ಬೆಂಗಳೂರು: ಸಮಸ್ತ ಹಿಂಧೂ ಬಾಂದವರು ಕಂಡಂತ ಕನಸು ನನಸಾದ ಈ ಶುಭ ದಿನ ನಮ್ಮೆಲ್ಲರಿಗೂ ಹೊಸ ವರುಷದ ಸಂಭ್ರಮದಂತೆ.
ಈ ಶುಭ ದಿನದಂದು ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಬೆಂಗಳೂರು ನಗರ ಮಹಿಳಾ ಜಿಲ್ಲಾಧ್ಯಕ್ಷರಾದ ಗಂಗರಾಜಮ್ಮ ಪ್ರಕಾಶ್ ಮೂರ್ತಿ ಹಾಗೂ ಪ್ರಧಾನ ಕಾರ್ಯದರ್ಶಿ ಲತಾ ಕೃಷ್ಣಪ್ಪ ರವರ ಆಯೋಜಕತ್ವದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಕೇಂದ್ರ ಕಚೇರಿಯಲ್ಲಿ ನಡೆದ ಶ್ರೀರಾಮ ಧ್ಯಾನ ಮತ್ತು ಪೂಜಾ ಕಾರ್ಯಕ್ರಮ ಬಹಳ ಭಕ್ತಿಪೂರ್ವಕವಾಗಿ ನಡೆಯಿತು.
ಶ್ರೀ ರಾಮ ಚಂದ್ರ ಪ್ರಭು ಶ್ರೀ ಆಂಜನೇಯ ಸ್ವಾಮಿ ಯು ಉತ್ತಮ ಆಯುಷ್ಯ ಅರೋಗ್ಯ ಅಭಿವೃದ್ಧಿ ಕರುಣಿಸಲಿ, ದುಷ್ಟ ಶಕ್ತಿ ದುಷ್ಟ ಬುದ್ದಿ ದೂರಾಗಲಿ, ಸಾದಾ ನಗುವಿನ ನೆಮ್ಮದಿಯ ಜೀವನ ಸರ್ವರದಾಗಲಿ,ದಿನ ನಿತ್ಯ ರಾಮ ನಾಮ ಸ್ಪಟಿಸಿ ಬದುಕು ಬಂಗಾರ ವಾಗಲಿ ಎಂದು ಆ ಶ್ರೀರಾಮನಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಪ್ರಾರ್ಥನೆ ಮಾಡಿದರು.
ಈ ಶುಭ ಸಂದರ್ಭದಲ್ಲಿ ಕರ್ನಾಟಕ ಪ್ರೆಸ್ ಕ್ಲಬ್ ಕೌನ್ಸಿಲ್ ಅಧ್ಯಕ್ಷ ಶಿವಕುಮಾರ್ ನಾಗರ ನವಿಲೆ, ಗಾಯತ್ರಿ ಶ್ರೀನಿವಾಸ್, ಮಂಜುಪಾವಗಡ, ಮಂಜುಳಾ, ರಂಜಿತಾ, ಗಾಯಕಿ ಸುಕೃತಿ ಮುಂತಾದವರು ಭಾಗಿಯಾಗಿದ್ದರು.