನಪದ ಕಲೆಯ ಜೀವನಾಡಿಯಾಗಿ, ಸಾರ್ಥಕ ಬದುಕು ಸಾಧಿಸಿದ ಮಹಾ ಸಾಧಕರಾಗಿದ ನನ್ನ ತಾಯಿಯನ್ನು ಅವಿಸ್ಮರಣೀಯವಾಗಿರಿಸಲು ಸ್ಮಾರಕ ನಿರ್ಮಾಣ ಮಾಡಲಾಗಿದೆ ಎಂದರು.

ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠ,ಪೀಠಾಧ್ಯಕ್ಷರಾದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಯವರು ಮೈತ್ರಿವನ ಹಾಗೂ ಸ್ಮಾರಕ ಉದ್ಘಾಟನೆ ಮಾಡಿದರು ಮತ್ತು ಅವರ ಜೀವನ ಮತ್ತು ಸಾಧನೆಯ ಪುಸ್ತಕ ಬಿಡುಗಡೆ ಮಾಡಿದರು.ಕಾರ್ಯಕ್ರಮದಲ್ಲಿ ಪಾಲನಹಳ್ಳಿ ಮಠದ ಸಿದ್ದರಾಜು ಸ್ವಾಮೀಜಿ, ಮಹಾ ಹಿರಿಯ ಬಿಕ್ಕುಣಿಯವರಾದ ಬುದ್ಧಮ್ಮ ಭಂತೇಜಿರವರು ಮತ್ತು ಮಹಾಬಿಕ್ಕು ಗಳು, ನಾಗಸೇನೆ, ಬಿ. ಆರ್ ಭಾಸ್ಕರ್ ಪ್ರಸಾದ್, ಕನಕೆನಹಳ್ಳಿ ಕೃಷ್ಣಪ್ಪ, ಆSS ರಾಜ್ಯ ಅಧ್ಯಕ್ಷರಾದ ಮುನಿರಾಜು, ಭೀಮರಾಜು, ಸಾಮ್ರಾಟ್ ಅರುಣ್ ಕುಮಾರ್, ಮಲ್ಲೇಶ್, ಗಂಗಾಧರ್, ಸೇರಿದಂತೆ ರಾಜ್ಯಮಟ್ಟದ ವಿವಿಧ ರಾಜಕೀಯ ಪಕ್ಷಗಳ ಹಾಗೂ ರಾಜ್ಯಮಟ್ಟದ ಹಲವಾರು ಸಂಘಟನೆಗಳ ಮುಖಂಡರು ಮತ್ತು ಹೋರಾಟಗಾರರು ಹಾಗೂ ಪದಾಧಿಕಾರಿಗಳು ಭಾಗಿಯಾಗಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು