LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeauty
Districts Kolar

ತೊಟ್ಲಿ ಸದ್ಗುರು ಕ್ಷೇತ್ರದಲ್ಲಿ ಇಡೀ ರಾತ್ರಿ ಸತ್ಸಂಗ

ಕೋಲಾರ: ನಮಗೆ ಎಷ್ಟೇ ಬಲವಿದ್ದರೂ ದೈವ ಬಲವಿಲ್ಲದಿದ್ದರೆ ಸೋಲು ನೋವು ಸಮಸ್ಯೆಗಳು ಗ್ಯಾರಂಟಿ ಕಟ್ಟಿಟ್ಟ ಬುತ್ತಿ. ನಾವು ಎಷ್ಟೇ ಬೆಳೆದಿದ್ದರೂ ದೇವರಿಗೆ ಶರಣಾಗಿ ಸೇವಾ ಮನೋಭಾವದಿಂದ ಎಲ್ಲಾ ದೈವ ಕಾರ್ಯಗಳಲ್ಲೂ ಭಾಗವಹಿಸಿ ಸೇವೆ ಮಾಡಿದರೆ ದೇವರ ಆರ್ಶೀವಾದ ಕಂಡಿತ ಸಿಗುತ್ತದೆ ಎಂದು ಎಸ್.ಎಸ್.ವೈ. ಗುರುಗಳಾದ ಡಾ. ಪೋಸ್ಟ್ ನಾರಾಯಣಸ್ವಾಮಿ ತಿಳಿಸಿದರು.

ಕೋಲಾರ ತಾಲ್ಲೂಕು ಚಿಟ್ನಹಳ್ಳಿ ಸದ್ಗುರು ಕ್ಷೇತ್ರದಲ್ಲಿ ಸತ್ಸಂಗ ಮತ್ತು ಬಜನೆ ಕಾರ್ಯಕ್ರಮದಲ್ಲಿ ಸತ್ಸಂಗ ಮತ್ತು ಅಖಂಡ ಭಜನೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.ಈ ದೈವ ಕಾರ್ಯಗಳಿಂದ ನಮಗೆ ಮನಸ್ಸು ಧ್ಯಾನ ಸ್ಥಿತಿಗೆ ಹೋಗಿ ಆತ್ಮ ಸಾಕ್ಷಾತ್ಕಾರವಾಗಲು ದಾರಿ ಸಿಗುತ್ತದೆ.

ಈ ಸದ್ಗುರು ಕ್ಷೇತ್ರದ ಸಂಸ್ಥಾಪಕರಾದ ಎನ್.ವೆಂಕಟೇಶ ರವರು ಸದ್ಗುರು ಕ್ಷೇತ್ರವನ್ನು ಸ್ಥಾಪಿಸಿ ಎಲ್ಲರಿಗೂ ದೈವ ಶಕ್ತಿ ಸಿಗಲೆಂದು ಪ್ರತಿ ತಿಂಗಳು ಆಶ್ರಮದಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಅವರಿಗೆ ದೇವರು ಇನ್ನೂ ಹೆಚ್ಚಿನ ಶಕ್ತಿ ಆಯುರ್ ಆರೋಗ್ಯ ವನ್ನು ಕೊಡಲಿ ಎಂದು ಹಾರೈಸಿ ಅಭಿನಂದಿಸಿದರು.

ಸದ್ಗುರು ಕ್ಷೇತ್ರದ ಸಂಸ್ಥಾಪಕ ಎನ್. ವೆಂಕಟೇಶ್ ಮಾತನಾಡಿ ಈ ಸದ್ಗುರು ಕ್ಷೇತ್ರ ಎಲ್ಲರಿಗಾಗಿ ನಿರ್ಮಾಣ ಮಾಡಿದ್ದು, ಸುತ್ತಮುತ್ತಲಿನ ಎಲ್ಲಾ ನಾಗರೀಕರು ಈ ಆಶ್ರಮಕ್ಕೆ ತನು, ಮನ ಧನ ಸಹಾಯವನ್ನು ನೀಡಿ ಅಭಿವೃದ್ಧಿಯನ್ನು ಹೊಂದಲು ಎಲ್ಲಾ ರೀತಿಯ ಸಹಕಾರ ನೀಡಬೇಕು. ಇಲ್ಲಿ ನಡೆಯುವ ಎಲ್ಲಾ ದೈವ ಕಾರ್ಯಗಳಲ್ಲಿ ಭಾಗವಹಿಸಿ ಭಗವಂಗನ ಪ್ರೇರಣೆ ಹೊಂದಲು ತಿಳಿಸಿದರು.

