ಚಿಕ್ಕಬಳ್ಳಾಪುರ: ಡೆಂಘೀ ಸೇರಿದಂತೆ ಹಲವು ಕಾಯಿಲೆಗಳ ಭೀತಿ ಎದುರಿಸುತ್ತಿದ್ದ ಜಿಲ್ಲೆ ಇದೀಗಝೀಕಾ ವೈರಸ್ ಆತಂಕವನ್ನೂ ಎದುರಿಸುವಂತಾ ಗಿದ್ದು, ನಾಗರಿಕರನ್ನು ಸಾಂಕ್ರಾಮಿಕ ಕಾಯಿಲೆಗಳಿಂದ ದೂರ ಮಾಡಲು 5ನೇ ವಾರ್ಡಿನಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿದೆ.
5ನೇ ವಾರ್ಡಿನ ಪೊಲೀಸ್ ವಸತಿ ಗೃಹ ಬಿ.ಬ್ಲಾಕ್ಹಿಂಭಾಗದಲ್ಲಿ ವ್ಯಾಪಕವಾಗಿ ಬೆಳೆದಿದ್ದ ಗಿಡ ಗಂಟಿಗಳನ್ನು ಗುರುವಾರವೇ ಸ್ವಚ್ಛಗೊಳಿಸಲಾಗಿದ್ದು, ಚರಂಡಿಗಳನ್ನೂ ಸ್ವಚ್ಛಗೊಳಿಸಲಾಗುತ್ತಿದೆ. ವಾರ್ಡಿನಾದ್ಯಂತ ಎಲ್ಲಿಯೂ ಸೊಳ್ಳೆಗಳ ಆಶ್ರಯ ತಾಣವಾದ ನೀರು ನಿಲ್ಲದಂತೆ ಎಚ್ಚರ ವಹಿಸಲಾಗಿದ್ದು, ಜನರಲ್ಲಿಯೂ ಶೇಖರಿಸಿದ ನೀರಿನ ಮೇಲೆ ಮುಚ್ವಿಡುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. ವಾರ್ಡಿನಾದ್ಯಂತ ಇರುವ ಚರಂಡಿಗಳ ಸ್ವಚ್ಛತೆ, ಗಿಡ ಗಂಟಿಗಳ ತೆರುವು ಮಾಡಲಾಗಿದೆ.
ಮುಖ್ಯವಾಗಿ ಕೊಳಚೆ ಪ್ರದೇಶಗಳಲ್ಲಿರುವ ಚರಂಡಿಗಳನ್ನು ಸ್ವಚ್ಛಗೊಳಿಸಿ, ಬ್ಲೀಚಿಂಗ್ ಸಿಂಪಡಣೆ ಮಾಡಲಾಗಿದೆ.ಅಲ್ಲದೆ ವಾರ್ಡಿನಲ್ಲಿ ಈಗಾಗಲೇ ಹಲವು ಸುತ್ತು ಫಾಗಿಂಗ್ ಮಾಡಲಾಗಿದ್ದು, ಅದನ್ನು ಮುಂದುವರಿಸಲಾಗುವುದು. ನಾಗರಿಕರೂ ಸ್ವಚ್ಛತೆ ಮತ್ತು ಸೊಳ್ಳೆ ನಿಯಂತ್ರಣದ ಜಾಗೃತಿಗಳನ್ನು ಪಾಲಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವಂತೆ ಜಾಗೃತಿಮೂಡಿಸಲಾಗಿದೆ.
ವಾರ್ಡಿನಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಈಗಾಗಲೇ ಕೈಗೊಳ್ಳಲಾಗಿದ್ದು, ಈ ಜಾಗೃತಿಯನ್ನು ಮುಂದುವರಿಸಲಾಗುವುದು. ನಾಗರಿಕರೂ ಇದಕ್ಕೆ ಸಹಕರಿಸುವ ಮೂಲಕ ತಮ್ಮ ಆರೋಗ್ಯವನ್ನು ತಾವು ಕಾಪಾಡಿಕೊಳ್ಳಬೇಕೆಂದು ವಾರ್ಡಿನ ನಗರಸಭಾ ಸದಸ್ಯ ನಾಗರಾಜ್ ಜೆ. ಮನವಿ ಮಾಡಿದ್ದಾರೆ.