LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ಇಲತೊರೆ ಗ್ರಾಮದಲ್ಲಿ ಅದ್ದೂರಿ ಬಂಡಿದೇವರ ಕರಗ ಮಹೋತ್ಸವ

ದೇವನಹಳ್ಳಿ : ತಾಲೂಕಿನ ಇಲತೊರೆ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆದ ಬಂಡಿ ದೇವರ ಕರಗ ಮಹೋತ್ಸವ ಈ ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖ ಮುಖಂಡ ಕೃಷ್ಣಪ್ಪ ಮತ್ತು ಕುಟುಂಬದವರು ವಿಶೇಷ ಪೂಜೆ ನೆರವೇರಿಸಿ ಕರಗ ಹೊತ್ತು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಯಲಿನಲ್ಲಿ ನಿಂತಿದ್ದ ಬಂಡಿಗಳ ಬಳಿ ಆಗಮಿಸಿ ಆರತಿ ದೀಪಗಳನ್ನು ಬೆಳಗಿ ದೇವರಿಗೆ ಸಮರ್ಪಣೆ ಮಾಡಿದರು.

ಈ ಸಮಯದಲ್ಲಿ ಕೃಷ್ಣಪ್ಪ ಮಾತನಾಡಿ ಅನಾದಿಕಾಲದಿಂದಲೂ ನಮ್ಮ ಎಲ್ಲಾ ಸಂಬಂಧಿ ಕುಟುಂಬದವರು ಈ ಒಂದು ಕಾರ್ಯಕ್ರಮವನ್ನು ಆಚರಿಸಿಕೊಂಡು ಬರ್ತಾ ಇದ್ದೇವೆ ಇದು ಸುಮಾರು 30 ವರ್ಷಗಳ ನಂತರ ನಮ್ಮ ಗ್ರಾಮದಲಿ ಎಲ್ಲಾ ಕುಲಬಾಂಧವರು ಸೇರಿ ಮಾಡಲಾಗುತ್ತಿದೆ, ಕುಲಬಾಂಧವರು ಸ್ನೇಹಿತರಿಗೂ ವಿಶೇಷ ಭೋಜನದ ವ್ಯವಸ್ಥೆ ಮಾಡಿ ಅವರಿಗೆ ತೃಪ್ತಿ ಪಡಿಸಿದರೆ ಕರಗದಮ್ಮ ತಾಯಿ ಕಾಲಕಾಲಕ್ಕೆ ಮಳೆ ಬೆಳೆ ನೀಡುತ್ತಾಳೆ ಎನ್ನುವುದು ನಮ್ಮ ಪೂರ್ವಿಕರ ನಂಬಿಕೆ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥರು, ಹಿರಿಯ ಮುಖಂಡರುಗಳು ಸೇರಿದಂತೆ 15ಸಾವಿರಕ್ಕೂ ಅಧಿಕ ಕುಲಬಾಂಧವರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರುಗಳು ವಿವಿದ ತಾಲೂಕುಗಳಿಂದಲೂ ಆಗಮಿಸಿ ಕರಗ ಶುಭ ಕೋರಿದರು ಎಂದು ತಿಳಿಸಿದರು.ಕುಲಭಾಂದವರು ಎಲ್ಲಾ ಒಂದು ಕಡೆ ಬೆರೆತು ಕರಗಗಳನ್ನು ಪೂಜಿಸಿ ಕರಗ ಹೊರುವವರು ಮದುವೆ ಹೆಣ್ಣು-ಗಂಡಿನ ರೀತಿ ಅಲಂಕಾರ ಮಾಡಿಕೊಂಡು ತಲೆಯ ಮೇಲೆ ಹೊತ್ತು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಂಚರಿಸಿ ಎತ್ತಿನ ಬಂಡಿಗಳಿದ್ದಲ್ಲಿಗೆ ಬಂದು ಕಿವಿ ಚುಚ್ಚುವ ಮಕ್ಕಳಿದ್ದರೆ ಅಂತಹವರಿಗೆ ಕರ್ಣಭೂಷಣ,

ಸೇರಿದಂತೆ ಹಲವು ಆಯಾಮಗಳು ನಡೆದು ನಂತರ ಆಗಮಿಸಿರುವ ಎಲ್ಲಾ ಕುಲಭಾಂದವರಿಗೂ, ಸ್ನೇಹಿತರಿಗೂ ವಿಶೇಷವಾಗಿ ತಯಾರಿಸಿದ ಮಾಂಸಾಹಾರ, ಶಾಖಾಹಾರ ಬಡಿಸಿ ತೃಪ್ತಿ ಪಡಿಸಿಕಳಿಸುವುದೇ ಸಂಪ್ರದಾಯ.ಬೆಳಿಗ್ಗೆಯೇ ಬರುವಂತಿದ್ದ ಮಳೆ ಕಾರ್ಯಕ್ರಮಕ್ಕೆ ಎಲ್ಲಿ ತೊಂದರೆಯಾಗುವುದೇ ಎಂದು ತಿಳಿಯಲಾಗಿತ್ತು ಆದರೆ ಎಲ್ಲಾ ಪೂಜೆ, ಊಟ ಮುಗಿದ ನಂತರ ಸಂಜೆ ಭಾರಿ ಮಳೆ ಬಂದಿರುವುದು ವಿಶೇಷ.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕುಟುಂಬ ಸಿ. ನಾರಾಯಣಸ್ವಾಮಿ, ಸಿ.ಕೃಷ್ಣಪ್ಪ, ಸಿ. ನಾಗೇಶ್ ಕುಟುಂಬ, ರಾಮಮೂರ್ತಿ ಕುಟುಂಬ, ಶಿವಣ್ಣನವರ ಕುಟುಂಬ, ಅನಿಲ್‍ರವರ ಕುಟುಂಬ, ಪಿ.ಮಂಜುನಾಥ್, ಪಿ.ರಾಮಕೃಷ್ಣ ಕುಟುಂಬ ಹಾಗೂ ನೆರಗನಹಳ್ಳಿ ಸೇರಿದಂತೆ ಅನೇಕ ಊರುಗಳ ಕುಟುಂಬದವರು ಭಾಗವಹಿಸಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು