LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Urban

ಗಾಲ್ಫ್ ಕ್ಲಬ್ ವಿಧಾನಸೌಧದ ಸೌಂದರ್ಯ ಹೆಚ್ಚಿಸಿದೆ: ಬಸವರಾಜ ಬೊಮ್ಮಾಯಿ

ಬೆಂಗಳೂರು: ಬೆಂಗಳೂರಿನ ಸೌಂದರ್ಯಕ್ಕೆ ಕಳೆ ಕಟ್ಟುವುದು ನಮ್ಮ ಆಡಳಿತ ಕೇಂದ್ರವಾದ ವಿಧಾನಸೌಧದ ಭವ್ಯತೆ. ಅದು ಅಷ್ಟು ಭವ್ಯವಾಗಿ ಕಾಣಲು ಅದರ ಸುತ್ತಲೂ ಇರುವ ಹಸಿರು. ಕಬ್ಬನ್ ಪಾರ್ಕ್, ಬೆಂಗಳೂರು ಗಾಲ್ಫ್ ಕ್ಲಬ್, ಬೆಂಗಳೂರು ಟರ್ಫ್ ಕ್ಲಬ್, ಕ್ರಿಕೆಟ್ ಮೈದಾನ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಬುಧವಾರ ಬೆಂಗಳೂರು ಗಾಲ್ಫ್ ಕ್ಲಬ್ ಗೆ 150 ವಾದ ಹಿನ್ನೆಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗಾಲ್ಫ್ ಕ್ಲಬ್ಬನ್ನು ಮೈಸೂರು ಮಹಾರಾಜರ ನಿರ್ಮಿಸಿದ್ದು, ಇದನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯ. ಒಂದು ಕ್ಲಬ್ ತನ್ನ 150 ವರ್ಷಗಳನ್ನು ಆಚರಿಸಿಕೊಳ್ಳುತ್ತಿರುವುದು ನಿಜಕ್ಕೂ ಹೆಮ್ಮೆಯ ಕ್ಷಣವಾಗಿದೆ ಮತ್ತು ಇದರ ಭಾಗವಾಗಲು ನನಗೆ ಇನ್ನೂ ಹೆಮ್ಮೆಯಿದೆ. `ಒಬ್ಬ ವ್ಯಕ್ತಿಗೆ 100 ವರ್ಷ ಎಂದರೆ ಅದು ಅವರ ಆರೋಗ್ಯದ ಬಗ್ಗೆ ಹೇಳುತ್ತದೆ. ಆದರೆ ಒಂದು ಸಂಸ್ಥೆ 150 ವರ್ಷಗಳನ್ನು ಪೂರೈಸುತ್ತದೆ ಎಂದರೆ, ಅದು ಆ ಕ್ಲಬ್‌ನ ವಯಸ್ಸಿಗಿಂತಲೂ ಹೆಚ್ಚಿನದನ್ನು ಹೇಳುತ್ತದೆ. ಇದು ಅದರ ಸಂಪ್ರದಾಯ, ಮೌಲ್ಯಗಳು, ವೃತ್ತಿಪರತೆ ಮತ್ತು ವರ್ಷದಿಂದ ವರ್ಷಕ್ಕೆ ಅದು ಎದುರಿಸಿ ಬದುಕುಳಿದಿರುವ ಹಲವು ಕಾಲಘಟ್ಟಗಳನ್ನು ಪ್ರತಿಬಿಂಬಿಸುತ್ತದೆ. ಪ್ರತಿ ಬಿಸಿಲು ಹಾಗೂ ಪ್ರತಿ ಮಳೆಹನಿಯು ಬೆಂಗಳೂರು ಗಾಲ್ಫ್ ಕ್ಲಬ್‌ನ ಹಸಿರು ಹುಲ್ಲುಹಾಸನ್ನು ಪ್ರಕಾಶಮಾನಗೊಳಿಸಿದೆ ಎಂದರು.ಈ ಕ್ಲಬ್ ಹಿಂದೆ ಪ್ರತಿ ತಿಂಗಳು ಅವರು ತಮ್ಮ ಅಬಕಾರಿ ಪರವಾನಗಿಯನ್ನು ನವೀಕರಿಸಿಕೊಳ್ಳ ಬೇಕಾಗಿತ್ತು. ಮುಂದಿನ ತಿಂಗಳು ಏನಾಗಬಹುದು ಎಂದು ತಿಳಿಯದೆ ಅನೇಕ ಸದಸ್ಯರು ಚಿಂತಿತರಾಗಿ ದ್ದರು. ಇದಕ್ಕೆ ಒಂದು ಕೊನೆ ಹಾಡಲು, ಲೀಸ್ ಅವಧಿಯನ್ನು ವಿಸ್ತರಿಸಬೇಕಾಗಿತ್ತು. ಬಿ.ಎಸ್. ಪಾಟೀಲ್ ಅವರು ಬಂದು ಈ ವಿಷಯವನ್ನು ವಿವರಿಸಿದರು ನಾನು ಚಿಂತಿಸಬೇಡಿ, ನಾನು ಇದನ್ನು ನೋಡಿಕೊಳ್ಳುತ್ತೇನೆ ಎಂದು ಹೇಳಿದೆ ಎಂದರು.ಬೆಂಳೂರಿನ ಆಡಳಿತ ಕೇಂದ್ರ ಹಾಗೂ ಆರ್ಥಿಕ ಜಿಲ್ಲೆಯ ಮಧ್ಯದಲ್ಲಿ ನಮಗೊಂದು ಮುಕ್ತವಾಗಿ ಉಸಿರಾಡುವ ಜಾಗ ಮತ್ತು ಹಸಿರು ಪ್ರದೇಶದ ಅಗತ್ಯವಿದೆ ಎಂಬ ಕಾರಣಕ್ಕಾಗಿ ನಾನು ಹಾಗೆ ಮಾಡಿದೆ. `ಇದು ಹಿಂದಿನ ತಲೆಮಾರಿನಿಂದ ನಮಗೆ ಬಂದಿರುವ ಪರಂಪರೆಯಾಗಿದೆ, ಇದು ನಮ್ಮ ಸೃಷ್ಟಿಯಲ್ಲ. ಮೈಸೂರು ಮಹಾರಾಜರ ಕಾಲದಿಂದಲೂ ಇದು ನಡೆದುಕೊಂಡು ಬಂದಿದೆ ನಾವು ಆ ಪರಂಪರೆಯನ್ನು ಮುಂದುವರಿಸಿಕೊAಡು ಹೋಗಬೇಕಾಗಿದೆ. ಅದನ್ನು ಮುಟ್ಟಲು ಹೋದರೆ, ಅದು ಭವಿಷ್ಯವನ್ನು ದೋಚಿದಂತೆ ಆಗುತ್ತದೆ. ಕನಿಷ್ಠಪಕ್ಷ ನಾವು ಮಾಡಬಹುದಾದ ಕೆಲಸವೆಂದರೆ ಅದನ್ನು ಹಾಗೆಯೇ ಉಳಿಸಿಕೊಂಡು ಹೋಗುವುದಾಗಿದೆ. ಅದಕ್ಕಾಗಿಯೇ ನಾವು 30 ವರ್ಷಗಳವರೆಗೆ ಪರವಾನಿಗೆಯನ್ನು ವಿಸ್ತರಿಸಿದ್ದೇವೆ. ಆದ್ದರಿಂದ, ನೀವು ಮುಂದಿನ ಹಲವು ವರ್ಷಗಳ ಕಾಲ ಚಿಂತೆಯಿಲ್ಲದೆ ಅತ್ಯಂತ ಸಂತೋಷದಿAದ ಗಾಲ್ಫ್ ಆಡಬಹುದು ಎಂದರು.ಅಲ್ಲಿ ಇಲ್ಲಿ ಸಣ್ಣಪುಟ್ಟ ಸಮಸ್ಯೆಗಳು, ಸಣ್ಣಪುಟ್ಟ ಅಡೆತಡೆಗಳು ಬರಬಹುದು. ಆದರೆ ಚಿಂತಿಸಬೇಡಿ, ನಮ್ಮ ಮುಖ್ಯಮಂತ್ರಿಗಳು ಈ ಕ್ಲಬ್‌ನ ಅತ್ಯಂತ ಹಳೆಯ ಸದಸ್ಯರಾಗಿದ್ದಾರೆ. ಅವರು 35 ವರ್ಷಗಳಿಗಿಂತಲೂ ಹೆಚ್ಚು ಕಾಲದಿಂದ ಈ ಕ್ಲಬ್‌ನ ಸದಸ್ಯರಾಗಿದ್ದಾರೆ. ಆದ್ದರಿಂದ ಈಗ ನೀವು ಈ ಕ್ಲಬ್‌ಗೆ ಅತ್ಯಂತ ಪ್ರಬಲ ರಕ್ಷಕರನ್ನು ಹೊಂದಿದ್ದೀರಿ, ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದರು.ಹೈಕೋರ್ಟ್ ಸೇರಿದಂತೆ ಟರ್ಫ್ ಕ್ಲಬ್‌ನಲ್ಲಿ ಕೆಲವು ಕಟ್ಟಡಗಳನ್ನು ನಿರ್ಮಿಸಲು ಪ್ರಸ್ತಾಪಿಸಲಾಗಿದೆ. ಅದರ ಬಗ್ಗೆ ಮತ್ತೊಮ್ಮೆ ಮರುಚಿಂತನೆ ನಡೆಸಬೇಕಾಗಿದೆ. ಈ ಬಗ್ಗೆ ಸಿಎಂ ಜೊತೆ ಮಾತನಾಡಿದಾಗ ಅದರ ಶೇಕಡಾ 75 ರಷ್ಟನ್ನು ಹಸಿರು ಪ್ರದೇಶವಾಗಿಯೇ ಉಳಿಸಿಕೊಳ್ಳಲಾಗುವುದು ಎಂದು ಹೇಳಿದ್ದಾರೆ. ಅಷ್ಟಾದರೂ ಮಾಡಿದರೆ ಸಾಕು, ಇಲ್ಲದಿದ್ದರೆ ನಾವು ಇಂತಹ ಮುಕ್ತ ಉಸಿರಾಟದ ಜಾಗವನ್ನು ಸೃಷ್ಟಿಸಲು ಸಾಧ್ಯವಿಲ್ಲ. ಅದೇ ರೀತಿ ಜಕ್ಕೂರು ವಿಮಾನ ತರಬೇತಿ ಶಾಲೆ ಕೂಡ ಇದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಇವೆಲ್ಲವೂ ನಮ್ಮ ಪರಂಪರೆಯಾಗಿದ್ದು, ನಾವು ಇವುಗಳನ್ನು ಸಂರಕ್ಷಿಸಬೇಕಾಗಿದೆ ಎಂದರು.
`ನನಗೆ ಹಳೆಯ ನೆನಪುಗಳು ಮರುಕಳಿಸುತ್ತಿವೆ, ನಮ್ಮ ನಾಯಕರು ಹಾಗೂ ಮಾಜಿ ಮುಖ್ಯಮಂತ್ರಿಗಳಾಗಿದ್ದ. ರಾಮಕೃಷ್ಣ ಹೆಗಡೆ ಅವರು ಎಚ್.ಡಿ. ದೇವೇಗೌಡ ಅವರೊಂದಿಗೆ ಇಲ್ಲಿ ಆಡುತ್ತಿದ್ದರು. ನನಗೆ ಆ ದಿನಗಳು ನೆನಪಿವೆ. ಅವು ಅದ್ಭುತ ದಿನಗಳಾಗಿದ್ದವು. ಆದ್ದರಿಂದ, ಅತ್ಯಂತ ಪ್ರಮುಖ ವ್ಯಕ್ತಿಗಳು ಈ ಕ್ಲಬ್ ಅನ್ನು ಆನಂದಿಸಿದ್ದಾರೆ. ಮತ್ತು ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ದಿನ, ಕೇವಲ ಎರಡರಿಂದ ಮೂರು ಗಂಟೆಗಳ ಒಳಗೆ ನಾನು ಕೆಜಿಎಗೆ ಹೋಗಿದ್ದೆ. ಅಲ್ಲಿ ಅವರು ನನ್ನನ್ನು ನೈನ್ ಐರನ್ ನಿಂದ ಶಾಟ್ ಹೊಡೆಯಲು ಕೇಳಿದರು. ನಾನು ಸುಮಾರು 10-15 ವರ್ಷಗಳಿಂದ ಅದನ್ನು ಮುಟ್ಟಿರಲಿಲ್ಲ. ನನಗೆ ನನ್ನ ಮೇಲೆಯೇ ತುಂಬಾ ಸಂದೇಹವಿತ್ತು, ಆದರೆ ಆ ದಿನ ನಾನು ಸರಿಯಾದ ಶಾಟ್ ಹೊಡೆದೆ. ಅದು ನನಗೇ ಆಶ್ಚರ್ಯ ಆಯಿತು ಎಂದು ಹಿಂದಿನ ಘಟನೆಗಳನ್ನು ಮೆಲಕು ಹಾಕಿದರು.ಮುಖ್ಯಮಂತ್ರಿಗಳು ಡಿ.ಕೆ. ಶಿವಕುಮಾರ್ ಕೂಡ ಒಬ್ಬ ಉತ್ತಮ ಕ್ರೀಡಾಪಟು ಹಾಗೂ ಅತ್ಯುತ್ತಮ ವೃತ್ತಿಪರರು. ಅವರು ಎಲ್ಲಾ 18 ಹೋಲ್‌ಗಳನ್ನು ಆಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂದು ನಾನು ಭಾವಿಸುತ್ತೇನೆ. ರಾಜಕೀಯದಲ್ಲಂತೂ ಅವರು ಈ ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೆ ಎಂದು ನಗೆ ಚಟಾಕಿಯನ್ನು ಹಾರಿಸಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕ್ಯಾಪ್ಟನ್ ಅರವಿಂದ್ ಕುಮಾರ್ ರಾಜು, ಸಂಸದರಾದ ಪಿ.ಸಿ. ಮೋಹನ್, ಶಾಸಕ ರಿಜ್ವಾನ್ ಅರ್ಷದ್, ಎಂ.ಎಲ್.ಸಿ ಗೋವಿಂದರಾಜು, ಬಿ.ಎಸ್. ಪಾಟೀಲ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು