ಕುಣಿಗಲ್: ಪುರಸಭೆಯ ಲೇಔಟ್ನಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದ ಧನದ ಶೆಡ್ ತೆರವುಗೊಳಿಸಲು ಮುಂದಾದ ಅಧಿಕಾರಿಗೊಂದಿಗೆ ಶೆಡ್ ನಿರ್ಮಾಣದಾರರು, ವಾಗ್ವಾದ ನಡೆಸಿ ಕಾರ್ಯಚರಣೆಗೆ ಅಡ್ಡಿ ಪಡಿಸಿ, ನೌಕರರ ಮೇಲೆ ಹಲ್ಲೆಗೆ ಯತ್ನಿಸಿದ ಘಟನೆ ಪಟ್ಟಣದ ಮಲ್ಲಾಘಟ್ಟದಲ್ಲಿ ಮಂಗಳವಾರ ನಡೆದಿದೆ,
ಪಟ್ಟಣದ ಮಲ್ಲಾಘಟ್ಟ 2 ನೇ ವಾರ್ಡ್ ವಾರ್ಡ್ ಸರ್ವೆ ನಂ 23 ರಲ್ಲಿ ಪುರಸಭೆಯಿಂದ ಅರ್ಹ ಬಡ ಪಲಾನುಭವಿಗಳಿಗೆ ನಿವೇಶನ ವಿತರಣೆ ಮಾಡಲು ಬಡಾವಣೆ ನಿರ್ಮಾಣ ಮಾಡಲಾಗುತ್ತಿದೆ, ಈ ನಿರ್ಮಾಣದ ಜಾಗದಲ್ಲಿ ರಂಗೇಗೌಡ, ಮೀನಾಕ್ಷಿ ಎಂಬುವರು ಅಕ್ರಮವಾಗಿ ಧನದ ಕೊಟ್ಟಿಗೆಯನ್ನು ನಿರ್ಮಾಣ ಮಾಡಿಕೊಂಡಿದ್ದರು, ಈ ಶೆಡ್ ಅನ್ನು ತೆರವುಗೋಳಿಸಲು ಪುರಸಭಾ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಮತ್ತು ಅವರ ಸಿಬ್ಬಂದಿಗಳು ತೆರಳಿ, ಜೆಸಿಬಿ ಯಂತ್ರದ ಮೂಲಕ ಶೆಡ್ ತೆರವುಗೊಳಿಸಲು ಮುಂದಾದರು, ಈ ನಡುವೆ ರಂಗೇಗೌಡ, ಮೀನಾಕ್ಷಿ ಮತ್ತು ಅವರ ಸಂಬಂಧಿಕರು ಅಧಿಕಾರಿಗಳೊಂದಿಗೆ ಮಾತಿನ ಚಕಾಮಕಿ ನಡೆಸಿದರು,
ಕಾರ್ಯಚರಣೆಗೆ ಅಡ್ಡಿ : ಬಹಳ ವರ್ಷಗಳ ಹಿಂದೆ ಧನದ ಕೊಟ್ಟಿಗೆಯನ್ನು ಕಟ್ಟಿಕೊಂಡಿದ್ದೇವೆ, ಈ ಜಾಗ ನಮ್ಮದು ಹಾಗಾಗಿ ಶೆಡ್ ಕೆಡವಲು ಬಿಡುವುದಿಲ್ಲ ಎಂದು ರಂಗೇಗೌಡ, ಮೀನಾಕ್ಷಿ ಅಧಿಕಾರಿಗಳೊಂದಿಗೆ ವಾಗ್ವಾದಕ್ಕೆ ಇಳಿದು ಜೆಸಿಬಿಗೆ ಅಡ್ಡಲಾಗಿ ನಿಂತು ಕಾರ್ಯಚರಣೆಗೆ ಅಡ್ಡಿ ಪಡಿಸಿದರು, ಇಲ್ಲಿ ಯಾವುದೇ ಜಾಗ ಖಾಸಗಿಯವರದು ಇಲ್ಲ, ಹೀಗಾಗಿ ಕಾರ್ಯಚರಣೆಗೆ ಅಡ್ಡಿ ಪಡಿಸುವುದು ಸರಿಯಲ್ಲ ಎಂದು ಮುಖ್ಯಾಧಿಕಾರಿ ಶಿವಪ್ರಸಾದ್ ತಿಳಿಸಿದರು.
ಹಲ್ಲೆಗೆ ಯತ್ನ: ಅಕ್ರಮ ಕಟ್ಟಡ ಕೆಡವಲು ಮುಂದಾದ ಪುರಸಭಾ ನೌಕರನಿಗೆ ಇಟ್ಟಿಗೆಯಿಂದ ಹಲ್ಲೆ ನಡೆಸಲು ಶೆಡ್ ನಿರ್ಮಾಣದಾರರು ಮುಂದಾದರು ತಕ್ಷಣ ಮುಖ್ಯಾಧಿಕಾರಿಗಳು ಇಟ್ಟಿಗೆಯನ್ನು ಅವರ ಕೈಯಿಂದ ಕಿತ್ತುಕೊಂಡರು. ಬಳಿಕ ಮಧ್ಯ ಪ್ರವೇಶಿಸಿ ಪೊಲೀಸರು ಸರ್ಕಾರದ ಜಾಗ ಅಕ್ರಮಿಸಿಕೊಳ್ಳುವುದು ಕಾನೂನಿಗೆ ವಿರುದ್ದವಾಗಿದೆ ನಿಮ್ಮದು ಏನೇ ವಿಚಾರ ಇದ್ದರು ಅಧಿಕಾರಿಗೊಳಿಗೆ ಮಾತನಾಡಿ ಸಮಸ್ಯೆ ಬಗೆ ಹರಿಸಿಕೊಳ್ಳಿ ಕಾರ್ಯಚರಣೆಗೆ ಅಡ್ಡಿ ಪಡಿಸುವುದು ಸರಿಯಲ್ಲಿ ಎಂದರು ನಂತರ ಪೊಲೀಸರ ರಕ್ಷಣೆಯೊಂದಿಗೆ ಅಕ್ರಮ ಕಟ್ಟಡವನ್ನು ನೆಲಸಮಗೊಳಿಸಲಾಯಿತು.
800 ಕ್ಕೂ ಅಧಿಕ ನಿವೇಶನ : ಪತ್ರಕರ್ತರೊಂದಿಗೆ ಪುರಸಭಾ ಮಖ್ಯಾಧಿಕಾರಿ ಪಿ.ಶಿವಪ್ರಸಾದ್ ಮಾತನಾಡಿ ಸಂಸದ ಡಿ.ಕೆ.ಸುರೇಶ್, ಶಾಸಕ ಡಾ.ಹೆಚ್.ಡಿ.ರಂಗನಾಥ್ ಅವರು ಪಟ್ಟಣದ ನಿವೇಶನ ರಹಿತರಿಗೆ ನಿವೇಶನ ಕೊಡಲು ಉದ್ದೇಶಿಸಿದ್ದು ಈ ನಿಟ್ಟಿನಲ್ಲಿ ಮಲ್ಲಾಘಟ್ಟದ ಸರ್ವೆ ನಂ 24 ರಲ್ಲಿ 9 ಎಕರೆ 18 ಗುಂಟೆ ಜಾಗದಲ್ಲಿ ಬಂಡೆ ಕಲ್ಲು, ತೆಗೆಯಲು ಮತ್ತು ರಸ್ತೆ, ಚರಂಡಿ ಮೊದಲಾದ ಕಾಮಗಾರಿಗಾಗಿ ಸರ್ಕಾರದಿಂದ ಹಣ ಮಂಜೂರು ಮಾಡಿದ್ದು, ಕಾಮಗಾರಿ ಪ್ರಗತಿಯಲ್ಲಿ ಇದೆ, ಹಾಗೂ ಬಿದನಗೆರೆ ಸಮೀಪ ಸಮೀಪ ಸುಮಾರು 15 ಎಕರೆ ಜಾಗ ಗುರುತಿಸಿದ್ದು ಇದರ ಕಾಮಗಾರಿ ಸಹಾ ನಡೆಯುತ್ತಿದೆ,
ಮಲ್ಲಾಘಟ್ಟ ಮತ್ತು ಬಿದನಗೆರೆ ಸೇರಿ ಒಟ್ಟು 800 ಕ್ಕೂ ಅಧಿಕ ನಿವೇಶನ ವಿಂಗಡಣೆ ಮಾಡಲಾಗುತ್ತಿದೆ ಇದರಿಂದ ಮನೆ ಇಲ್ಲದವರಿಗೆ ನಿವೇಶನ ಕೊಡಲು ಅನುಕೂಲವಾಗುತ್ತಿದೆ, ಬಡಾವಣೆ ಆಗುತ್ತಿರುವ ಜಾಗದಲ್ಲಿ ಯಾರೇ ಸಹಾ ಅಕ್ರಮ ಕಟ್ಟಡ ನಿರ್ಮಾಣ ಮಾಡಿದರೇ ಅಂತವರ ವಿರುದ್ದ ಕ್ರಮಕೈಗೊಳ್ಳಲಾಗುವುದೆಂದು ಹೇಳಿದರು.ಕಾರ್ಯಚರಣೆಯಲ್ಲಿ ಪುರಸಭೆ ಆರೋಗ್ಯ ನಿರೀಕ್ಷಕ ಚಿಕ್ಕಸ್ವಾಮಿ ಮತ್ತಿತರರು ಇದ್ದರು.