ಬೆಂಗಳೂರು : ಪೊಲೀಸರ ಕುಟುಂಬಕ್ಕೆ ಅನುಕೂಲವಾಗುವ ಸಲುವಾಗಿ ಥಣಿಸಂದ್ರದಲ್ಲಿರುವ ಸಿಎಆರ್ ಉತ್ತರ ವಿಭಾಗದ ಆಟದ ಮೈದಾನದಲ್ಲಿ ಪೊಲೀಸ್ ಕಲ್ಯಾಣ ಮಂಟಪವನ್ನು ಕಟ್ಟಲು ರಾಜ್ಯ ಪೊಲೀಸ್ ಇಲಾಖೆ 10 ಕೋಟಿ ಅನುದಾನ ನೀಡಿದೆ ಎಂದು ನಗರ ಪೊಲೀಸ್ ಆಯುಕ್ತ ಸಿಮಂತ್ ಕುಮಾರ್ ಸಿಂಗ್ ರವರು ತಮ್ಮ ಮಾಸಿಕ ಕವಾಯಿತು ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ಆಯುಕ್ತರ ಮಾಸಿಕ ಕವಾಯಿತಿನಲ್ಲಿ ವಂದನೆ ಸ್ವೀಕರಿಸಿ ಮಾತನಾಡಿದ ಆಯುಕ್ತರು ಸಿಬ್ಬಂದಿಗಳಿಗೆ ಅನುಕೂಲವಾಗುವಂತೆ ಕಲ್ಯಾಣ ಮಂಟಪವನ್ನು ಕಟ್ಟಲು ನಕ್ಷೆ ಹಾಗೂ ಇನ್ನೂ ಇತರೆ ಕಾರ್ಯಗಳು ನಡೆದಿವೆ ಎಂದು ತಿಳಿಸಿದರು, ಆದಷ್ಟು ಬೇಗನೆ ಕಟ್ಟಡವನ್ನು ಕಟ್ಟಿ ಪೊಲೀಸ್ ಸಿಬ್ಬಂದಿಗಳಿಗೆ ಉಪಯೋಗವಾಗಲು ನೀಡಲಾಗುವುದು ಎಂದು ತಿಳಿಸಿದರು.
ಬೆಂಗಳೂರು ನಗರ ಪೊಲೀಸ್ ವಿಭಾಗದಲ್ಲಿ 53 ಜನ ಉತ್ತಮ ಕಾರ್ಯ ನಿರ್ವಹಿಸಿದಕ್ಕಾಗಿ ಪ್ರಸಂಶನಪಾತ್ರವನ್ನು ಸಹ ವಿತರಿಸಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಆಯುಕ್ತರು ಸಾರ್ವಜನಿಕರ ಕಷ್ಟಗಳಿಗೆ ತಕ್ಷಣ ಸ್ಪಂದಿಸ ಬೇಕೆಂದು ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ಸಂಚಾರ ವ್ಯವಸ್ಥೆಯಲ್ಲಿ, ಕಳ್ಳತನ ಪ್ರಕರಣವಿನಲ್ಲಿ, ಗಲಾಟೆ ಇರಲಿ ಯಾವುದೇ ಕ್ಷಣದಲ್ಲಿ ಪೊಲೀಸರು ಸಾರ್ವಜನಿಕರಿಗೆ ಸ್ಪಂದಿಸುವAತಾಗಿರಬೇಕೆAದು ತಿಳಿಸಿದರು.
ಏನ್ ಜಿ ಓ ಸಂಸ್ಥೆಯವರು ಮಕ್ಕಳನ್ನು ಸಹ ಇಂದು ಬೆಳಿಗ್ಗೆ ಪೊಲೀಸರ ಕವಾಯಿತನ್ನು ವೀಕ್ಷಿಸಲು ಕರೆದುಕೊಂಡು ಬಂದಿದ್ದರು. ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಸೈದುಲ್ಲಾ ಅಡವತ್ ರವರ ಮಾರ್ಗದರ್ಶನದಲ್ಲಿ ಕವಾಯಿತು ಉತ್ತಮವಾಗಿತ್ತು ಎಂದು ಆಯುಕ್ತರು ಸಂತೋಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರು ಸೇರಿದಂತೆ ಎಲ್ಲಾ ಕಿರಿಯ ಅಧಿಕಾರಿಗಳು ಹಾಗೂ ಪೊಲೀಸ್ ಕುಟುಂಬ ವರ್ಗದ ಸದಸ್ಯರುಗಳು ಉಪಸ್ಥಿತರಿದ್ದರು.
ಪೊಲೀಸ್ ಕಲ್ಯಾಣ ಮಂಟಪ ನಿರ್ಮಾಣ



