ಮಾಗಡಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಸ್ತುತ ಸಂಸದರಾದ ಡಿ.ಕೆ.ಸುರೇಶ್ ಅವರನ್ನು ಮತ್ತೊಮ್ಮೆ ಗೆಲ್ಲಿಸಲು ಹಗಲಿರುಳು ಶ್ರಮಿಸಲಾಗುವುದು ಎಂದು ಕೆಪಿಸಿಸಿ ಒಬಿಸಿ ಮಾಗಡಿ ಅದ್ಯಕ್ಷರಾದ ತಿರುಮಲೆ ಶಿವಕುಮಾರ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಮ್ಮ ಜನುಮದಿನದ ನಿಮಿತ್ತವಾಗಿ ಸ್ನೇಹಿತರಿಂದ ಸನ್ಮಾನ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಾಲಿ ಸಂಸದರಾದ ಡಿ.ಕೆ.ಸುರೇಶ್ ಅವರು ಕ್ರಿಯಾಶೀಲ ಜನಪ್ರತಿನಿಧಿಗಳಾಗಿದ್ದಾರೆ. ಒಬ್ಬ ಸಂಸದರು ಗ್ರಾಪಂ ಮಟ್ಟದಲ್ಲಿ ಕೆಲಸ ಮಾಡುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.
ಮತ್ತೊಮ್ಮೆ ಅವರನ್ನು ಗೆಲ್ಲಿಸಲು ಈ ಕ್ಷೇತ್ರದ ಶಾಸಕರು ನಮ್ಮ ನಾಯಕರಾದ ಹೆಚ್.ಸಿ.ಬಾಲಕೃಷ್ಣ ಅವರ ಸಲಹೆ ಸೂಚನೆ ಮಾರ್ಗದರ್ಶನದಲ್ಲಿ ಪಟ್ಟಣ ಸೇರಿದಂತೆ ಗ್ರಾಪಂ ಮಟ್ಟದಲ್ಲಿಯೂ ಬೂತ್ ಮಟ್ಟದಲ್ಲಿ ಯುವಕರನ್ನು ಸಂಘಟಿಸಿ ಮತ್ತೊಮ್ಮೆ ಡಿ.ಕೆ.ಸುರೇಶ್ ಅವರ ಗೆಲುವಿಗೆ ಹಗಲಿರುಳು ಶ್ರಮಿಸಲಾಗುವುದು ಎಂದು ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಒಬಿಸಿ ಘಟಕದ ಟೌನ್ ಉಪಾಧ್ಯಕ್ಷ ತಿರುಮಲೆ ವೆಂಕಟೇಶ್ ಮಾತನಾಡಿ ಶಿವಕುಮಾರ್ ಅವರು ಒಬಿಸಿ ಘಟಕದ ಅದ್ಯಕ್ಷರಾಗಿ ಯುವಕರು ಸೇರಿದಂತೆ ಎಲ್ಲರನ್ಬೂ ವಿಶ್ವಾಸಕ್ಕೆ ತೆಗೆದುಕೊಂಡು ಕಾಂಗ್ರೆಸ್ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಹೆಚ್ಚಿನ ಜವಾಬ್ದಾರಿ ನೀಡಲು ಶಾಸಕರಾದ ಹೆಚ್.ಸಿ.ಬಾಲಕೃಷ್ಣ ಅವರಲ್ಲಿ ಮನವಿ ಮಾಡಲಾಗಿದೆ. ಅವರ ಜನುಮದಿನವಾದ ಇಂದು ದಯಾಮಯನಾದ ಮಾಗಡಿ ರಂಗನಾಥಸ್ವಾಮಿಯು ಹೆಚ್ಚಿನ ಆಯಸ್ಸು ಆರೋಗ್ಯವನ್ನು ಕೊಟ್ಟು ಕಾಪಾಡಲಿ ಎಂದು ಪ್ರಾರ್ಥಿಸಲಾಗಿದೆ ಎಂದು ವೆಂಕಟೇಶ್ ಹೇಳಿದರು.
ರಾಜ್ಯ ಹಿಂದುಳಿದ ವರ್ಗಗಳ ಪ್ರಧಾನ ಕಾರ್ಯದರ್ಶಿ ಪಿ.ವಿ.ಸೀತಾರಾಂ, ತಾಪಂ ಮಾಜಿ ಸದಸ್ಯ ಸಿ.ಜಯರಾಂ, ಮುಖಂಡರಾದ ರಮೇಶಣ್ಣ, ಟ್ರಾಕ್ಟರ್ ಶ್ರೀನಿವಾಸ್, ವಿಶ್ವಕರ್ಮ ಮುಖಂಡ ಮಂಜುನಾಥ್, ಲಕ್ಷ್ಮೀಪತಿ, ಗೋಪಾಲ್, ಲಕ್ಷ್ಮೀನಾರಾಯಣ್, ಶಂಕರ್, ಲಕ್ಷ್ಮೀನರಸಿಂಹ, ನಾಗೇಶ್, ಕುಮಾರ್, ಗಂಗಾಧರ್ ಸೇರಿದಂತೆ ಮತ್ತಿತರಿದ್ದರು.