ಬೆಂಗಳೂರು: ಮಾಟಮಂತ್ರದಿAದ ಅಧಿಕಾರ ಕಳೆದುಕೊಳ್ಳುವುದು ಹಾಗೂ ಪಡೆಯುವ ಕಾಲ ಹೋಯಿತು. ಇದೀಗ ಮಾಟಮಂತ್ರ ನಡೆಯುವುದಿಲ್ಲ ಎಂದು ಮಾಗಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದ್ದಾರೆ.
ಮುಖ್ಯಮಂತ್ರಿಯವರಿಗೆ ಮಾಟಮಂತ್ರ ಮಾಡಿಸಿರಬಹುದು ಎಂದು ಶಾಸಕ ಕೆ.ಎನ್. ರಾಜಣ್ಣ ಹೇಳಿರುವ ಮಾತಿಗೆ ಪ್ರತಿಕ್ರಿಯಿಸಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಟಮಂತ್ರ ಮಾಡಿಸಿದ್ದಾರೆ. ಅದು ರಾಜಣ್ಣ ಅವರೇ ಮಾಡಿಸಿರಬಹುದು ಎಂದು ವ್ಯಂಗ್ಯವಾಡಿದ್ದಾರೆ. ಮುಖ್ಯಮಂತ್ರಿಯವರಿಗೆ ಆಪ್ತರೇ ರಾಜಣ್ಣ ಅವರು. ಅವರ ಅಕ್ಕಪಕ್ಕ ಇರುವವರೇ ಮಾಟಮಂತ್ರ ಮಾಡಿಸಿರಬೇಕು. ರಾಜಣ್ಣ ಅವರು ಈ ಮಾತನ್ನು ಕ್ಯಾಷುಯಲ್ ಆಗಿ ಹೇಳಿರಬೇಕು ಎಂದು ನನಗೆ ಅನಿಸುತ್ತದೆ. ಮಾಟಮಂತ್ರ ಮಾಡಿರುವ ಕುಟುಂಬಗಳು ಸರ್ವನಾಶವಾಗಿವೆ ಎಂದಿರುವ ಬಾಲಕೃಷ್ಣ, ಮಾಟಮಂತ್ರದ ಬಗ್ಗೆ ಸಿಎಂ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದರೆ ಹೇಳಲು ಸಾಧ್ಯವಿಲ್ಲ. ಸಿಎಂ ಅಷ್ಟು ದುರ್ಬಲರಾಗಿಲ್ಲ. ವಯೋಸಹಜವಾಗಿ ಕೆಲವು ಘಟನೆ ನಡೆದಿರಬಹುದು. ಅಧಿಕಾರ ನಡೆಸದಷ್ಟು ದುರ್ಬಲರಾಗಿಲ್ಲ ಸಿಎಂ. ಅಧಿಕಾರ ನಡೆಸುವ ಸಮರ್ಥತೆ, ಚಾಕಚಕ್ಯತೆ ಅವರಿಗಿದೆ.
ಮಾಟಮಂತ್ರ ನಡೆಯಲ್ಲ: ಬಾಲಕೃಷ್ಣ



