ದೇವನಹಳ್ಳಿ: ನಾಯಿ ಬೊಗಳಿದ್ದಕ್ಕೆ ಮಾಲೀಕನಿಗೆ ಚಾಕುವಿನಿಂದ ಇರಿದ ಕಿರಾತಕರು,ದೇವನಹಳ್ಳಿ ತಾಲ್ಲೂಕು ದೊಡ್ಡಚೀಮನಹಳ್ಳಿಯಲ್ಲಿ ಘಟನೆ ಮಧುಕುಮಾರ್(34) ಚಾಕು ಇರಿತಕ್ಕೊಳಗಾದ ಯುವಕ ಚಾಕು ಇರಿತದ ರಭಸಕ್ಕೆ ದೇಹದೊಳಗೆ ಉಳಿದ ಚಾಕುವಿನ ತುದಿಯ ಚೂರು ಇಂತಹ ಮಾರಣಾಂತಿಕ ಹಲ್ಲೆ ಮಾಡಿದ ಬಲಾಢ್ಯರ ರಕ್ಷಣೆಯಲ್ಲಿ ಪೊಲೀಸರು ಭಾಗಿಯಾಗಿದ್ದಾರೆ ಆರೋಪಿಗಳನ್ನು ಬಂಧಿಸಿಲ್ಲ ಹಾಗೂ ಸರಿಯಾದ ಮಾಹಿತಿ ನೀಡುವಲ್ಲಿ ನಿರಾಕರಣೆ ಮಾಡುತ್ತಿದ್ದು, ರಕ್ಷಣೆ ಮಾಡಬೇಕಾದ ಪೊಲೀಸರೇ ಶೋಷಣೆ ಮಾಡುತ್ತಿದ್ದಾರೆ ಎಂದು ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಜಿ.ಮಾರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇವನಹಳ್ಳಿ ಪಟ್ಟಣದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಮಾದಿಗ ದಂಡೋರ ವತಿಯಿಂದ ಅಪರಾಧಿಗಳ ರಕ್ಷಣೆ ಮಾಡುತ್ತಿರುವ ಪೊಲೀಸರನ್ನು ವಿರೋಧಿಸಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.ರಾಜ್ಯ ಪ್ರಚಾರ ಸಮಿತಿಯ ಅಧ್ಯಕ್ಷ ಬುಳ್ಳಳ್ಳಿ ರಾಜಪ್ಪ ಮಾತನಾಡಿ ನಾಯಿ ಕಚ್ಚಿದ ಆರೋಪದ ಮೇಲೆ ಮಧುಗೆ ಹಲ್ಲೆ ಮಾಡಿದ್ದಾರೆ, ಅಮಾಯಕರನ್ನು ಬಂಧಿಸಿ ನಿಜವಾದ ಆರೋಪಿಗಳನ್ನು ರಕ್ಷಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು,ಯುವಕ ಮಧು ಒಳ್ಳೆಯ ಚಾರಿತ್ರ್ಯವುಳ್ಳವನು, ಹಲ್ಲೆ ಮಾಡಿದವರು ಪೊಲೀಸ್ ಭೂ ಮಾಫಿಯಾ ರೌಡಿಶೀಟರ್ಗಳು ಆದರೂ ಅಂತವರನ್ನು ರಕ್ಷಣೆ ಮಾಡಿ ಬೆಂಬಲ ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಇದೇ ಸಂದರ್ಭದಲ್ಲಿ ಮಧುಕುಮಾರ್ ಅವರ ತಾಯಿ ಪೂಜಮ್ಮ,ಮಾದಿಗ ದಂಡೋರ ಜಿಲ್ಲಾ ಪ್ರಚಾರ ಸಮಿತಿಯ ಜಿಲ್ಲಾಧ್ಯಕ್ಷ ಮುನಿರಾಜು, ತಾಲೂಕು ಗೌರವ ಅಧ್ಯಕ್ಷ ಮುನಿರಾಜು ಗೊಡ್ಲು ಮುದ್ದೇನಹಳ್ಳಿ, ತಾಲೂಕು ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಬೂದಿಗೆರೆ ಮುನಿಯಪ್ಪ, ತಾಲೂಕುಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಂ ದೇವರಾಜ್, ತಾಲೂಕುಪ್ರಧಾನ ಕಾರ್ಯದರ್ಶಿ ಬುಳ್ಳಳ್ಳಿ ಮುನಿರಾಜು, ಖಜಾಂಚಿ ಶ್ರೀನಿವಾಸ್, ಜಿಲ್ಲಾ ಸಮಿತಿಯ ಪೂಜಪ್ಪ ಇಂಡ್ರಸನ್ನಹಳ್ಳಿ, ತಾಲೂಕು ಸಮಿತಿಯ ಮುದುಗುರ್ಕಿ ಮೂರ್ತಿ ಮತ್ತಿತರರು ಇದ್ದರು.