LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಟಿ20: ನಾಲ್ಕನೇ ಪಂದ್ಯದಲ್ಲೂ ಭಾರತಕ್ಕೆ ಮಣಿದ ಬಾಂಗ್ಲಾದೇಶ

ಸಿಲೆಟ್, ಬಾಂಗ್ಲಾದೇಶ: ಮತ್ತೆ ಪ್ರಾಬಲ್ಯ ಮೆರೆದ ಭಾರತದ ವನಿತೆಯರು ಸೋಮವಾರ ನಾಲ್ಕನೇ ಟಿ-20 ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಡಕ್ವರ್ಥ್ ಲೂಯಿಸ್ ನಿಯಮದಡಿ 56 ರನ್‍ಗಳಿಂದ ಮಣಿಸಿದರು. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 4-0 ಮುನ್ನಡೆ ಸಾಧಿಸಿದರು.

ಮಳೆಯಿಂದಾಗಿ ಪಂದ್ಯವನ್ನು 14 ಓವರ್‍ಗಳಿಗೆ ಸೀಮಿತ ಮಾಡಲಾಯಿತು.ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ನಾಯಕಿ ಹರ್ಮನ್‍ಪ್ರೀತ್ ಕೌರ್ (38) ಅವರ ಬ್ಯಾಟಿಂಗ್ ಬಲದಿಂದ ನಿಗದಿತ ಓವರ್‍ಗಳಲ್ಲಿ 6 ವಿಕೆಟ್‍ಗೆ 122 ರನ್ ಗಳಿಸಿತು.ಡಕ್‍ವರ್ಥ್ ಲೂಯಿಸ್ ನಿಮಯದಂತೆ ಗೆಲುವಿಗೆ ಬಾಂಗ್ಲಾದೇಶವು 14 ಓವರ್‍ಗಳಲ್ಲಿ 125 ರನ್ ಗಳಿಸಬೇಕಿತ್ತು.

ಭಾರತದ ಬೌಲರ್‍ಗಳ ದಾಳಿಗೆ ಕುಸಿದ ಆತಿಥೇಯ ತಂಡವು 7 ವಿಕೆಟ್‍ಗಳಿಗೆ 68 ರನ್ ಗಳಿಸಲಷ್ಟೇ ಶಕ್ತವಾಯಿತು. ದೀಪ್ತಿ ಶರ್ಮಾ ಮತ್ತು ಆಶಾ ಶೋಭಾನಾ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಸರಣಿಯ ಕೊನೆಯ ಪಂದ್ಯ ಇದೇ 9ರಂದು ಸಿಲೆಟ್‍ನಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್: ಭಾರತ 14 ಓವರ್‍ಗಳಲ್ಲಿ 6 ವಿಕೆಟ್‍ಗೆ 122 (ಸ್ಮೃತಿ ಮಂಧಾನ 22, ದಯಾಳನ್ ಹೇಮಲತಾ 22, ಹರ್ಮನ್‍ಪ್ರೀತ್ ಕೌರ್ 39, ರಿಚಾ ಘೋಷ್ 24; ಮಾರುಫಾ ಅಕ್ತರ್ 24ಕ್ಕೆ 2). ಬಾಂಗ್ಲಾದೇಶ 14 ಓವರ್‍ಗಳಲ್ಲಿ 7 ವಿಕೆಟ್‍ಗೆ 68 (ದಿಲಾರಾ ಅಕ್ತರ್; ದೀಪ್ತಿ ಶರ್ಮಾ 13ಕ್ಕೆ 2, ಆಶಾ ಶೋಭಾನಾ 18ಕ್ಕೆ 2, ಪೂಜಾ ವಸ್ತ್ರಕಾರ್ 15ಕ್ಕೆ 1, ರಾಧಾ ಯಾಧವ್ 12ಕ್ಕೆ 1). ಪಂದ್ಯದ ಅಟಗಾರ್ತಿ: ಹರ್ಮನ್‍ಪ್ರೀತ್ ಕೌರ್. ಫಲಿತಾಂಶ: ಭಾರತಕ್ಕೆ 56 ರನ್‍ಗಳ ಜಯ (ಡಿಎಲ್‍ಎಸ್ ನಿಯಮದಂತೆ)

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು