ಚಿತ್ರದುರ್ಗ: ಹೊಸ ಸರ್ಕಾರ ಬಂದು ಆರು ತಿಂಗಳಾಗಿದ್ದು.ಚಿತ್ರದುರ್ಗ ಜಿಲ್ಲಾ ಆಡಳಿತದಲ್ಲಿ ವಿಶೇಷವಾಗಿ ಕಂದಾಯ ಇಲಾಖೆಯು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವು ದರಲ್ಲಿ.ಜಿಲ್ಲಾಧಿಕಾರಿ ಶ್ರೀಮತಿ ದಿವ್ಯ ಪ್ರಭು ಅವರು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಪ್ರಸಕ್ತ ಸಾಲಿನ ಹೊಸ ಸರ್ಕಾರದ ಆಡಳಿತ ಅವಧಿಯಲ್ಲಿ ಸರ್ಕಾರದ ಮಹತ್ವಕಾಂಕ್ಷೆಯ ಜನಪ್ರಿಯ ಯೋಜನೆಗಳನ್ನು ಜಿಲ್ಲೆಯ ಜನರಿಗೆ ಯಶಸ್ವಿಯಾಗಿ ತಲುಪಿರುವ ಅಂಕಿ ಅಂಶದ ಸಂಪೂರ್ಣ ಮಾಹಿತಿ ಯನ್ನು ಬಿಡುಗಡೆಗೊಳಿಸಿ. ಮಾಧ್ಯಮದವರೊಂದಿಗೆ ಮಾತನಾಡಿ, ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸುವಲ್ಲಿ ಇಲಾಖೆ ಅಧಿಕಾರಿಗಳು ಜನರ ಅಶೋತ್ತರಗಳನ್ನು ಈಡೇರಿಸಲು.
ಜನರ ಸಮಸ್ಯೆಗಳಿಗೆ ಶೀಘ್ರ ಪರಿಹಾರ ನೀಡಲು. ಜನಸ್ನೇಹಿ ಹೆಸರಿನಲ್ಲಿ ಕಚೇರಿ ಕೆಲಸ ಕಾರ್ಯಗಳನ್ನು ಸರಳ ಮತ್ತು ಪಾರದರ್ಶಕ ಹಾಗೂ ಡಿಜೆಲೀಕರಣ ಗೊಳಿಸಿ. ಆಡಳಿತ ಸುಗಮ ಗೋಳಿಸಲು. ಅಧಿಕಾರಿಗಳಿಗೆ ಸೂಚಿಸಿದ್ದೆವು.ಗ್ರಾಮೀಣ ಭಾಗದಲ್ಲಿ ರೈತರು ಹಾಗೂ ಜನಸಾಮಾನ್ಯರ ಖಾತೆ, ಕಂದಾಯ,ಪಹಣಿ ತಿದ್ದುಪಡಿ ಹಾಗೂ ಈ ಸ್ವತ್ತು ಸೇರಿದಂತೆ ಅನೇಕ ಕೆಲಸಗಳಿಗೆ ಹಳ್ಳಿಗಳಿಂದ ರೈತರು ಮತ್ತು ಜನರು ಹತ್ತಾರು ಕಿಲೋಮೀಟರ್ ದೂರದಲ್ಲಿರುವ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಇರುವ ಇಲಾಖೆ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸಲು.
ಜಿಲ್ಲಾಧಿಕಾರಿಗಳ ನಡೆ ಎಂಬ ವಿಶೇಷ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಮಾಡುವ ಮೂಲಕ. ಒಂದೇ ಸಭೆಯಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು ಸೇರಿ ಸ್ಥಳದಲ್ಲಿ ಸಮಸ್ಯೆಗೆ ಪರಿಹಾರ ಸೂಚಿಸುವ ಕೆಲಸಗಳು ಮಾಡಿದ್ದೇವೆ ಎಂದರು.ಅಟಲ್ ಜನಸ್ನೇಹಿ ಕೇಂದ್ರದಲ್ಲಿ ಸುಮಾರು 3.68 ಲಕ್ಷ ಅರ್ಜಿಗಳಿಗೆ ವಿವಿಧ ಸೌಲಭ್ಯ ಒದಗಿಸಿದ್ದೇವೆ. ಇನ್ನು 51,876 ಸಾವಿರ ಅರ್ಜಿ ವಿವಿಧ ಕಾರಣಗಳಿಗೆ ವಜಾ ಆಗಿವೆ ಎಂದರು.