ಬೆಂಗಳೂರು: ತನಿಷ್ಕಾ ಕಪಿಲ್ ಕಾಲಭೈರವ ಅವರು ಮಲ್ಲೇಶ್ವರಂ ಅಸೋಸಿಯೇಷನ್ನಲ್ಲಿ ನಡೆಯುತ್ತಿರುವ 25ನೇ ವರ್ಷದ ಎಂ.ಎಸ್.ರಾಮಯ್ಯ ಸ್ಮಾರಕ ಟೇಬಲ್ ಟೆನಿಸ್ ಟೂರ್ನಿಯಲ್ಲಿ 17 ವರ್ಷದೊಳಗಿನ ಬಾಲಕಿಯರ ವಿಭಾಗದ ಸಿಂಗಲ್ಸ್ನಲ್ಲಿ ಪ್ರಶಸ್ತಿ ಗೆದ್ದರು. ಟೂರ್ನಿಯಲ್ಲಿ ಅವರಿಗೆ ಇದು ಮೂರನೇ ಪ್ರಶಸ್ತಿಯಾಗಿದೆ.
13 ಮತ್ತು 15 ವರ್ಷದೊಳಗಿನ ವಿಭಾಗದಲ್ಲೂ ಅವರು ಚಾಂಪಿಯನ್ ಆಗಿ ಹೊರಹೊಮ್ಮಿದ್ದರು.ಶುಕ್ರವಾರ ನಡೆದ ಫೈನಲ್ನಲ್ಲಿ ತನಿಷ್ಕಾ 11-9, 11-6, 11-7ರಿಂದ ಹಿಯಾ ಸಿಂಗ್ ಅವರನ್ನು ಮಣಿಸಿದರು. ಸೆಮಿಫೈನಲ್ನಲ್ಲಿ ತನಿಷ್ಕಾ 11-7, 11-5, 11-8ರಿಂದ ನೀತಿ ಅಗರ್ವಾಲ್ ವಿರುದ್ಧ; ಹಿಯಾ 3-11, 11-8, 11-6, 11-7ರಿಂದ ಆಯುಷಿ ಬಿ. ಗೋಡ್ಸೆ ವಿರುದ್ಧ ಗೆಲುವು ಸಾಧಿಸಿದ್ದರು.
17 ವರ್ಷದೊಳಗಿನ ಬಾಲಕರ ವಿಭಾಗದ ಸಿಂಗಲ್ಸ್ನಲ್ಲಿ ವರುಣ್ ಬಿ. ಕಶ್ಯಪ್ 13-11, 11-4, 11-13, 12-14, 11-8ರಿಂದ ಅಭಿನವ್ ಕೆ. ಮೂರ್ತಿ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದರು. ಸೆಮಿಫೈನಲ್ನಲ್ಲಿ ವರುಣ್ 11-5, 12-10, 11-9ರಿಂದ ಬಿ.ಆರ್. ಗೌರವ್ ಅವರನ್ನು, ಅಭಿನವ್ 12-14, 11-4, 13-11, 11-9ರಿಂದ ತೆಶುಬ್ ದಿನೇಶ್ ಅವರನನ್ನು ಸೋಲಿಸಿದರು.
ಎನ್ಎಂಎಸ್ ವಿಭಾಗದ ಫೈನಲ್ನಲ್ಲಿ ಯು.ಎನ್. ರಾಮ್ಕುಮಾರ್ ಅವರು 13-11, 11-8, 11-6ರಿಂದ ಕೈರಾ ಬಾಳಿಗಾ ಅವರನ್ನು ಮಣಿಸಿ ಚಾಂಪಿಯನ್ ಆದರು.