LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Sports News

ಕೆಕೆಆರ್‌ಗೆ ಮುಗಿಯದ ತಲೆನೋವು: ಹರ್ಷಿತ್ ರಾಣಾ ಔಟ್!

ಮುಸ್ತಫಿಝುರ್ ರೆಹ್ಮಾನ್ ಅವರ ಬದಲಿಗೆ ಜಿಂಬಾಬ್ವೆಯ ಬ್ಲೆಸ್ಸಿಂಗ್ ಮುಝರಬಾನಿ ಅವರು ತಂಡಕ್ಕೆ ಸೇರ್ಪಡೆಯಾದ ಸಂತಸದಲ್ಲಿ ಇರುವಾಗಲೇ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಹೊಸ ತಲೆನೋವು ಎದುರಾಗಿದೆ. ತಂಡದ ವೇಗಿ ಹರ್ಷಿತ್ ರಾಣಾ ಅವರು ಗಾಯದ ಕಾರಣಕ್ಕಾಗಿ ಟೂರ್ನಿಯಿಂದ ಹೊರಬಿದ್ದಿದ್ದು ಇದೀಗ ಕೆಕೆಆರ್ ಮತ್ತೊಬ್ಬ ಬದಲಿ ಆಟಗಾರನನ್ನು ಹುಡುಕಬೇಕಾಗಿದೆ.
ಐಸಿಸಿ ಟಿ೨೦ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನವೀಮುಂಬೈನಲ್ಲಿ ನಡೆದ ತಾಮೀಮು ಪಂದ್ಯದ ವೇಳೆ ಹರ್ಷಿತ್ ರಾಣಾ ಅವರ ಮೊಣಕಾಲಿಗೆ ಗಾಯವಾಗಿತ್ತು. ಬಳಿಕ ಅವರು ಇಡೀ ಟಿ೨೦ ವಿಶ್ವಕಪ್ ಟೂರ್ನಿಯಿಂದ ಹೊರಗುಳಿಯಬೇಕಾಯಿತು. ಅವರ ಬದಲಿಗೆ ಮೊಹಮ್ಮದ್ ಸಿರಾಜ್ ಅವರು ತಂಡಕ್ಕೆ ಆಯ್ಕೆಯಾದರು. ಫೆಬ್ರವರಿ ೯ರಂದು ಅವರು ಮುಂಬೈನಲ್ಲಿ ಶಸ್ತçಚಿಕಿತ್ಸೆಗೊಳಗಾಗಿದ್ದರು. ಆ ಗಾಯದಿಂದ ಅವರು ಈವರೆಗೂ ಚೇತರಿಸಿಕೊಂಡಿಲ್ಲ. ಐಪಿಎಲ್ ಟೂರ್ನಿ ಪ್ರಾರಂಭ ಆಗುವ ವೇಳೆಗೂ ಅವರು ಗುಣಮುಖರಾಗುವ ಸಾಧ್ಯತೆಯಿಲ್ಲ.
೨೦೨೪ರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಐಪಿಎಲ್ ಪ್ರಶಸ್ತಿ ಗೆಲುವಿನಲ್ಲಿ ಹರ್ಷಿತ್ ರಾಣಾ ಅವರು ಪ್ರಮುಖ ಪಾತ್ರ ವಹಿಸಿದ್ದರು. ಇಡೀ ಟೂರ್ನಿಯಲ್ಲಿ ಅವರು ೧೯ ವಿಕೆಟ್ ಪಡೆದು ಮಿಂಚಿದ್ದರು. ಅವರ ಈ ಪ್ರದರ್ಶನ ಅವರಿಗೆ ರಾಷ್ಟಿçÃಯ ತಂಡಕ್ಕೆ ರಹದಾರಿಯಾಯಿತು. ಜೊತೆಗೆ ಫ್ರಾಂಚೈಸಿಯು ಅವರನ್ನು ೨೦೨೫ರ ಐಪಿಎಲ್ ವೇಳಿಗೆ ೪ ಕೋಟಿ ರೂಪಾಯಿ ಖರ್ಜು ಮಾಡಿ ಉಳಿಸಿಕೊಂಡಿತು. ಆ ವರ್ಷ ಸಹ ಅವರು ಆಡಿದ ೧೩ ಪಂದ್ಯಗಳಿAದ ಅವರು ೧೫ ವಿಕೆಟ್ ಪಡೆದರು.
ಇದೀಗ ಕೆಕೆಆರ್ ತಂಡ ಹರ್ಷಿತ್ ರಾಣಾ ಅವರಿಗೆ ಸರಿಸಮಾನವಾದ ಮಧ್ಯಮವೇಗದ ಆಲ್ರೌಂಡರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕಿದೆ. ಇದೀಗ ತಂಡದಲ್ಲಿ ಆಕಾಶ್ ದೀಪ್, ವೈಭವ್ ಆರೋರಾ, ಉಮ್ರಾನ್ ಮಲಿಕ್ ಮತ್ತು ಕಾರ್ತಿಕ್ ತ್ಯಾಗಿ ಅವರು ತಂಡದಲ್ಲಿರುವ ಮಧ್ಯಮ ವೇಗಿಗಳಾಗಿದ್ದಾರೆ.
ಇದೇವೇಳೆ ಟಿ೨೦ ವಿಶ್ವಕಪ್ ಟೂರ್ನಿ ವೇಳೆ ಗಾಯಗೊಂಡಿದ್ದ ತಂಡದ ಮತ್ತೊಬ್ಬ ವೇಗಿಯಾಗಿರುವ ಶ್ರೀಲಂಕಾದ ಮಥೀಶ್ ಪತಿರಣ ಅವರು ಚೇತರಿಕೆಯ ಹಾದಿಯಲ್ಲಿದ್ದಾರೆ. ಆದರೆ ಅವರ ಲಭ್ಯತೆಯ ಕುರಿತು ಈವರೆಗೂ ಯಾವುದೇ ಖಾತ್ರಿಯಿಲ್ಲ.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು