LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Chamarajanagara

ಯುದ್ಧ ಬೇಡ, ಶಾಂತಿ ಸಾಮರಸ್ಯ ನೆಲೆಸಲು ಆಗ್ರಹಿಸಿ ಪ್ರಾಂತ ರೈತ ಸಂಘದಿಂದ ಪ್ರತಿಭಟನೆ

ಮಳವಳ್ಳಿ: ಜೀವ ವಿರೋಧಿ ಯುದ್ಧ ಬೇಡ.ಶಾಂತಿ ಸಾಮರಸ್ಯ ನೆಲೆಸಲಿಕ್ಕಾಗಿ ಮಾತುಕತೆ ಮೂಲಕ ಇಸ್ರೇಲ್ ಮತ್ತು ಪ್ಯಾಲಿಸ್ತೀನ್ ನಡುವಣ ಸಮಸ್ಯೆ ಇತ್ಯರ್ಥ ಪಡಿಸಲು ವಿಶ್ವ ಸಂಸ್ಥೆ ಮುಂದಾಗಬೇಕು. ಮಹಿಳೆಯರು ಮಕ್ಕಳು ಅಪಾರ ಪ್ರಮಾಣದ , ಆಸ್ತಿ ಪಾಸ್ತಿ ನಷ್ಟ ಉಂಟಾಗುವುದನ್ನು ತಡೆಗಟ್ಟಬೇಕೆಂದು. ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಅಧ್ಯಕ್ಷರಾದ ಎನ್ ಎಲ್ ಭರತ್ ರಾಜ್ ಒತ್ತಾಯಿಸಿದರು.

ಅವರು ಮಳವಳ್ಳಿ ಪಟ್ಟಣದ ಪೇಟೆ ಬೀದಿ ಸರ್ಕಲ್ ನಲ್ಲಿ ಯುದ್ಧ ಬೇಡ ಶಾಂತಿ ಬೇಕು. ಜಗತ್ತಿನ ಯಾವುದೇ ಸಮಸ್ಯೆಗಳನ್ನ ಮಾತುಕತೆ ಮುಖಾಂತರ ಬಗೆಹರಿಸಿಕೊಳ್ಳಲು ವಿಶ್ವ ಸಂಸ್ಥೆ ಮುಂದಾಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನ ಪ್ರದರ್ಶನವನ್ನ ಉದ್ದೇಶಿಸಿ ಮಾತನಾಡುತ್ತಜಗತ್ತಿನಲ್ಲಿ ಶಾಂತಿ ಚಿರಾಯವಾಗಬೇಕು .

ಸಾಮರಸ್ಯ .ಸಹಬಾಳ್ವೆ ಬೆಳೆಯಬೇಕು ಎಂತದೆ ಸಮಸ್ಯೆಗಳ ಬಂದರು ಮಾತು ಕತೆಯೊಂದೆ ಪರಿಹಾರವಾಗಬೇಕೆಂದರು
ಯುದ್ದ ಎಂಬುವುದು ಕ್ರೀಡೆಯಲ್ಲ ಮನೋರಂಜನೆನೂ ಅಲ್ಲ ಅದು ಸಂತೋಷಕ್ಕಾಗಿ ನಡೆಯುವ ಕ್ರಿಯೆಯೂ ಅಲ್ಲ ಯುದ್ಧದಿಂದ ಜೀವ ಮಾನ ಹಾನಿಯಾಗುತ್ತದೆ ಅಪಾರ ಪ್ರಮಾಣದ ಆಸ್ತಿ ಪಾಸ್ತಿಗಳು ನಷ್ಟ ಉಂಟಾಗುತ್ತದೆ ಹಾಗಾಗಿ ಇಸ್ರೇಲ್ ಮತ್ತು ಪ್ಯಾಲಿಸ್ಟೇನ್ ನಡುವಿನ ನಡೆಯುತ್ತಿರುವ ಯುದ್ಧವನ್ನು ತಡೆಗಟ್ಟಲ ವಿಶ್ವಸಂಸ್ಥೆ ಮಧ್ಯ ಪ್ರವೇಶ ಮಾಡಬೇಕು.

ಭಾರತ ಸರ್ಕಾರವು ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಲು ಒತ್ತಾಯಿಸಿ ಮಾತುಕತೆ ಮುಖಾಂತರ ಉಭಯ ದೇಶಗಳ ನಡುವಿನ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲು ಆಗ್ರಹಿಸಬೇಕೆಂದು ಒತ್ತಾಯಿಸಿದರು ಯುದ್ಧ ಎಂಬುದು ಸಾವಿರಾರು ಹೆಣಗಳ ಮೇಲಿ ಕಟ್ಟುವ ಸೌಧವಾಗಿದೆ ಹಾಗಾಗಿ ಮಾನವ ಹಕ್ಕುಗಳು ಎತ್ತಿ ಹಿಡಿಯಬೇಕು.

ಕಳೆದು ಹೋದ ಜೀವವನ್ನ ಮರು ಪಡೆಯಲು ಸಾದ್ಯವೆ ಇ ಜೀವಗಳ ಹಾನಿಗೆ ಯಾರನ್ನ ಹೊಣೆಗಾರರನ್ನಾಗಿ ಮಾಡುವುದು ಎಂದು ಪ್ರಶ್ನಿಸಿದರು. ಪ್ರತಿಭಟನೆ ಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಕಾರ್ಯದರ್ಶಿ ಎನ್ ಲಿಂಗರಾಜಮೂರ್ತಿ ಪ್ರಮೀಳಾ. ಹಿಪ್ಜುಲ್ಲಾ. ಮಹಾದೇವು ಶಿವಕುಮಾರ್ ಮೂರ್ತಿ ಸಿದ್ದರಾಜು ಸತೀಶ್ ಚಿಕ್ಕಸ್ವಾಮಿ ರಘುಸ್ವಾಮಿ ಗಣೇಶ್ ಚಿಕ್ಕೀರಪ್ಪ ಶಿವರಾಜ್ ಮುಂತಾದವರು ಭಾಗವಹಿಸಿದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು