ಬೆಂಗಳೂರು: ಶಿರಸಿ ರತ್ನಾಕರವರು ಚಲನಚಿತ್ರ ಹಾಗೂ ಸುಗಮ ಸಂಗೀತ ಗಾಯಕನಾಗಿದ್ದು, ನಾಡು , ಗಡಿನಾಡು ಹಾಗೂ ಮುಂಬೈನಲ್ಲೂ ಗಾಯನ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.
ನಾಡೋಜ ಬಿ.ಕೆ.ಸುಮಿತ್ರ, ಡಾ ವೈ.ಕೆ.ಮುದ್ದುಕೃಷ್ಣ, ನಾಡೋಜ ಮಹೇಶ್ ಜೋಶಿ, ಅಜಯ್ ವಾರಿಯರ ಮುಂತಾದವರ ಮಾರ್ಗದರ್ಶನದಲ್ಲಿ ಅವರುಗಳ ಜೊತೆಯಲ್ಲಿ ಸುಗಮ ಸಂಗೀತ ಹಾಗೂ ಚಲನಚಿತ್ರಗೀತೆಗಳ ಗಾಯನ ಮಾಡಿರುತ್ತಾರೆ .
ಗೀತೋತ್ಸವ, ಸಿನಿಮಾ ಸಿರಿ, ಚಂದನವಾಹಿನಿಯ ಮಧುರ ಮಧುರವೀ ಮಂಜುಳಗಾನ, ಆಯುಷ್ ವಾಹಿನಿಯ ಕದಂಬ ಕೋಗಿಲೆ, ಕದಂಬೋತ್ಸವ ಹಾಗೂ ಕನ್ನಡ ಹಬ್ಬ, ಗೀತೋತ್ಸವ ಹಾಗೂ ಮುಂಬೈನಲ್ಲಿ ನಡೆದ ಗಾಯನದ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮೆಚ್ಚುಗೆ ಪಡೆದಿರುತ್ತಾರೆ.
ಇವರ ಅಪಾರ ಸಾಧನೆಗಳನ್ನು ಪರಿಗಣಿಸಿದ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರಾದ ಶಿವಕುಮಾರ್ ನಾಗರ ನವಿಲೆಯವರು ‘ಸಿಂಗಾಪುರದ ವಿಶ್ವ ಕನ್ನಡ ಹಬ್ಬದ ಸಂಗೀತೋತ್ಸವ’ಕ್ಕೆ ಆಯ್ಕೆ ಮಾಡಿ ಆದೇಶ ಪತ್ರ ನೀಡಲಾಯಿತು. ಈ ಸಂದರ್ಭದಲ್ಲಿ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ, ಅನೀಲ್ ಕುಮಾರ್ ಜೊತೆಗಿದ್ದರು.