ಕೆಜಿಎಫ್: ನಗರದ ವಿವಿಧ ವಾರ್ಡ್ಗಳ ವ್ಯಾಪ್ತಿಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಲಾಗಿರುವ ಹೈಮಾಸ್ಟ್ ವಿದ್ಯುತ್ ದ್ವೀಪಗಳನ್ನು ಕೆಜಿಎಫ್ ಶಾಸಕಿ ಎಂ. ರೂಪಕಲಾ ಅವರು ಉದ್ಘಾಟಿಸಿದರು.ಹೆಂಡ್ರೀಸ್ ಡ್ರೈವರ್ಸ್ ಲೈನ್ ಹಾಗೂ ಸ್ಕೂಲ್ ಆಫ್ ಮೈನ್ಸ್ ಎದುರುಗಡೆಯ ಬೃಹತ್ ಮೈದಾನದ ಬಳಿ ನಿರ್ಮಿಸಲಾದ ಹೈಮಾಸ್ಟ್ ದೀಪಗಳನ್ನು ಉದ್ಘಾಟಿಸಿ ಮಾತನಾಡಿದ ಶಾಸಕರು, “ಸ್ಕೂಲ್ ಆಫ್ ಮೈನ್ಸ್ ಮೈದಾನ ಹಾಗೂ ಪಾರ್ಕ್ ಭಾಗಗಳಿಗೆ ಸುಂದರ ವಿದ್ಯುತ್ ದೀಪಗಳ ಅಲಂಕಾರ ಮಾಡಲಾಗಿದ್ದು, ರಾತ್ರಿ ವೇಳೆಯಲ್ಲಿ ಕತ್ತಲೆಯಿಂದ ಕೂಡಿದ್ದ ಈ ಪ್ರದೇಶಗಳು ಈಗ ಬೆಳಕಿನಿಂದ ಕಂಗೊಳಿಸುವAತೆ ಮಾಡಲಾಗಿದೆ” ಎಂದು ತಿಳಿಸಿದರು.ನಗರದ ವಿವಿಧ ಪ್ರಮುಖ ಬೇಡಿಕೆಗಳು ಮತ್ತು ಜನದಟ್ಟಣೆಯ ಪ್ರದೇಶಗಳಲ್ಲಿ ಕತ್ತಲೆಯ ಸಮಸ್ಯೆ ನಿವಾರಿಸಲು ಹಾಗೂ ರಾತ್ರಿ ವೇಳೆ ಓಡಾಡುವ ಸಾರ್ವಜನಿಕರಿಗೆ ಮತ್ತು ವಾಹನ ಸವಾರರಿಗೆ ಅನುಕೂಲ ಕಲ್ಪಿಸಲು ಈ ಹೈಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ. ಕೆಜಿಎಫ್ ನಗರವನ್ನು ಸುರಕ್ಷಿತ ಮತ್ತು ಸುಂದರ ನಗರವನ್ನಾಗಿ ರೂಪುಗೊಳಿಸಲು ಹಂತ ಹಂತವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು. ಸ್ಥಳೀಯ ನಿವಾಸಿಗಳು ಶಾಸಕರ ಈ ಜನಪರ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.
ಪಿಂಚಣಿ ಹಾಗೂ ಬಿಪಿಎಲ್ ಕಾರ್ಡ್ ಸಮಸ್ಯೆ ಪರಿಹಾರಕ್ಕೆ ಭರವಸೆ: ರದ್ದಾಗಿರುವ ಪಿಂಚಣಿ ಹಾಗೂ ಬಿಪಿಎಲ್ ಕಾರ್ಡ್ಗಳ ಕುರಿತು ಮಾತನಾಡಿದ ಶಾಸಕರು, “ಶೀಘ್ರದಲ್ಲೇ ವಾರ್ಡಾ್ವರು ಸಭೆಗಳನ್ನು ಹಮ್ಮಿಕೊಂಡು ಸಾರ್ವಜನಿಕರಲ್ಲಿ ಸಂಪೂರ್ಣ ಅರಿವು ಮೂಡಿಸಲಾಗುವುದು.
ಅರ್ಹ ಫಲಾನುಭವಿಗಳಿಂದ ಸೂಕ್ತ ದಾಖಲೆಗಳನ್ನು ಸಂಗ್ರಹಿಸಿ, ರದ್ದಾಗಿರುವ ಯೋಜನೆಗಳು ಹಾಗೂ ಸೌಲಭ್ಯಗಳು ಪುನಃ ಆರಂಭವಾಗುವಂತೆ ಮಾಡಲು ತಕ್ಷಣದ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.ನಗರದ ಮೂಲಭೂತ ಸೌಕರ್ಯಕ್ಕೆ ಒತ್ತು: ಕೆಜಿಎಫ್ ನಗರ ಪ್ರದೇಶದಲ್ಲಿ ರಾತ್ರಿ ವೇಳೆಯ ಸಂಚಾರವನ್ನು ಸುರಕ್ಷಿತವಾಗಿಸಲು ಮತ್ತು ಸಾರ್ವಜನಿಕರ ದೂರುಗಳಿಗೆ ಸ್ಪಂದಿಸಲು ಹೈಮಾಸ್ಟ್ ದೀಪಗಳ ಅಳವಡಿಕೆ ಮಹತ್ವದ ಹೆಜ್ಜೆಯಾಗಿದೆ. ಇದು ಕೇವಲ ಬೆಳಕಿನ ವ್ಯವಸ್ಥೆಯಲ್ಲ, ಬದಲಿಗೆ ನಗರದ ಸೌಂದರ್ಯೀಕರಣ ಮತ್ತು ಸುರಕ್ಷತೆಗೆ ನೀಡುತ್ತಿರುವ ಆದ್ಯತೆಯಾಗಿದೆ ಎಂದು ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸನ್ ಹೇಳಿದರು.ಮಹಿಳಾ ಮತ್ತು ಜನಪ್ರತಿನಿಧಿಯ ಸಕ್ರಿಯತೆ: ಶಾಸಕಿ ಎಂ. ರೂಪಕಲಾ ಅವರು ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳಿಗೆ ನಿರಂತರವಾಗಿ ಚಾಲನೆ ನೀಡುತ್ತಿರುವುದು ಅವರ ಕಾರ್ಯತತ್ಪರತೆಯನ್ನು ಬಿಂಬಿಸುತ್ತದೆ. ಸ್ಥಳೀಯ ಜನರಿಗೆ ಕೊಟ್ಟ ಮಾತಿನಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ ಎಂಬುದಕ್ಕೆ ಈ ಕಾರ್ಯಕ್ರಮ ಉದಾಹರಣೆಯಾಗಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷೆ ಇಂದಿರಾ ಗಾಂಧಿ ಹೇಳಿದರು.ಸಾರ್ವಜನಿಕ ಸುರಕ್ಷತೆ ಮತ್ತು ಅಪರಾಧ ತಡೆ: ಪ್ರಮುಖ ವೃತ್ತಗಳು ಮತ್ತು ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಹೈಮಾಸ್ಟ್ ದೀಪಗಳ ಅಳವಡಿಕೆಯಿಂದ ರಾತ್ರಿ ವೇಳೆ ಸಂಚರಿಸುವ ಮಹಿಳೆಯರು, ಮಕ್ಕಳು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಭದ್ರತೆ ದೊರೆಯಲಿದೆ. ಇದು ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಹಕಾರಿಯಾಗುತ್ತದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ ಹೇಳಿದರು. ಸ್ಥಳೀಯ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ವಾರ್ಡ್ ನಾಗರಿಕರು ಬೃಹತ್ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಹೈಮಾಸ್ಟ್ ವಿದ್ಯುತ್ ದೀಪಗಳಿಗೆ ಚಾಲನೆ ನೀಡಿದ ಶಾಸಕಿ ಎಂ. ರೂಪಕಲಾ ಶಶಿಧರ್



