LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Bangalore Rural

ನ್ಯಾಯಕ್ಕಾಗಿ ಪೂಜನಹಳ್ಳಿ ಗ್ರಾಮದ ರೈತರ ಮೌನ ಪ್ರತಿಭಟನೆ

ದೇವನಹಳ್ಳಿ :ತಾಲೂಕಿನ ಪೂಜನಹಳ್ಳಿ ಗ್ರಾಮದ ರೈತರಿಗೆ ಸರ್ಕಾರದಿಂದ ಮಂಜೂರಾದ ಭೂಮಿ ರೈತರಿಗೆ ಉಳಿಯಬೇಕು. ರೈತರ ಜಮೀನು ಕಬಳಿಸುವ ಹುನ್ನಾರ ಮಾಡುತ್ತಿರುವ ತಕರಾರುದಾರರ ವಿರುದ್ಧ ನ್ಯಾಯಯುತವಾಗಿ ರೈತರಿಗೆ ದಕ್ಕುವಂತಾಗಲಿ ಎಂದು ದೇವನಹಳ್ಳಿ ತಾಲೂಕು ರೈತರ ಪರವಾಗಿ ಯುವ ಮುಖಂಡ ಕನ್ನಮಂಗಲ ಸಂದೀಪ್ ಮನವಿ ಮಾಡಿದರು.

ದೇವನಹಳ್ಳಿ ತಾಲೂಕಿನ ಜಿಲ್ಲಾಡಳಿತ ಭವನದ ಎದುರು ಸಮಾಜದ ನ್ಯಾಯ ಹಾಗೂ ಹಿತ ಚಿಂತಕ ನಾಗರೀಕರ ಸಂಘದ ವತಿಯಿಂದ ನಡೆದ ರೈತರ ಮೌನ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.ಪೂಜನಹಳ್ಳಿ ಗ್ರಾಮದ ರೈತರಿಗೆ ಸರಕಾರದಿಂದ ನ್ಯಾಯಬದ್ಧವಾಗಿ ಜಮೀನು ಮಂಜೂರು ಮಾಡಿರುವ ಕ್ರಮ ಸರಕಾರದ ಮಂಜೂರಾತಿ ಕಡತದಲ್ಲಿರುವ ಹಾಗೂ ಅನೇಕ ನ್ಯಾಯಾಲಯಗಳಿಗೆ ಸಲ್ಲಿಸಿರುವ ದಾಖಲೆಗಳ ಪ್ರಕಾರ ರೈತರ ಪರವಾಗಿಯೇ ಜಮೀನು ಮಂಜೂರು ಆಗಿರುತ್ತದೆ.

ಆದರೆ, ಕೆಲವರ ಉದ್ದೇಶ ಬೇರೆ ಇದ್ದು, ಸ್ಮಶಾನ ಜಾಗ ಬೇಕು ಎಂದು ಹೇಳಿಕೊಂಡು ರೈತರಿಗೆ ಮಂಜೂರಾಗಿರುವ ಜಮೀನಿನ ಮೇಲೆ ಕೆಂಗಣ್ಣು ಬಿದ್ದಿದೆ. ಆದರೆ, ಸರಕಾರಕ್ಕೆ ಸ್ಮಶಾನದ ಜಾಗ ಗುರುತಿಸಿಕೊಡಬೇಕೆಂದು ಒತ್ತಾಯಿಸಬೇಕೆ ವಿನಃ, ರೈತರಿಗೆ ಮಂಜೂರಿಯಾಗಿರುವ ಜಮೀನಿನ ಮೇಲೆ ಹಗೆಸಾದಿಸುತ್ತಿರುವುದು ಸರಿಯಾದ ಕ್ರಮವಲ್ಲ. ರೈತರ ಪರವಾಗಿ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಸಾರ್ವಜನಿಕರಿಗೆ ಸತ್ಯಾಂಶದ ತಿಳುವಳಿಕೆ ಪತ್ರ, ವಸೂಲಿಗಾರರ ದುರಾಶೆಗಳಿಂದ ಕೂಡಿದ ಅಪಪ್ರಚಾರಕ್ಕೆ ಸಾರ್ವಜನಿಕರು ಬಲಿಯಾಗಬಾರದೆಂದು ಮನವಿ ಕರಪತ್ರವನ್ನು ಅಪರ ಜಿಲ್ಲಾಧಿಕಾರಿ ಅಮರೇಶ್ ಅವರಿಗೆ ನೀಡಿದರು.ರೈತ ಮುಖಂಡರಾದ ಕನ್ನಮಂಗಲ ನಾಗರಾಜ್ ಪೂಜಾರಿ, ಮಂಜುನಾಥ್, ಮುನಿಯಪ್ಪ, ಪಾರ್ವತಮ್ಮ, ಆಂಜಿನಪ್ಪ, ಹನುಮಯ್ಯ, ರಾಮಾಂಜಿನಪ್ಪ, ಸೇರಿದಂತೆ ಅನೇಕ ರೈತರು, ಕನ್ನಮಂಗಲ ಗ್ರಾಪಂ ಸದಸ್ಯ ನರಸಿಂಹಮೂರ್ತಿ, ವಿಶ್ವನಾಥಪುರ ಪೊಲೀಸ್ ಇನ್ಸ್ಪೆರ್ಕ್ಟ ಟಿ.ಶ್ರೀನಿವಾಸ್ ಮತ್ತಿತರರು ಇದ್ದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು