ಬೆಂಗಳೂರು: ಅಕ್ಷರನಾದ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ಮೊದಲ ಮಹಿಳಾ ಸಾಹಿತ್ಯ ಸಮ್ಮೇಳನವನ್ನು ಬೆಂಗಳೂರು ಶಾಂತಿನಗರದ ಮಡ್ಟ್ಯಾಂಕ್ ಮೈದಾನದಲ್ಲಿ ಆಯೋಜನೆ ಮಾಡಲಾಗಿತ್ತು. ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಮಂಜುಳಾ ಪಾವಗಡರವರಿಗೆ ಕನ್ನಡ ಭಾವುಟ ನೀಡುವ ಮೂಲಕ ಸಂಸ್ಥಾಪಕಿ ಶೃತಿ ಮಧುಸೂದನ್ ಹಾಗೂ ಪದಾಧಿಕಾರಿಗಳು ಸ್ವಾಗತ ಕೋರಿದರು.
ಸಮ್ಮೇಳನ ಅಧ್ಯಕ್ಷರನ್ನು ಮೆರವಣಿಗೆಯ ಮೂಲಕ ವೇದಿಕೆಗೆ ಕರೆತರಲಾಯಿತು.ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಅತಿಥಿ ಗಣ್ಯರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕನ್ನಡ ಗೀತೆಗಳ ಗಾಯನ, ಯಕ್ಷಗಾನ, ಭರತನಾಟ್ಯ, ನೃತ್ಯಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮ್ಮೇಳನಕ್ಕೆ ಮತ್ತಷ್ಟು ಮೆರುಗು ನೀಡಿದವು.
ಸುಮಾರು 36 ಮಹಿಳಾ ಸಾಹಿತಿಗಳಿಗೆ ‘ನಾರಿ ಶಕ್ತಿ ಸಾಹಿತ್ಯ ರತ್ನ ಶಿರೋಮಣಿ’ ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕವಿಗೋಷ್ಠಿ, ಸಾಹಿತ್ಯಗೋಷ್ಠಿ, ಉಪನ್ಯಾಸ ಕಾರ್ಯಕ್ರಮಗಳು ಬಹಳ ಅಚ್ಚುಕಟ್ಟಾಗಿ ಮೂಡಿ ಬಂದವು. ಭಾಗವಹಿಸಿದ ಕವಿ, ಸಾಹಿತಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ “ನಾರಿ ಶಕ್ತಿ ನೀ- ನಿನಾದ” ಎಂಬ ಕವನ ಸಂಕಲವನ್ನು ಲೋಕಾರ್ಪಣೆ ಮಾಡಲಾಯಿತು.
ಸಮ್ಮೇಳನ ಅಧ್ಯಕ್ಷರಾದ ಡಾ. ಮಂಜುಳಾ ಪಾವಗಡರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅಕ್ಷರನಾದ ಸಂಸ್ಥೆಯ ಸಾಧನೆಗಳಿಗೆ ಶ್ಲಾಘನೀಯ ವ್ಯಕ್ತಪಡಿಸಿದರು. ಸಂಸ್ಥಾಪಕಿ ಶೃತಿ ಮಧುಸೂದನ್ ಹಾಗೂ ಅವರ ತಂಡಕ್ಕೆ ಶುಭಾಶಯಗಳನ್ನು ತಿಳಿಸುತ್ತಾ, ಮಹಿಳೆ ಈ ದಿನ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ಮಹತ್ತರ ಸಾಧನೆ ಮಾಡಿದ್ದು, ತಾವೆಲ್ಲರೂ ಕೂಡ ಮುಂದೊಂದು ದಿನ ನಾಡು ಕೊಂಡಾಡುವಂತೆ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಬೇಕು.
ಮತ್ತು ಹಠ ನಿಮ್ಮನ್ನು ಸಾಧನೆಗಳತ್ತ ಕೊಂಡೊಯ್ಯುವ ಸಾಧನಗಳು. ಇತಿಹಾಸವನ್ನು ಒಮ್ಮೆ ತಿರುಚಿ ನೋಡಿದಾಗ ಮಹಿಳೆಯರ ಸಾಧನೆಗಳಿಂದೆ ಅದೆಷ್ಟೋ ಸಮಸ್ಯೆ, ಸವಾಲುಗಳು ಅಡಗಿದ್ದು, ಅವುಗಳನ್ನು ದಿಟ್ಟತನದಿಂದ ಎದುರಿಸಿ ದಿಟ್ಟ ಮಹಿಳೆಯರಾಗಿ ಇತಿಹಾಸ ಪುಟಗಳಲ್ಲಿ ಸೇರಿದ್ದಾರೆ. ತಾವೆಲ್ಲರೂ ಕೂಡ ಕನ್ನಡ ಸಾಹಿತ್ಯವನ್ನು ಉಳಿಸಿ, ಬೆಳಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು. ಪದಾಧಿಕಾರಿಗಳಾದ ಮಧುಸೂದನ್, ಅಭಿಷೇಕ್ ಭಾರದ್ವಜ್, ತೇಜು, ತುಳಸಿ ತಾರಾ,, ಹರೀಶ್ ರವರ ಸಹಕಾರ ಮೆಚ್ಚುವಂತಹದು. ಕಾರ್ಯಕ್ರಮವನ್ನು ಶ್ರೀಲತಾರವರು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಸಮಾಜ ಸೇವಕಿ, ಜೆಡಿಎಸ್ ಪ್ರದಾನ ಕಾರ್ಯದರ್ಶಿ ಸಾಯಿ ಸುಮನ್, ಜಾನಪದ ಪರಿಷತ್ ಅಧ್ಯಕ್ಷ ಎನ್. ಆರ್. ಮಂಜುನಾಥ್, ಸಾಹಿತಿ ಅನಿತಾ ಪಿ. ಕೆ, ಕಲ್ಪನಾ, ಸಾಹಿತಿ ಆಶಾಶಿವು, ಸಾಹಿತಿ ಮಂದಗೆರೆ ರಾಮ್ ಕುಮಾರ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.