ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ಅತಿ ವೇಗವಾಗಿ ಬಂದು ರಸ್ತೆ ವಿಭಜಕದ ಬಳಿ ಇರುವ ಮರಕೆ ಡಿಕ್ಕಿ ಹೊಡೆದುಕೊಂಡ ಪರಿಣಾಮ ತಲೆಗೆ ತೀವ್ರತರವಾದ ಗಾಯವಾಗಿ ಮೃತಪಟ್ಟಿರುವ ಘಟನೆ ಜ್ಞಾನಭಾರತಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ನಡೆದಿದೆ.
ನಾಗರಬಾವಿ ರಿಂಗ್ ರಸ್ತೆಯಿಂದ ಸುಮನಹಳ್ಳಿ ಕಡೆಗೆ ಹೋಗುವಾಗ ನಾಗರಬಾವಿ ಸರ್ಕಲ್ ಬಳಿ ಇರುವ ಶ್ರೀ ಮಲೆಮಹದೇಶ್ವರ ದೇವಸ್ಥಾನದ ಬಳಿ ಸರ್ವಿಸ್ ರಸ್ತೆಗೆ ತಿರುಗಿಸುವಾಗ ಮರಕ್ಕೆ ಸ್ವತಹ ಡಿಕ್ಕಿ ಹೊಡೆದುಕೊಂಡು ಮೃತಪಟ್ಟಿರುತ್ತಾರೆ ಎಂದು ಜ್ಞಾನಭಾರತೀ ಸಂಚಾರ ಪೊಲೀಸರು ತಿಳಿಸಿರುತ್ತಾರೆ ಮತ್ತು ದೂರು ದಾಖಲಾಗಿರುತ್ತದೆ.