2ನೇ ಸಿನಿಮಾ ಗೆದ್ದಾಗ ಏನಂದಿದ್ರು?ವರನಟ ಡಾ. ರಾಜ್ಕುಮಾರ್ ಸರಳತೆಗಷ್ಟೇ ಹೆಸರಾದವರಲ್ಲ. ಸಿನಿಮಾ ಮೂಲಕ ಆದರ್ಶಗಳನ್ನು ನಾಡಿಗೆ ಬಿತ್ತರಿಸಿದ ಕಲಾವಿದ. ಅದಕ್ಕೆ ಇಂದಿಗೂ ಅಣ್ಣಾವ್ರನ್ನು ನೆನಪಿಸಿಕೊಳ್ಳುತ್ತೇವೆ. ಕನ್ನಡಿಗರು ಮೆಚ್ಚುವ ಆರಾಧ್ಯ ದೈವ ಆಗಿದ್ದರೂ, ಅಹಂಕಾರ, ದರ್ಪ ಯಾವುದನ್ನೂ ತೋರಿಸಲಿಲ್ಲ. ಇಂದಿನ ಕಲಾವಿದರಿಗೆ ಅಣ್ಣಾವ್ರು ಮಾದರಿಯಾಗಿದ್ದಾರೆ.
ಡಾ.ರಾಜ್ಕುಮಾರ್ ಅದ್ಭುತ ನಟ ಅನ್ನೋದು ಒಂದು ಕಡೆಯಾದರೆ, ಅಷ್ಟೇ ಒಳ್ಳೆಯ ಫ್ಯಾಮಿಲಿ ಮ್ಯಾನ್. ತಾನೆಷ್ಟೇ ಬ್ಯುಸಿಯಾಗಿದ್ದರೂ, ತನ್ನ ಕುಟುಂಬಕ್ಕೆ ಸಮಯ ನೀಡುತ್ತಿದ್ದರು. ಮಕ್ಕಳು ಸೋತಾಗ, ಗೆದ್ದಾಗ ಜೊತೆಯಲ್ಲಿರುತ್ತಿದ್ದರು. ಒಬ್ಬ ನಟನಾಗಿ ಅಣ್ಣಾವ್ರ ಬಗ್ಗೆ ಅಭಿಮಾನಿಗಳಿ ಚೆನ್ನಾಗಿಯೇ ಗೊತ್ತಿದೆ. ಅದೇ ಮನೆಯೊಳಗೆ ಅವರು ಹೇಗಿರುತ್ತಿದ್ದರು? ಮಕ್ಕಳೊಂದಿಗೆ ಹೇಗೆ ನಡೆದುಕೊಳ್ಳುತ್ತಿದ್ದರು ಅನ್ನುವ ಸಂಗತಿ ಗೊತ್ತಿಲ್ಲ.
ರಾಘವೇಂದ್ರ ರಾಜ್ಕುಮಾರ್ ತನ್ನ ಮೊದಲ ಸಿನಿಮಾ ‘ಚಿರಂಜೀವಿ ಸುಧಾಕರ್’ ಸೋತಿತ್ತು. ಆ ವೇಳೆ ರಾಘಣ್ಣ ಮಾನಸಿಕವಾಗಿ ಕುಗ್ಗಿದ್ದರು. ಈ ವೇಳೆ ಅಣ್ಣಾವ್ರು ಮಗ ಬಳಿ ಬಂದು ತಲೆ ಸವರಿ ಧೈರ್ಯ ತುಂಬಿದ್ದರು. ಮುಂದಿನ ವರ್ಷ ‘ನಂಜುಂಡಿ ಕಲ್ಯಾಣ’ ಗೆದ್ದಿತ್ತು. ಆಗಲೂ ರಾಘಣ್ಣನಿಗೆ ಬುದ್ದಿ ಮಾತುಗಳನ್ನು ಹೇಳಿದ್ದರು. ‘ಗಜಪತಿ ಗರ್ವಭಂಗ’ ಗೆದ್ದಾಗಲೂ ರಾಘಣ್ಣನ ಜೊತೆ ಮಾತಾಡಿದ್ದರು. ಈ ವಿಷಯವನ್ನು ಇತ್ತೀಚೆಗೆ ನಡೆದ ಅಣ್ಣಾವ್ರ 96ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ.