LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Crime News

ನಿಧಿಯಾಸೆ: ಸೊಸೆ ಬಲಿಗೆ ಮುಂದಾಗಿದ್ದ ಅತ್ತೆ ಮಾವ

ಬಾಗಲಕೋಟೆ: ನಿಧಿಯಾಸೆಗಾಗಿ ಸೊಸೆಯನ್ನೇ ಬಲಿ ಕೊಡಲು ಅತ್ತೆ ಮಾವ ಮುಂದಾಗಿದ್ದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಯಂಡಿಗೇರಿಯಲ್ಲಿ ನಡೆದಿದೆ.

ಮುತ್ತಕ್ಕ ಪೂಜಾರ ಎಂಬಾಕೆಯನ್ನು ಜೀವಂತ ಸಮಾಧಿ ಮಾಡಲು ಆಖೆಯ ಅತ್ತೆ ಮಾವ ನಾದಿನಿ ಮುಂದಾಗಿದ್ದು, ಇದಕ್ಕಾಗಿ ತೋಟದಲ್ಲಿ 5 ಅಡಿ ಅಗಲ, 5 ಅಡಿ ಆಳದ ಗುಂಡಿ ತೆಗೆದಿದ್ದರು ಎನ್ನಲಾಗಿದೆ.ಸುದ್ದಿ ತಿಳಿದ ಸಂಬಂಧಿಕರು ಹಾಗೂ ಮುತ್ತಕ್ಕನ ಪೋಷಕರು ಯಂಡಿಗೇರಿಗೆ ಬರಲು ಸಿದ್ಧತೆ ನಡೆಸಿದ್ದಾರೆ ಎಂಬ ಸುದ್ದಿ ತಿಳಿದ ಮುತ್ತಕ್ಕನ ಅತ್ತೆ ಮಾವ ಗುಂಡಿಯನ್ನು ಮುಚ್ಚಿದ್ದರು ಎಂದು ಹೇಳಲಾಗಿದೆ.

ಮುತ್ತಕ್ಕನ ಅಣ್ಣ ನಾಗರೆಡ್ಡಿ ಎಂಬುವರು ಪೊಲೀಸರಿಗೆ ಈ ವಿಷಯ ತಿಳಿಸಿದ ಪರಿಣಾಮ ಪೊಲೀಸರು ಗುಂಡಿ ತೆಗೆದಿದ್ದರೂ ಎನ್ನಲಾದ ಸ್ಥಳಕ್ಕೆ ತೆರಳು ಪರಿಶೀಲನೆ ನಡೆಸಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST