LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಬೇಸಿಗೆಯಲ್ಲಿ ಬೆಟ್ಟ ಗುಡ್ಡಗಳಿಗೆ ಬೆಂಕಿ ಬೀಳದಂತೆ ಎಚ್ಚರವಹಿಸಿ..! ಪ್ರಾಣಿ, ಪಕ್ಷಿ, ಸಸ್ಯ ಸಂಪತ್ತನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ: ಎನ್.ಜಿ.ಗೋಪಾಲ್

ನೆಲಮಂಗಲ: ಬೇಸಿಗೆ ಕಾಲ ಶುರುವಾಗುತ್ತಿದೆ ಗಿಡ ಮರಗಳು ಒಣಗುತ್ತಿವೆ ಬೆಟ್ಟ ಗುಡ್ಡ ಅರಣ್ಯ ಪ್ರದೇಶ ಮತ್ತು ಗಿರಿಬೆಟ್ಟಗಳಲ್ಲಿನ ಧಾರ್ಮಿಕ ಕ್ಷೇತ್ರಗಳಿಗೆ ಬರುವಂತಹ ಯಾತ್ರಾರ್ಥಿಗಳು ದಯಮಾಡಿ ತಮಗರಿವಿಲ್ಲದೇ ಬೆಂಕಿಕಡ್ಡಿ ಗೀರಿ ಎಸೆಯುವುದನ್ನು ಮಾಡದಿರುವಂತೆ ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎನ್.ಜಿ.ಗೋಪಾಲ್ ವಿನಂತಿಸಿದ್ದಾರೆ.

ಮನುಷ್ಯರಿಂದ ಕಾಡಿಗೆ ಬೆಂಕಿ ಬೀಳುವ ಸಂದರ್ಭ ಉದ್ದೇಶ ಪೂರ್ವಕ ಆಗಿಯೂ ಇರಬಹುದು ಅಥವಾ ಅಚಾನಕ್ಕಾಗಿ ಆದರೂ ಸಂಭವಿಸಬಹುದು. ಪ್ರವಾಸಿಗರು ಬೆಟ್ಟವನ್ನು ಹತ್ತುವಾಗ ಮಾರ್ಗದ ಮಧ್ಯೆ ಸೇದಿ ಬಿಸಾಕುವ ಬೀಡಿ, ಸಿಗರೇಟು, ಬೆಂಕಿಕಡ್ಡಿ ಗೀರುವುದು ಅದನ್ನು ನಂದಿಸದೇ ತಮಗರಿವಿಲ್ಲದಂತೆ ಬಿಸಾಡುವುದರಿಂದ ಆ ಭಾಗದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಬೆಟ್ಟದಲ್ಲಿರುವ ಒಣಗಿದ ಹುಲ್ಲು ಗಿಡಗೆಂಟೆಗಳಿಗೆ ಬಹುಬೇಗನೆ ಬೆಂಕಿಯುತಾಗಿ ಹೊತ್ತಿಉರಿದು ಬಹುತೇಕ ಭಾಗವನ್ನು ಆವರಿಸಿ ಕಾಳ್ಗಿಚ್ಚು ಸಂಭವಿಸಬಹುದು.
ಇದರ ನಡುವೆ ಆಹಾರ ನೀರು ನೆರಳನ್ನು ಆಶ್ರಯಿಸಿರಬಹುದಾದ ಹಲವಾರು ಸಸ್ತನಿಗಳು, ಪ್ರಾಣಿ ಪಕ್ಷಿಗಳ ಜೀವಕ್ಕೆ ಹಾನಿಯುಂಟಾಗುತ್ತದೆ. ದಯಮಾಡಿ ಇದನ್ನು ಮನದಲ್ಲಿರಿಸಿಕೊಂಡು ಪ್ರಾಣಿ ಪಕ್ಷಿಗಳ ಸಂಕುಲವನ್ನು ಸಂರಕ್ಷಿಸಲು ಸಹೃದಯಿ ನಾಗರೀಕರು ಎಚ್ಚರವಹಿಸಬೇಕೆಂದು ಅವರು ಕೋರಿದ್ದಾರೆ.

ಬೇಸಿಗೆಯ ಬಿರುಬಿಸಿಲಿನಿಂದ ಪ್ರಾಣಿ ಪಕ್ಷಿಗಳು ನೀರು ಆಹಾರ ನೆರಳಿನ ಜೊತೆಗೆ ತಮ್ಮ ಅಸ್ಥಿತ್ವಕ್ಕಾಗಿ ಪರದಾಡುತ್ತಿರುತ್ತವೆ. ನೀರು ಆಹಾರಕ್ಕೆ ಹಪಿಹಪಿಸುವ ಹೊತ್ತಲ್ಲಿ ಬೆಂಕಿ ಅವಘಡದಿಂದ ಹಲವಾರು ಪ್ರಾಣಿಪಕ್ಷಿಗಳು ದಿಢೀರಂತ ಜೀವ ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚಿರುತ್ತದೆ. ಆದ್ದರಿಂದ ಪ್ರವಾಸಿಗರು ಬೆಟ್ಟವನ್ನು ಹತ್ತುವ ಹಂತದಲ್ಲಿ ಸಾಧ್ಯವಾದರೆ ಆ ಮಾರ್ಗದಲ್ಲಿ ಅಲ್ಲಲ್ಲೇ ಆಹಾರ, ಕುಡಿಯುವ ನೀರನ್ನು ಸಂಗ್ರಹಿಸಿಡಿ. ಬೆಟ್ಟ-ಗಿರಿಧಾಮಗಳಲ್ಲಿ ಗಿಡ ಮರಗಳ ಸಹಿತ ಪ್ರಾಣಿಪಕ್ಷಿಗಳನ್ನುಳಿಸಬೇಕು. ಪರಿಸರವನ್ನು ಸಂರಕ್ಷಿಸಿಕೊಳ್ಳಲು ಆಸಕ್ತಿತಾಳಬೇಕೆಂದು ಸಾರ್ವಜನಿಕರಲ್ಲಿ ಪ್ರಾರ್ಥಿಸಿದ್ದಾರೆ.

ಬೇಸಿಗೆಯ ದಿನಗಳಲ್ಲಿ ಮನುಷ್ಯರಾದ ನಾವು ಅವುಗಳ ಬಗ್ಗೆಯೂ ಯೋಚಿಸಬೇಕು ಸಹಕರಿಸಿ ಉಪಕರಿಸಬೇಕಿದೆ. ಎಲ್ಲರಿಗೂ ತಿಳಿಸಿದಿರುವಂತೆ ಈಗಾಗಲೇ ಹಲವು ಬಗೆಯ ಪಕ್ಷಿಗಳ ಸಂತತಿ ಕ್ಷೀಣಿಸಿದ್ದು ಹಲವಾರು ಪ್ರಾಣಿಪಕ್ಷಿಗಳು ನಶಿಸಿ ಹೋಗುತ್ತಿವೆ. ಈ ಸಂಬಂಧ ತಾಲ್ಲೂಕಿನ ಸಾರ್ವಜನಿಕರಿಗೆ ಕರಪತ್ರಗಳನ್ನು ಹಂಚುವ ಮೂಲಕ ಅರಿವನ್ನುಂಟು ಮಾಡುವ ಮತ್ತು ತಾಲ್ಲೂಕು ಮಟ್ಟದ ಎಲ್ಲ ಅಧಿಕಾರಿಗಳ ಗಮನಸೆಳೆಯುವ ಕಾರ್ಯಕ್ಕೆ ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ಮುಂದಾಗಿದ್ದು ಇದೇ ಫೆಬ್ರವರಿ ತಿಂಗಳ ಕೊನೆಯಿಂದ ಮೇ ಮಾಹೆಯ ಕೊನೆಯವರೆಗೂ ಎಲ್ಲರ ಸಹಕಾರ ಕೋರಿದ್ದು ಮಾನವೀಯ ಕಾರ್ಯಕ್ಕೆ ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು