LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Chamarajanagara

ಜಗತ್ತಿಗೆ ಭಗವಾನ್ ಮಹಾವೀರರ ಚಿಂತನೆಗಳು ದಾರಿದೀಪ: ಪಿ.ಮರಿಸ್ವಾಮಿ

ಚಾಮರಾಜನಗರ: ಜಗತ್ತಿನ ಅಸ್ಥಿರತೆ, ಅಶಾಂತಿ ನಿವಾರಣೆಗೆ ಭಗವಾನ್ ಮಹಾವೀರರ ಆದರ್ಶ ಚಿಂತನೆಗಳು ದಾರಿದೀಪವಾಗಿವೆ ಎಂದು ಕಾವೇರಿ ಜಲಾನಯನ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಪಿ. ಮರಿಸ್ವಾಮಿ ಅವರು ಅಭಿಪ್ರಾಯಪಟ್ಟರು.
ನಗರದ ವರನಟ ಡಾ. ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಭಗವಾನ್ ಶ್ರೀ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಪಂಚದಲ್ಲಿ ಎಲ್ಲವೂ ಇದೆ, ಆದರೂ ಜಗತ್ತು ಇಂದು ಅಶಾಂತಿಯ ನೆಲೆವೀಡಾಗಿದೆ. ಇಂದು ಜಗತ್ತನ್ನು ಕಾಡುತ್ತಿರುವ ಅಸ್ಥಿರತೆ, ಅಶಾಂತಿಗೆ ಮಹಾವೀರರ ಸತ್ಯ, ಅಹಿಂಸಾ, ತ್ಯಾಗದ ಚಿಂತನೆಗಳು ಬೆಳಕು ಚೆಲ್ಲಲಿವೆ. ಭಗವಾನ್ ಮಹಾವೀರರು ಜಗತ್ತಿನಲ್ಲಿ ಶಾಂತಿ ನೆಲಸುವ ಕೆಲಸ ಮಾಡಿದವರು. ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯಬೇಕಾಗಿದೆ. ಭಗವಾನ್ ಮಹಾವೀರರ ಅಹಿಂಸಾ ತತ್ವ ಇಂದಿಗೂ ಪ್ರಸ್ತುತ ಹಾಗೂ ಅಗತ್ಯವಾಗಿದೆ ಎಂದರು.
ಭಾರತ ಶಾಂತಿಪ್ರಿಯ ದೇಶ, ಭಾರತೀಯರು ಶಾಂತಿಪ್ರಿಯರಾಗಿದ್ದು, ದೇಶದಲ್ಲಿ ಪ್ರತಿಯೊಬ್ಬರು ನೆಮ್ಮದಿ ಹಾಗೂ ಸಂತೃಪ್ತ ಜೀವನ ನಡೆಸಲು ಮಹಾವೀರ, ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರು, ಪುರಂದರದಾಸರು ಸೇರಿದಂತೆ ಅನೇಕ ಸಾಧು ಸಂತರು, ದಾರ್ಶನಿಕರು ಪ್ರಬುದ್ಧ ಚಿಂತಕರು ಕಾರಣರಾಗಿದ್ದಾರೆ. ಅವರ ತತ್ವಸಿದ್ದಾಂತಗಳನ್ನು ನಾವು ಅಳವಡಿಸಿಕೊಂಡು ಮುನ್ನೆಡೆಯಬೇಕು ಎಂದು ಕಾಡಾ ಅಧ್ಯಕ್ಷರಾದ ಮರಿಸ್ವಾಮಿ ಅವರು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್ ಅವರು ಮಾತನಾಡಿ ರಾಜಮನೆತನದಲ್ಲಿ ಹುಟ್ಟಿದ ಮಹಾವೀರರು ತಮ್ಮ 30ನೇ ವಯಸ್ಸಿನಲ್ಲಿ ಕುಟುಂಬ ತೊರೆದು ಜಗತ್ತಿನ ಶಾಂತಿಗಾಗಿ ಶ್ರಮಿಸಿದರು. ಇಂದು ಎಲ್ಲರು ಮನೆ, ಜಮೀನು, ಆಸ್ತಿ, ಸಂಪತ್ತಿನ ಸಂಪಾದನೆಯಲ್ಲಿ ತೊಡಗಿದ್ದಾರೆ. ಮಿತಿಮೀರಿ ಸಂಪಾದಿಸುತ್ತಿದ್ದಾರೆ. ಸಾಮಾನ್ಯ ಜೀವನ ನಡೆಸಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ಸಂಪಾದಿಸಬೇಕೆAದ ಭಗವಾನ್ ಮಹಾವೀರರ ಮೌಲ್ಯಯುತ ಚಿಂತನೆಗಳನ್ನು ಎಲ್ಲರೂ ಅನುಸರಿಬೇಕಾಗಿದೆ ಎಂದರು.
ಮುಖ್ಯ ಭಾಷಣ ಮಾಡಿದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸುರೇಶ್ ಎನ್. ಋಗ್ವೇದಿ ಅವರು ಮಹಾವೀರರು ವಿಶ್ವದ ಬೆಳಕು ಎಂದರೇ ತಪ್ಪಾಗಲಾರದು. ಸತ್ಯ, ಧರ್ಮ, ನ್ಯಾಯ, ಅಹಿಂಸೆ ಜೈನಧರ್ಮದ ಪರಂಪರೆಯಾಗಿದೆ. ಈ ಜಗತ್ತು ಅಭಿವೃದ್ಧಿಪಥದಲ್ಲಿ ಸಾಗಿ ಅರ್ಥಿಕ ಮುನ್ನಡೆ ಸಾಧಿಸಿದೆ. ಅರ್ಥಿಕ ಮುನ್ನಡೆ ಅಹಂಕಾರ ಹಾಗೂ ನಾನತ್ವದ ಮೂಲವಾಗಿದೆ. ದೇಶ-ದೇಶಗಳ ನಡುವಿನ ಅಹಂಕಾರ ಪರಮಾವಧಿಯ ಯುದ್ಧದಿಂದ ವಿಶ್ವವೇ ಅಲ್ಲೋಲ ಕಲ್ಲೋಲವಾಗಿ ಜನರು ಸಾಕಷ್ಟು ತೊಂದರೆಗೆ ಒಳಗಾಗಿದ್ದಾರೆ. ಮಹಾವೀರರ ಅಹಿಂಸೆ, ತ್ಯಾಗ ಮನೋಭಾವ, ಶಾಂತಿ ಚಿಂತನೆಯೇ ವಿಶ್ವದ ಇಂದಿನ ಪರಿಸ್ಥಿತಿಗೆ ಪರಿಹಾರವಾಗಿದೆ ಎಂದು ತಿಳಿಸಿದರು.
ಭಾರತ ಪುಣ್ಯಭೂಮಿ, ಕರ್ಮಭೂಮಿಯು ಹೌದು. ಪ್ರತಿಯೊಬ್ಬರ ಬದುಕಿನಲ್ಲಿ ಶಾಂತಿಯ ಮೂಲ ಧ್ಯಾನವಾಗಿದೆ. ಮನುಷ್ಯನಿಗೆ ಇಂದು ಅಂತರಿಕ ಸುಖ ಶಾಂತಿ ಅಗತ್ಯವಾಗಿದೆ. ನನ್ನನ್ನು ನಾನು ಅರಿಯಲು ಮುಂದಾಗಬೇಕು. ಅಹಿಂಸಾ ಮಾರ್ಗದಲ್ಲಿ ನಡೆಯಬೇಕು. ಕಳ್ಳತನ ಮಾಡಬಾರದು, ಸರಳ ಸತ್ಯವನ್ನೇ ನುಡಿಯಬೇಕು. ಶೀಲ, ಸಚ್ಚಾರಿತ್ರö್ಯ, ವ್ಯಕ್ತಿತ್ವ ಹೊಂದಬೇಕು ಎಂಬುದು ಮಹಾವೀರರ ತತ್ವದ ಮೂಲ. ಈ ಭೂಮಿಯಲ್ಲಿ ಸರ‍್ಯ, ಚಂದ್ರ ಇರುವವರಗೆ ಮಹಾವೀರರ ತತ್ವಸಿದ್ದಾಂತಗಳು ಜೀವಂತವಾಗಿರಲಿವೆ. ಚಾಮರಾಜನಗರ ಜಿಲ್ಲ್ಲೆಯೂ ಸಹ ಜೈನಧರ್ಮದ ಪ್ರಸಾರ ಕೇಂದ್ರವಾಗಿತ್ತು. ಜಿಲ್ಲೆಯ ಉಮ್ಮತ್ತೂರು, ಕೆಲಸೂರು, ಬೇಗೂರು, ಚಾಮರಾಜನಗರ, ಇತರೆಡೆ ಜೈನರ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಿವೆ ಎಂದು ಋಗ್ವೇದಿ ಅವರು ಹೇಳಿದರು.
ನಗರಸಭೆ ಪೌರಾಯುಕ್ತರಾದ ಪರಶುರಾಮ ಎಂ. ಛಲವಾದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜು, ಪಾರ್ಶ್ವನಾಥ ದಿಗಂಬರ ಜೈನ ಸಂಘದ ಅಧ್ಯಕ್ಷರಾದ ನಿರ್ಮಲ್‌ಕುಮಾರ್, ಶ್ವೇತಾಂಬರ ಜೈನ ಸಂಘದ ಅಧ್ಯಕ್ಷರಾದ ಕನ್ನಯ್ಯಲಾಲ್, ಮುಖಂಡರಾದ ಉಲ್ಲಾಸ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಶ್ರೀ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಿAದ ಜಿಲ್ಲಾಡಳಿತ ಭವನದವರೆಗೆ ಬೆಳ್ಳಿರಥದಲ್ಲಿ ಅಲಂಕೃತ ಭಗವಾನ್ ಶ್ರೀ ಮಹಾವೀರರ ಭಾವಚಿತ್ರದ ಮೆರವಣಿಗೆ ನಡೆಯಿತು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು