ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರ ಕಲೆ, ಸಾಹಿತ್ಯ, ನಾಟಕ, ಸಂಗೀತ, ನೃತ್ಯ, ಚಿತ್ರಕಲೆ, ಯಕ್ಷಗಾನ, ಜಾನ ಪದ ಹೀಗೆ ಸಂಸ್ಕೃತಿ ಸಾಂಸ್ಕೃತಿಕ ಪರಂಪರೆಯ ಕೇಂದ್ರ ತಾಣ.ಈ ಎಲ್ಲಾ ಆಯಾಮಗಳಲ್ಲಿ ತೊಡಗಿಸಿಕೊಂಡವರು ಕರ್ನಾಟಕ ದಾದ್ಯಂತ ಅಲ್ಲದೇ ಹೊರ ರಾಜ್ಯ, ಹೊರ ದೇಶಗಳಿ ದಲೂ ಈ ರವೀಂದ್ರ ಕಲಾಕ್ಷೇತ್ರಕ್ಕೆ ಭೇಟಿ ನೀಡಿರುತ್ತಾರೆ.
ಭೇಟಿ ನೀಡಿ ಇಲ್ಲಿನ ಉಪಹಾರ ಮಂದಿರ ದಲ್ಲಿ ಬಿಸಿ ಬಿಸಿ ಬಜ್ಜಿ, ಕಾಫಿ, ಟೀ, ಉಪ್ಪಿಟ್ಟು ಇನ್ನಿತರ ಲಘು ಉಪಹಾರ ಸೇವಿಸುತ್ತಾ ಸಾಂಸ್ಕೃತಿಕ ಕಲೆಗಳ ಬಗ್ಗೆ ಚರ್ಚಿಸುವರು. ಇದು ಒಂದು ರೀತಿಯ ಸಂಗಮ ಕೇಂದ್ರ .ಅದೇ ‘ರವೀಂದ್ರ ಕಲಾಕ್ಷೇತ್ರದ ಕಾರಂತರ ಕ್ಯಾಂಟೀನ್’: ಸುಮಾರು 40 ವರ್ಷಗಳಿಂದ ಈ ಉಪಹಾರ ಮಂದಿ ರವನ್ನು ಸಮರ್ಥವಾಗಿ ನಿರ್ವಹಣೆ ಆದ ಈ ಕಾರಂತರ ಕ್ಯಾಂಟೀನ್ ಇದೇ 26ಕ್ಕೆ ಬಿಡುಗಡೆ ಆಗುತ್ತಿದೆ.
ಸರ್ಕಾರದ ಪ್ರಕ್ರಿಯೆ ಪ್ರಕಾರ ಇದರ ಮುಂದಿನ ಮಾಲೀಕರು ಹೊಸ ಗುತ್ತಿಗೆದಾರರ ಪಾಲಾಗಿದೆ. ಹಾಗಾಗಿ ಕಾರಂತರು ಇದನ್ನು ತೆರವು ಗೊಳಿಸುತ್ತಿರುವ ಈ ಸಂಧರ್ಭದಲ್ಲಿ ರವೀಂದ್ರ ಕಲಾಕ್ಷೇತ್ರದ ಸಂಪೂರ್ಣ ಒಡನಾಡಿಗಳೆಲ್ಲ ಸೇರಿ ಕ್ಯಾಂಟೀನ್ ಆವರಣದಲ್ಲಿ ಕಾರಂತರಿಗೆ “ ಸಾಂಸ್ಕೃರ್ತಿಕ ಬೀಳ್ಕೊಡುಗೆ “ ಯನ್ನು ನೀಡಿದರು.
ಕಾರಂತರಿಗೆ `ಸಾಂಸ್ಕತಿಕ ಬೀಳ್ಕೊಡುಗೆ’ ಯ ಈ ಸಂದರ್ಭದಲ್ಲಿ ಕಲಾ ಕುಟೀರಾ ಸಾಂಸ್ಕೃರ್ತಿಕ ವೇದಿಕೆಯ ಸೋ.ಫಾಲನೇತ್ರ, ಶಿವಕುಮಾರ್ ದಾವಣಗೆರೆ, ವೆಂಕಟರಾಜು, ಟಿ ತಿಮ್ಮೇಶ್, ಮಂಜು ಪಾಂಡವಪುರ, ರಾಜ್ ಸಂಪಾಜೆ, ಕೆ ಎಸ್ ಡಿ ಎಲ್ ಚಂದ್ರು ಇನ್ನಿತರರು ಇದ್ದರು.