ಕಾರ್ಯ ಕ್ರಮದಲ್ಲಿ ಕೊಂಡೇನಹಳ್ಳಿ ಬಗವಾನ್ ಸಿಂಗ್ ಭಜನಾ ತಂಡ ಮತ್ತು ಎಸ್.ಅಗ್ರಹಾರ ಮುನಿವೆಂಕಟಪ್ಪ ಭಜನಾ ತಂಡ ಮತ್ತು ಕೋಲಾರದ ಸರೋಜಮ್ಮ, ನಿವೃತ್ತ ಉಪದ್ಯಾಯಿನಿ ಚೌಡಮ್ಮ, ಶಾಂತಮ್ಮ, ಜಯಲಕ್ಷ್ಮಮ್ಮ, ಮುನಿಲಕ್ಷ್ಮಮ್ಮ, ಸರಸ್ಪತಮ್ಮ, ಜಯಮ್ಮ, ಚಿಟ್ನಹಳ್ಳಿ ಅನ್ನದಾತ ನಾರಾಯಣಸ್ವಾಮಿ, ಅಂಕತಟ್ಟಿ ವರದಾರೆಡ್ಡಿ ಇತರರು ಭಾಗವಹಿಸಿದ್ದರು. ಹಾರ್ಮೋನಿಯಂ ಸಹಕಾರ ಬೈರಂಡಹಳ್ಳಿ ನಾರಾಯಣಸ್ವಾಮಿ, ತಬಲ ಸಹಕಾರ ಟೇಕಲ್ ಆಂಜನಪ್ಪಸ್ವಾಮಿ, ಘಟ ಸಹಕಾರ ಬೈರಂಡಹಳ್ಳಿ ನಾರಾಯಣಸ್ವಾಮಿ ನೀಡಿದರು.

Author
Indu Sanje
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಭಾರತೀಯ ಮೂಲದ ಆಪ್ತ ಕಾಶ್ ಪಟೇಲ್ ರನ್ನು FBI ಮುಖ್ಯಸ್ಥರಾಗಿ ನೇಮಿಸಿದ Donald Trumpಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ ಡಾ.ಜಿ.ವೈ.ಪದ್ಮ ನಾಗರಾಜು ಅವರಿಗೆ ಕನ್ನಡ ಜಾನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನತಮಿಳುನಾಡಿಗೆ ನೀರು ಬಿಡಬಾರದೆಂದು ಆಗ್ರಹಿಸಿ ಕನಕಪುರದಲ್ಲಿ ಖಾಲಿ ಕೊಡ ಹಿಡಿದು ರಸ್ತೆ ತಡೆದು ಪ್ರತಿಭಟನೆಡ್ರಗ್ಸ್ ಬೇಡ ಬ್ರೋ-ಜಾಗೃತಿ ಅಭಿಯಾನ ಡ್ರಗ್ಸ್ ಮುಕ್ತ ಸಮಾಜಕ್ಕೆ ಕೈಜೋಡಿಸಿ: ಸಚಿವ ಕೆ.ಹೆಚ್.ಮುನಿಯಪ್ಪಕಾಂಗ್ರೆಸ್ ಹೈಕಮಾಂಡ್‌ನ ದೂರದೃಷ್ಟಿಯ ನಾಯಕತ್ವಕ್ಕೆ ಐಎನ್‌ಟಿಯುಸಿ ಮನವಿಪಾಲನಹಳ್ಳಿ ಮಠದಲ್ಲಿ ಗುರು ಪೂರ್ಣಿಮಾ ಮಹೋತ್ಸವ: “ಗುರು ಮಾರ್ಗವೇ ಜೀವನದ ಸನ್ಮಾರ್ಗ” ಪೂಜ್ಯ ಶ್ರೀ ಸಿದ್ದರಾಜು ಸ್ವಾಮೀಜಿಸರ್ಕಾರಿ ಸೇವೆಗೆ ಸೇರಿದ ಪ್ರತಿಯೊಬ್ಬ ಅಧಿಕಾರಿಯಾಗಲಿ ನೌಕರರಾಗಲಿ ವರ್ಗಾವಣೆ ಹಾಗೂ ನಿವೃತ್ತಿ ಸಹಜ ಪ್ರಕ್ರಿಯೆಯಾಗಿದೆ: ಸಿಪಿ ಅಶ್ವಥ್ ನಾರಾಯಣ್ಹಾರ್ದಿಕ್ ಪಾಂಡ್ಯರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್ಏಕದಿನ ವಿಶ್ವಕಪ್ ಗೆ 10 ತಂಡಗಳು ಆಯ್ಕೆರೆಕ್ಕೆ ಮುರಿದ ಹಕ್ಕಿಯು ಹಾರುತಿದೆ ನೋವಿನಿಂದ ನವಜಾಗೃತಿಯತ್ತ... ಬದಲಾವಣೆಯ ಪರ್ವದತ್ತ" ಡಾ.ಜಿ.ವೈ. ಪದ್ಮನಾಗರಾಜು